desha

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತುಳು ಭಾಷೆಯ ‘ಪಡ್ಡಾಯಿ’ ಆಯ್ಕೆ ; ರಾಜ್ಯ ಪ್ರತಿನಿಧಿಸಲಿದೆ ತುಳು ಸಿನಿಮಾ

ದೆಹಲಿ: ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಸಿನಿಮಾವು ಗೋವಾದಲ್ಲಿ ನಡೆಯಲಿರುವ 49ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ.

ಅಭಯ್ ಸಿಂಹ ನಿರ್ದೇಶನದ ತುಳು ಸಿನಿಮಾ ‘ಪಡ್ಡಾಯಿ’ ಆಯ್ಕೆಯಾಗಿದೆ. ಆದರೆ ಕನ್ನಡದ ಒಂದು ಸಿನಿಮಾ ಕೂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ತುಳು ಸಿನಿಮಾವೇ ಕರ್ನಾಟಕವನ್ನು ಪ್ರತಿನಿಧಿಸಲಿದೆ. 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಪಡ್ಡಾಯಿ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಲಭಿಸಿತ್ತು.

ತುಳು ಚಿತ್ರವೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಅಭಯ್ ಸಿಂಹ ತಿಳಿಸಿದರು. ಈ ವಿಭಾಗಕ್ಕೆ ಯಾವುದೇ ಕನ್ನಡ ಸಿನಿಮಾವು ಆಯ್ಕೆಯಾಗದೆ ತುಳು ಸಿನಿಮಾ ಆಯ್ಕೆಯಾಗಿದೆ.

ಜನಪ್ರಿಯ ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಹುಲ್ ರವೈಲ್ ಅವರಿದ್ದ 13 ಸದಸ್ಯರ ಸಮಿತಿಯು ಈ ಆಯ್ಕೆ ಮಾಡಿದೆ.

ಸಿನಿಮಾದ ಹೆಸರು

ಭಾಷೆ ನಿರ್ದೇಶಕರು
1 ಓಲು ಮಲಯಾಳಿ ಶಾಜಿ ಎನ್ ಕರುಣ್
2 ನಾಗರ್ ಕೀರ್ತನ್ ಬಂಗಾಳಿ ಕೌಶಿಕ್ ಗಂಗೂಲಿ
3 ಸಾ ಬಂಗಾಳಿ ಅರ್ಜಿತ್ ಸಿಂಗ್
4 ಉಮಾ ಬಂಗಾಳಿ ಶ್ರೀಜಿತ್ ಮುಖರ್ಜಿ
5 ಅಭ್ಯಕ್ತೋ ಬಂಗಾಳಿ ಅರ್ಜುನ್ ದತ್ತಾ
6 ಉರೋನ್‌ಚೋಂಡಿ ಬಂಗಾಳಿ ಅಭಿಷೇಕ್ ಸಾಹಾ
7 ಅಕ್ಟೋಬರ್ ಹಿಂದಿ ಶೂಜಿತ್ ಸಿರ್ಕಾರ್
8 ಬೋರ್ ಹಿಂದಿ ಕಾಮಾಕ್ಯ ನಾರಾಯಣ್ ಸಿಂಗ್
9 ಸಿಂಜರ್ ಜಸಾರಿ ಪಂಪಲ್ಲಿ
10 ವಾಕಿಂಗ್ ವಿತ್ ವೈಂಡ್ ಲಡಕ್ಕಿ ಪ್ರವೀಣ್ ಮೋರ್ಚಾಲೆ
11 ಭಯಾನಕಂ ಮಲಯಾಳಿ ಜಯರಾಜ್
12 ಮಕ್ಕಣ್ಣ ಮಲಯಾಳಿ ರಹೀಮ್ ಖಾದರ್
13 ಪೂಮಾರಾಮ್ ಮಲಯಾಳಿ ಅಬ್ರೀದ್ ಶೈನ್
14 ಸುದಾನಿ ಫ್ರಮ್ ನೈಜೀರಿಯ ಮಲಯಾಳಿ ಜಕಾರಿಯಾ
15 ಏ ಮಾ ಯೋವೆ ಮಲಯಾಳಿ ಲಿಜೊ ಜೋಸ್ ಪೆಲ್ಲಿಸೆರಿ
16 ಧಾಪ್ಪ ಮರಾಠಿ ನಿಪುಣ್ ಅವಿನಾಶ್ ಧರ್ಮಾಧಿಕಾರಿ
17 ಆಮಿ ದೋಗಿ ಮರಾಠಿ ಪ್ರತಿಮಾ ಜೋಶಿ
18 ಟು ಲೆಟ್ ತಮಿಳು ಕೆಜಿಯಾನ್ ರಾ
19 ಬಾರಮ್ ತಮಿಳು ಪ್ರಿಯಾ ಕೃಷ್ಣಸ್ವಾಮಿ
20 ಪೆರಿಯರಮ್ ಪೆರುಮಾಳ್ ಬಿಎ ಬಿಎಲ್ ತಮಿಳು ಮರಿ ಸೆಲ್ವಾರಾಜ್
21 ಪೆರಂಬು ತಮಿಳು ರಾಮ್
22 ಪಡ್ಡಾಯಿ   ತುಳು ಅಭಯಾ ಸಿಂಹ
23 ಮಹಾನಟಿ ತೆಲುಗು ನಾಗಶ್ವಿನ್
24 ಟೈಗರ್ ಜಿಂದಾ ಹೈ ಹಿಂದಿ ಅಲಿ ಅಬ್ಬಾಸ್ ಜಾಫರ್
25 ಪದ್ಮಾವತ್ ಹಿಂದಿ ಸಂಜಯ್ ಲೀಲಾ ಬನ್ಸಾಲಿ
26 ರಾಜಿ ಹಿಂದಿ ಮೇಘನಾ ಗುಲ್ಜರ್

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

19 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago