ಬೆಂಗಳೂರು: ಅಂಚೆ ಕಛೇರಿಗಳ ಮೂಲಕ ಗ್ರಾಹಕ ಸೇವೆಗಳನ್ನು ಪ್ರಾರಂಭಿಸಿದ ಎರಡು ತಿಂಗಳಲ್ಲಿ, ಕರ್ನಾಟಕವು ವಹಿವಾಟು ಮತ್ತು ಆದಾಯ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಶೇಷ ಉದ್ದೇಶದ ವಾಹನವಾದ ನಾಗರಿಕ ಸೇವಾ ಕೇಂದ್ರ(ಸಿಎಸ್ಸಿ) ಸಾಮಾನ್ಯ ಸೇವಾ ಕೇಂದ್ರದೊಂದಿಗಿನ ಒಪ್ಪಂದದ ಆಧಾರದ ಮೇಲೆ ಕಳೆದ ವರ್ಷ ಡಿಸೆಂಬರ್ 15 ರಿಂದ ರಾಜ್ಯದ ಒಟ್ಟು 1,701 ಅಂಚೆ ಕಚೇರಿಗಳ ಪೈಕಿ 851 ರಲ್ಲಿ ಶುರು ಮಾಡಲಾಯಿತು.
ಆರ್ಥಿಕ ಪರಿಸ್ಥಿತಿ ಹದಗೆಡಲು ಮೋದಿ ಸರ್ಕಾರದ ತಪ್ಪು ನಿರ್ವಹಣೆಯೇ ಕಾರಣ : ಕಾಂಗ್ರೆಸ್ ವಾಗ್ದಾಳಿ -Vishwanews24
ಈ ಸಿಎಸ್ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ. ಜಿ2ಸಿ ಸೇವೆಯಲ್ಲಿ ಪ್ಯಾನ್ ಕಾರ್ಡ್, ಇ-ಸ್ಟ್ಯಾಂಪಿಂಗ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ (ಡಿಜಿಟಲ್ ಲೈಫ್ ಸರ್ಟಿಫಿಕೇಟ್), ಇತ್ಯಾದಿ ಸೇವೆ ಸಿಗುತ್ತವೆ.
ಕರ್ನಾಟಕ ಸರ್ಕಲ್ನ ಬಿಸಿನೆಸ್ ಡೆವಲಪ್ಮೆಂಟ್ನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಎಪಿಎಂಜಿ) ವಿ ತಾರಾ, ‘ನಾವು ಸಿಎಸ್ಸಿಗಳ ಮೂಲಕ ಇಲ್ಲಿಯವರೆಗೆ ಸುಮಾರು 20,000 ವಹಿವಾಟುಗಳನ್ನು ನಡೆಸಿದ್ದೇವೆ. ನಮ್ಮ ಆದಾಯ ಸಂಗ್ರಹವು ಇಲ್ಲಿಯವರೆಗೆ 61,36,986 ರೂ.ಆಗಿದೆ. ನಾವು ಎರಡನೇ ಸ್ಥಾನದಲ್ಲಿದ್ದೇವೆ. ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಜಿ 2 ಸಿ ಮತ್ತು ಬಿ 2 ಸಿ ಸೇವೆಗಳನ್ನು ಒದಗಿಸುವ ಮೂಲಕ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಡಿಜಿಟಲ್ನಲ್ಲಿ ಎಲ್ಲರನ್ನೂ ಒಳಗೊಂಡ ಸಮಾಜವನ್ನು ರಚಿಸಲಾಗುತ್ತಿದೆ’ ಎಂದು ಹೇಳಿದರು.
ಮಾರ್ಚ್ 2021 ರ ವೇಳೆಗೆ ರಾಜ್ಯದ ಉಳಿದ 850 ಅಂಚೆ ಕಚೇರಿಗಳು ಈ ಸೇವೆಗಳನ್ನು ನೀಡಲಿವೆ ಎಂದು ಬೆಂಗಳೂರಿನ ಅಂಚೆ ಸೇವೆಗಳ ನಿರ್ದೇಶಕ ಕೆ. ರವೀಂದ್ರನ್ ಹೇಳಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…