ದೆಹಲಿ: ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಸಿನಿಮಾವು ಗೋವಾದಲ್ಲಿ ನಡೆಯಲಿರುವ 49ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ.
ಅಭಯ್ ಸಿಂಹ ನಿರ್ದೇಶನದ ತುಳು ಸಿನಿಮಾ ‘ಪಡ್ಡಾಯಿ’ ಆಯ್ಕೆಯಾಗಿದೆ. ಆದರೆ ಕನ್ನಡದ ಒಂದು ಸಿನಿಮಾ ಕೂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ತುಳು ಸಿನಿಮಾವೇ ಕರ್ನಾಟಕವನ್ನು ಪ್ರತಿನಿಧಿಸಲಿದೆ. 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಪಡ್ಡಾಯಿ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಲಭಿಸಿತ್ತು.
ತುಳು ಚಿತ್ರವೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಅಭಯ್ ಸಿಂಹ ತಿಳಿಸಿದರು. ಈ ವಿಭಾಗಕ್ಕೆ ಯಾವುದೇ ಕನ್ನಡ ಸಿನಿಮಾವು ಆಯ್ಕೆಯಾಗದೆ ತುಳು ಸಿನಿಮಾ ಆಯ್ಕೆಯಾಗಿದೆ.
ಜನಪ್ರಿಯ ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಹುಲ್ ರವೈಲ್ ಅವರಿದ್ದ 13 ಸದಸ್ಯರ ಸಮಿತಿಯು ಈ ಆಯ್ಕೆ ಮಾಡಿದೆ.
| ಸಿನಿಮಾದ ಹೆಸರು | ಭಾಷೆ | ನಿರ್ದೇಶಕರು | |
| 1 | ಓಲು | ಮಲಯಾಳಿ | ಶಾಜಿ ಎನ್ ಕರುಣ್ |
| 2 | ನಾಗರ್ ಕೀರ್ತನ್ | ಬಂಗಾಳಿ | ಕೌಶಿಕ್ ಗಂಗೂಲಿ |
| 3 | ಸಾ | ಬಂಗಾಳಿ | ಅರ್ಜಿತ್ ಸಿಂಗ್ |
| 4 | ಉಮಾ | ಬಂಗಾಳಿ | ಶ್ರೀಜಿತ್ ಮುಖರ್ಜಿ |
| 5 | ಅಭ್ಯಕ್ತೋ | ಬಂಗಾಳಿ | ಅರ್ಜುನ್ ದತ್ತಾ |
| 6 | ಉರೋನ್ಚೋಂಡಿ | ಬಂಗಾಳಿ | ಅಭಿಷೇಕ್ ಸಾಹಾ |
| 7 | ಅಕ್ಟೋಬರ್ | ಹಿಂದಿ | ಶೂಜಿತ್ ಸಿರ್ಕಾರ್ |
| 8 | ಬೋರ್ | ಹಿಂದಿ | ಕಾಮಾಕ್ಯ ನಾರಾಯಣ್ ಸಿಂಗ್ |
| 9 | ಸಿಂಜರ್ | ಜಸಾರಿ | ಪಂಪಲ್ಲಿ |
| 10 | ವಾಕಿಂಗ್ ವಿತ್ ವೈಂಡ್ | ಲಡಕ್ಕಿ | ಪ್ರವೀಣ್ ಮೋರ್ಚಾಲೆ |
| 11 | ಭಯಾನಕಂ | ಮಲಯಾಳಿ | ಜಯರಾಜ್ |
| 12 | ಮಕ್ಕಣ್ಣ | ಮಲಯಾಳಿ | ರಹೀಮ್ ಖಾದರ್ |
| 13 | ಪೂಮಾರಾಮ್ | ಮಲಯಾಳಿ | ಅಬ್ರೀದ್ ಶೈನ್ |
| 14 | ಸುದಾನಿ ಫ್ರಮ್ ನೈಜೀರಿಯ | ಮಲಯಾಳಿ | ಜಕಾರಿಯಾ |
| 15 | ಏ ಮಾ ಯೋವೆ | ಮಲಯಾಳಿ | ಲಿಜೊ ಜೋಸ್ ಪೆಲ್ಲಿಸೆರಿ |
| 16 | ಧಾಪ್ಪ | ಮರಾಠಿ | ನಿಪುಣ್ ಅವಿನಾಶ್ ಧರ್ಮಾಧಿಕಾರಿ |
| 17 | ಆಮಿ ದೋಗಿ | ಮರಾಠಿ | ಪ್ರತಿಮಾ ಜೋಶಿ |
| 18 | ಟು ಲೆಟ್ | ತಮಿಳು | ಕೆಜಿಯಾನ್ ರಾ |
| 19 | ಬಾರಮ್ | ತಮಿಳು | ಪ್ರಿಯಾ ಕೃಷ್ಣಸ್ವಾಮಿ |
| 20 | ಪೆರಿಯರಮ್ ಪೆರುಮಾಳ್ ಬಿಎ ಬಿಎಲ್ | ತಮಿಳು | ಮರಿ ಸೆಲ್ವಾರಾಜ್ |
| 21 | ಪೆರಂಬು | ತಮಿಳು | ರಾಮ್ |
| 22 | ಪಡ್ಡಾಯಿ | ತುಳು | ಅಭಯಾ ಸಿಂಹ |
| 23 | ಮಹಾನಟಿ | ತೆಲುಗು | ನಾಗಶ್ವಿನ್ |
| 24 | ಟೈಗರ್ ಜಿಂದಾ ಹೈ | ಹಿಂದಿ | ಅಲಿ ಅಬ್ಬಾಸ್ ಜಾಫರ್ |
| 25 | ಪದ್ಮಾವತ್ | ಹಿಂದಿ | ಸಂಜಯ್ ಲೀಲಾ ಬನ್ಸಾಲಿ |
| 26 | ರಾಜಿ | ಹಿಂದಿ | ಮೇಘನಾ ಗುಲ್ಜರ್ |
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…