ಜೀವನದಲ್ಲಿ ಆನಂದವನ್ನು ಅನುಭವಿಸಲು ಬಿಡದವನು ಶನಿ ಎಂಬ ನಂಬಿಕೆ ಇದೆ. ,ಇದರಿಂದಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಒತ್ತಡ ಹಾಗೂ ಉದ್ವೇಗವನ್ನು ಅನುಭವಿಸುತ್ತೀರಿ.
ನಿಮಗೆ ಪ್ರತಿಭೆ ಇದ್ದರೂ ಹಿಂದಿನ ಜನ್ಮದ ಪರಿಣಾಮಗಳು ಈ ಜನ್ಮದಲ್ಲಿಯೂ ನಿಮಗೆ ಏನನ್ನೂ ಸಾಧಿಸಲು ಬಿಡುವುದಿಲ್ಲ. ನಿಮ್ಮ ಒಳ್ಳೆಯತನವನ್ನು ಯಾರೂ ಗುರುತಿಸುವುದಿಲ್ಲ ಹಾಗೂ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಶನಿದೋಷವಿದ್ದರೆ ಪ್ರೀತಿಯನ್ನು ಪಡೆಯಲು ಅಶಕ್ತರಾಗುತ್ತೀರಿ, ಶನಿ ದೋಷದಿಂದಾಗಿ ನೀವು ಆರೋಗ್ಯಕರ ಜೀವನವನ್ನು ನಡೆಸಲು ಅಶಕ್ತರಾಗುವಿರಿ. ಶನಿದೋಷದಿಂದಾಗಿ ಎಷ್ಟೇ ಹಣ ಸಂಪಾದಿಸಿದರೂ ಉಳಿತಾಯವಾಗದು.
ಶನಿದೋಷವು ನಿಮ್ಮ ಕೆಲಸವನ್ನು ಪೂರ್ತಿಯಾಗಿ ಮಾಡಲು ಬಿಡಲಾರದು ಅಥವಾ ನೀವೇ ಆ ಕೆಲಸಕ್ಕೆ ವಿರಾಮ ಹಾಕಬಹುದು ಅಥವಾ ಆ ಕೆಲಸವೇ ನಿಮ್ಮಿಂದ ದೂರವಾಗಬಹುದು. ಮಹಿಳೆಯರಿಗೆ ಶನಿದೋಷವಿದ್ದರೆ ತಂದೆಯಿಂದ ಪ್ರೀತಿಯನ್ನು ಪಡೆಯಲಾಗದು, ಪುರುಷರಿಗೆ ಶನಿದೋಷವಿದ್ದಲ್ಲಿ ತಾಯಿಯ ಪ್ರೀತಿಯನ್ನು ಪಡೆಯಲು ಸಾಧ್ಯವಾಗದು.
ಶನಿದೋಷ ನಿವಾರಣೆಗೆ ಪರಿಹಾರಗಳು
ಜೀವನದಲ್ಲಿ ಪ್ರೀತಿಯನ್ನು ಪಡೆಯಲು ಅಶಕ್ತರಾಗಿರುವವರು ಅಥವಾ ಪತಿಯ ಪ್ರೀತಿಯನ್ನು ಕಳೆದುಕೊಂಡಿರುವವರು ಶನಿದೋಷ ನಿವಾರಣೆಗೆ ಕಪ್ಪು ಎಳ್ಳು ಹಾಗೂ ಹಸುವಿನ ಹಾಲನ್ನು ಶಿವನಿಗೆ ಅರ್ಪಿಸಿ, ಸ್ವಲ್ಪ ಹಾಲಿಗೆ ಕಪ್ಪು ಎಳ್ಳನ್ನು ಬೆರೆಸಿಯೂ ಅರ್ಪಿಸಬಹುದು.
ಅಶ್ವತ್ಥ ಮರದ ಕೆಳಗೆ ಶಿವಲಿಂಗವನ್ನು ಇಟ್ಟು ಭಕ್ತಿಯಿಂದ ಪೂಜೆ ಮಾಡಬೇಕು
ಅಮವಾಸ್ಯೆಯಂದು ಪಿತ್ರದೋಷ ನಿವಾರಣೆಗೆ ಪರಿಹಾರ ಕ್ರಮಗಳನ್ನು ಮಾಡಿ
ಪುಷ್ಯಾ, ಅನುರಾಧಾ, ಉತ್ತರಾ ಹಾಗೂ ಭಾದ್ರಪದ ನಕ್ಷತ್ರವಿರುವ ದಿನ ಎಣ್ಣೆ ಅಥವಾ ಔಷಧಿಯನ್ನು ದಾನ ಮಾಡಿ. ಉಪ್ಪು, ಸಾಸಿವೆ ಹಾಗೂ ಎಳ್ಳನ್ನೂ ಇದೇ ನಕ್ಷತ್ರಗಳಿರುವ ದಿನ ದಾನ ಮಾಡಿ
ಶನಿದೋಷ ಪರಿಹಾರಕ್ಕಾಗಿ ಎಳ್ಳು, ಉದ್ದಿನಕಾಳು ಹಾಘೂ ಸಕ್ಕರೆಯನ್ನು ಬೆರೆಸಿ ಬೆಳಗ್ಗೆ ಇರುವೆಗಳಿಗೆ ಹಾಕಿ ಐದು ಉದ್ದಿನ ಕಾಳನ್ನು ಹರಿವ ನೀರಿನಲ್ಲಿ ಬಿಡಬೇಕು
ಬೆಳಗ್ಗಿನ ಉಪಾಹಾರಕ್ಕೆ ಮುನ್ನ ಕರಿಮೆಣಸನ್ನು ಅಗಿದು ತಿನ್ನಬೇಕು
ಕರಿಮೆಣಸು ಹಾಗೂ ಕಪ್ಪು ಉಪ್ಪನ್ನು ನೀವು ಸೇವಿಸುವ ಆಹಾರದಲ್ಲಿ ಬಳಸಿ
ಮಲಗುವ ಮುನ್ನ ಕೈ ಹಾಗೂ ಕಾಲಿನ ಉಗುರುಗಳಿಗೆ ಎಣ್ಣೆಯನ್ನು ಹಚ್ಚಬೇಕು
ಉದ್ದಿನ ಬೇಳೆಯಿಂದ ಮಾಡಿದ ತಿಂಡಿ, ಉದ್ದಿನ ಬೇಳೆಯ ಖಿಚಡಿಯನ್ನು ದಾನ ಮಾಡುವುದು ಒಳ್ಳೆಯದು
ಶನಿ ದೋಷದಿಂದಾಗಿ ವಾತ ಸಂಬಂಧೀ ಸಮಸ್ಯೆಯಿಂದಾಗಿ ಬೆನ್ನುನೋವು ಹಾಗೂ ತಲೆನೋವು ಉಂಟಾಗಬಹುದು. ಈ ಸಮಸ್ಯೆಯನ್ನು ನಿವಾರಿಸಲು ದಿನನಿತ್ಯ ಅನುಲೋಮ ವಿಲೋಮ ಪ್ರಾಣಾಯಾಮವನ್ನು ಮಾಡಿ.
ಶನಿ ಸ್ತ್ರೋತ್ರವನ್ನು ದಿನ ನಿತ್ಯ ಪಠಿಸಿ
ಒಡೆದು ಹೋಗಿರುವ ಮನೆಗೆ ಹೋಗಬೇಡಿ ಹಾಗೂ ಒಡೆದ ಮನೆಯಲ್ಲಿ ವಾಸಿಸಬೇಡಿ
ನಿಮ್ಮನ್ನು ಉನ್ನತೀಕರಿಸುವ ಯಾವುದನ್ನೂ ಸ್ವೀಕರಿಸಬೇಡಿ
ನಿಮ್ಮ ರಾಶಿಯಲ್ಲಿ ಶನಿ ಕೆಟ್ಟ ಸ್ಥಾನದಲ್ಲಿದ್ದರೆ ಮಾಂಸಾಹಾರ ಸೇವನೆ ಮಾಡಬಾರದು
ನಿಮ್ಮ ಜೀವನ ಸಂಗಾತಿಗೆ ಪ್ರೀತಿಯನ್ನು ನೀಡಿ, ಇಲ್ಲವಾದಲ್ಲಿ ಮುಂದೆ ತೊಂದರೆಯಾಗಬಹುದು
ಗುರುವಿನೊಂದಿಗೆ ದೇವಸ್ಥಾನದಲ್ಲಿ ಸತ್ಸಂಗದಲ್ಲಿ ಪಾಳ್ಗೊಳ್ಳಿ, ನಿಮಗೆ ಗುರುವಿಲ್ಲದಿದ್ದರೆ ದೇವಸ್ಥಾನದಲ್ಲಿ ಕುಳಿತುಕೊಂಡು ಅಲ್ಲಿ ನಡೆಯುವಂತಹ ಚರ್ಚೆಯಲ್ಲಿ ಪಾಲ್ಗೊಳ್ಳಿ
ನೀವು ನಷ್ಟವನ್ನು ಅನುಭವಿಸುತ್ತಿದರೂ ಕೂಡಾ ಯಾರನ್ನೂ ಮೋಸಗೊಳಿಸಬೇಡಿ, ಪ್ರಾಮಾಣಿಕವಾಗಿರಿ ಹಾಗೂ ಸುಳ್ಳು ಹೇಳಬೇಡಿ
ಮೂಲಧರ ಚಕ್ರವನ್ನು ಧ್ಯಾನಿಸಿ
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…