Featured

ಅದಾನಿ ಯುಪಿಸಿಎಲ್ ಗಿಟ್ಟಿಸಿದ ಎಲ್ಲಾ ಅನುಮತಿಗಳೂ ಅಕ್ರಮ : ಐದು ಕೋಟಿ ದಂಡ ಸುಪ್ರೀಂ ಹಸಿರು ಪೀಠದಿಂದ ಮಹತ್ವದ ತೀರ್ಪು – Vishwanews24

ಉಡುಪಿ: ಉಡುಪಿ ಪಡುಬಿದ್ರಿಯ ಅದಾನಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀಡಿದ ಪರವಾನಗಿಗಳೆಲ್ಲವೂ ಅಕ್ರಮವಾಗಿದ್ದು 2800 ಮೆ. ವಾ. ಘಟಕ ವಿಸ್ತರಣಾ ಪ್ರಸ್ತಾವನೆಯನ್ನು ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ಪೀಠ ಅಮಾನತು ಮಾಡಿ  ಆದೇಶ ಹೊರಡಿಸಿದೆ.

ಅದಾನಿ ಯುಪಿಸಿಎಲ್ ಮಧ್ಯಂತರ 5 ಕೋಟಿ ರೂ. ಪರಿಸರ ಪರಿಹಾರ ದಂಡವನ್ನು ಒಂದು ತಿಂಗಳೊಳಗೆ ಕೇಂದ್ರ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ) ಯಲ್ಲಿ ಠೇವಣಿಯಾಗಿಡಲು ಆದೇಶಿಸಿದೆ ಎಂದು ನಂದಿಕೂರು ಜನಜಾಗೃತಿ ಸಮಿತಿ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾನಿ ಯುಪಿಸಿಎಲ್ ಘಟಕದಿಂದಾದ ಪರಿಸರ ಹಾನಿ ಅಧ್ಯಯನಕ್ಕೆ ಉನ್ನತ ತಜ್ಞರ ಸಮಿತಿ ರಚಿಸಿದ್ದು ಪರಿಸರಕ್ಕಾದ ಹಾನಿಯ ಅಧ್ಯಯನ ಕೈಗೊಂಡು ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು. ಇದರ ಆಧಾರದಲ್ಲಿ ಯುಪಿಸಿಎಲ್ ಪಾವತಿಸಬೇಕಾದ ಪರಿಹಾರವನ್ನು ಎನ್‍ಜಿಟಿ ನಿರ್ಧರಿಸಲಿದೆ.

ದಾವೆದಾರ ಸಂಸ್ಥೆ ನಂದಿಕೂರು ಜನಜಾಗೃತಿ ಸಮಿತಿಗೆ ಒಂದು ಲಕ್ಷ ರೂ. ದಾವೆ ವೆಚ್ಚವನ್ನು ಅದಾನಿ ಯುಪಿಸಿಎಲ್ ಪಾವತಿಸಬೇಕು. ರಾಜ್ಯ ಸರಕಾರವು ಕರಾವಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಸಿ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಲು ಎನ್‍ಜಿಟಿ ನಿರ್ದೇಶನ ನೀಡಿದೆ.

ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ 2600 ಮೆ. ವಾ. ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು 2*800ಮೆ. ವಾ. ವಿಸ್ತರಣೆಗೆ 2017, ಆ. 1ರಂದು ಕೇಂದ್ರ ಪರಿಸರ ಪರವಾನಗಿ ನೀಡಿದ್ದು ಇದನ್ನು ಎನ್‍ಜಿಟಿ ಅಮಾನತಿನಲ್ಲಿಟ್ಟಿದೆ.

1997, ಮಾ. 2ರಂದು ನೀಡಿದ ಪರಿಸರ ಪರವಾನಗಿಗೆ ಕಡ್ಡಾಯವಾದ ನಿಯಮ, ಕಾನೂನು ಪಾಲಿಸಿಲ್ಲ. ಐದು ವರ್ಷಗಳಲ್ಲಿ ಘಟಕ ಸ್ಥಾಪಿಸದಿದ್ದರೂ ಪರಿಸರ ಪರವಾನಗಿ ವಿಸ್ತರಿಸಿದ್ದು 2004, ಅ. 5ರಂದು ಪರಿಸರ ಪರವಾನಗಿ ರದ್ದಾಗಿದೆ. ಆದರೆ 2005, ಜ. 31ರಂದು ಮತ್ತೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ.

ಸಾರ್ವಜನಿಕ ಅಹವಾಲು ಸ್ವೀಕರಿಸಿಯೇ ಇಲ್ಲ. ಪರಿಸರ ಕಾನೂನುಗಳನ್ನು ಕಡ್ಡಾಯವಾಗಿ ಉಲ್ಲಂಘಿಸಲಾಗಿದ್ದು ಎಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರದ ಸ್ಥಿತಿಗತಿ ಮತ್ತು ಜನರ ದೈನಂದಿನ ಜೀವನದ ಗುಣಮಟ್ಟದ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ತಜ್ಞರ ತಂಡ ನಡೆಸಿದ ಅಧ್ಯಯನ, ತಾಂತ್ರಿಕ ವರದಿ ನೀಡಿದ ಎಚ್ಚರಿಕೆ ಆಧಾರದಲ್ಲಿ ನೀರು, ಮಣ್ಣು, ಗಾಳಿ ಮಲಿನವಾದ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಕಲ್ಲಿದ್ದಲು ಬೂದಿಯಿಂದ ಧಾನ್ಯ, ಮಲ್ಲಿಗೆ ಹೂವು, ತೋಟಗಾರಿಕಾ ಬೆಳೆಯೂ ಹಾಳಾಗಿದ್ದು ಎರಡು ಕಿ. ಮೀ. ವ್ಯಾಪ್ತಿಯಲ್ಲಿ ಪರಿಣಾಮ ಬೀರಿದೆ.

ಅದಾನಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರವನ್ನು ಈ ಹಂತದಲ್ಲಿ ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಮುಚ್ಚಿದರೂ ಉದ್ದೇಶ ಸಫಲವಾಗದು ಎಂದು ನ್ಯಾಯಾೀಶರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಸಮಿತಿ ನೇಮಕ: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿಗಳು, ಚೆನ್ನೈ ಐಐಟಿಯ ಹಿರಿಯ ಪ್ರತಿನಿಗಳು, ಬೆಂಗಳೂರು ಐಐಟಿಯ ಹಿರಿಯ ವಿಜ್ಞಾನಿಗಳನ್ನು ಉನ್ನತ ತಜ್ಞರ ಸಮಿತಿ ಒಳಗೊಂಡಿದೆ.

ನಂದಿಕೂರು ಜನಜಾಗೃತಿ ಸಮಿತಿ 2004ರಲ್ಲಿ ರಾಷ್ಟ್ರೀಯ ಪರಿಸರ ಸಕ್ಷಮ ಪ್ರಾಕಾರಕ್ಕೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿತ್ತು. 2005ರಲ್ಲಿ ಕರ್ನಾಟಕ ಹೈಕೋರ್ಟು ಮೊರೆ ಹೋಗಿದ್ದು ಪ್ರಕರಣವನ್ನು ರಾಷ್ಟ್ರೀಯ ಹಸಿರು ಪೀಠದ ಚೆನ್ನೈ ವಲಯಕ್ಕೆ 2012ರಲ್ಲಿ ವರ್ಗಾಯಿಸಲಾಗಿತ್ತು.

ಚೆನ್ನೈನ ವಲಯ ಮಂಡಳಿಯಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ಹೊಸದಿಲ್ಲಿಗೆ ಪ್ರಕರಣ ವರ್ಗಾಯಿಸಿದ್ದು ಕೊನೆಗೂ ನ್ಯಾಯಯುತ ಆದೇಶ ಹೊರಬಿದ್ದಿದೆ.
ರಾಜ್ಯಕ್ಕೆ ಅದಾನಿ ಯುಪಿಸಿಎಲ್ ಖಾಸಗಿ ಸಂಸ್ಥೆ ಉತ್ಪಾದಿಸುವ ವಿದ್ಯುತ್ತಿನ ಅಗತ್ಯವೇ ಇಲ್ಲ. 2018, ಜು. 31ಕ್ಕೆ ನೀಡಿದ ಇಂಧನ ಇಲಾಖೆಯ ಮಾಹಿತಿ ಪ್ರಕಾರ 27,176ಮೆ. ವಾ. ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಪವನ ವಿದ್ಯುತ್ 4,713.26ಮೆ. ವಾ., ಸೌರ ವಿದ್ಯುತ್ 5,172ಮೆ. ವಾ., ಕರಾವಳಿಯಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಮೂರ್ಖ ನಿರ್ಧಾರವಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಕೇರಳದ ಗ್ರಿಡ್ ಮೂಲಕ ಅನ್ಯ ರಾಜ್ಯಗಳಿಗೆ ವಿದ್ಯುತ್ ಮಾರುವ ನಿಟ್ಟಿನಲ್ಲಿ ನೂತನ ಸರಬರಾಜು ಲೈನನ್ನು ಅದಾನಿ ಯುಪಿಸಿಎಲ್ ಅಳವಡಿಸಲು ಉದ್ದೇಶಿಸಿದೆ.

ರಾಜ್ಯ ಸರಕಾರ ಪರಿಸರಕ್ಕೆ ಹಾನಿ ಮಾಡುತ್ತಿರುವ ಯುಪಿಸಿಎಲ್ ಘಟಕ ಮುಚ್ಚಿಸಲು ನಿರ್ದೇಶನ ನೀಡಬೇಕು ಎಂದು ನಂದಿಕೂರು ಜನಜಾಗೃತಿ ಸಮಿತಿ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ..

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

6 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

6 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

6 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

7 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

7 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

8 hours ago