Featured

ಅದಾನಿ ಯುಪಿಸಿಎಲ್ ಗಿಟ್ಟಿಸಿದ ಎಲ್ಲಾ ಅನುಮತಿಗಳೂ ಅಕ್ರಮ : ಐದು ಕೋಟಿ ದಂಡ ಸುಪ್ರೀಂ ಹಸಿರು ಪೀಠದಿಂದ ಮಹತ್ವದ ತೀರ್ಪು – Vishwanews24

ಉಡುಪಿ: ಉಡುಪಿ ಪಡುಬಿದ್ರಿಯ ಅದಾನಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ನೀಡಿದ ಪರವಾನಗಿಗಳೆಲ್ಲವೂ ಅಕ್ರಮವಾಗಿದ್ದು 2800 ಮೆ. ವಾ. ಘಟಕ ವಿಸ್ತರಣಾ ಪ್ರಸ್ತಾವನೆಯನ್ನು ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ಪೀಠ ಅಮಾನತು ಮಾಡಿ  ಆದೇಶ ಹೊರಡಿಸಿದೆ.

ಅದಾನಿ ಯುಪಿಸಿಎಲ್ ಮಧ್ಯಂತರ 5 ಕೋಟಿ ರೂ. ಪರಿಸರ ಪರಿಹಾರ ದಂಡವನ್ನು ಒಂದು ತಿಂಗಳೊಳಗೆ ಕೇಂದ್ರ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ) ಯಲ್ಲಿ ಠೇವಣಿಯಾಗಿಡಲು ಆದೇಶಿಸಿದೆ ಎಂದು ನಂದಿಕೂರು ಜನಜಾಗೃತಿ ಸಮಿತಿ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾನಿ ಯುಪಿಸಿಎಲ್ ಘಟಕದಿಂದಾದ ಪರಿಸರ ಹಾನಿ ಅಧ್ಯಯನಕ್ಕೆ ಉನ್ನತ ತಜ್ಞರ ಸಮಿತಿ ರಚಿಸಿದ್ದು ಪರಿಸರಕ್ಕಾದ ಹಾನಿಯ ಅಧ್ಯಯನ ಕೈಗೊಂಡು ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು. ಇದರ ಆಧಾರದಲ್ಲಿ ಯುಪಿಸಿಎಲ್ ಪಾವತಿಸಬೇಕಾದ ಪರಿಹಾರವನ್ನು ಎನ್‍ಜಿಟಿ ನಿರ್ಧರಿಸಲಿದೆ.

ದಾವೆದಾರ ಸಂಸ್ಥೆ ನಂದಿಕೂರು ಜನಜಾಗೃತಿ ಸಮಿತಿಗೆ ಒಂದು ಲಕ್ಷ ರೂ. ದಾವೆ ವೆಚ್ಚವನ್ನು ಅದಾನಿ ಯುಪಿಸಿಎಲ್ ಪಾವತಿಸಬೇಕು. ರಾಜ್ಯ ಸರಕಾರವು ಕರಾವಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಸಿ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಲು ಎನ್‍ಜಿಟಿ ನಿರ್ದೇಶನ ನೀಡಿದೆ.

ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ 2600 ಮೆ. ವಾ. ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು 2*800ಮೆ. ವಾ. ವಿಸ್ತರಣೆಗೆ 2017, ಆ. 1ರಂದು ಕೇಂದ್ರ ಪರಿಸರ ಪರವಾನಗಿ ನೀಡಿದ್ದು ಇದನ್ನು ಎನ್‍ಜಿಟಿ ಅಮಾನತಿನಲ್ಲಿಟ್ಟಿದೆ.

1997, ಮಾ. 2ರಂದು ನೀಡಿದ ಪರಿಸರ ಪರವಾನಗಿಗೆ ಕಡ್ಡಾಯವಾದ ನಿಯಮ, ಕಾನೂನು ಪಾಲಿಸಿಲ್ಲ. ಐದು ವರ್ಷಗಳಲ್ಲಿ ಘಟಕ ಸ್ಥಾಪಿಸದಿದ್ದರೂ ಪರಿಸರ ಪರವಾನಗಿ ವಿಸ್ತರಿಸಿದ್ದು 2004, ಅ. 5ರಂದು ಪರಿಸರ ಪರವಾನಗಿ ರದ್ದಾಗಿದೆ. ಆದರೆ 2005, ಜ. 31ರಂದು ಮತ್ತೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ.

ಸಾರ್ವಜನಿಕ ಅಹವಾಲು ಸ್ವೀಕರಿಸಿಯೇ ಇಲ್ಲ. ಪರಿಸರ ಕಾನೂನುಗಳನ್ನು ಕಡ್ಡಾಯವಾಗಿ ಉಲ್ಲಂಘಿಸಲಾಗಿದ್ದು ಎಲ್ಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರದ ಸ್ಥಿತಿಗತಿ ಮತ್ತು ಜನರ ದೈನಂದಿನ ಜೀವನದ ಗುಣಮಟ್ಟದ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ತಜ್ಞರ ತಂಡ ನಡೆಸಿದ ಅಧ್ಯಯನ, ತಾಂತ್ರಿಕ ವರದಿ ನೀಡಿದ ಎಚ್ಚರಿಕೆ ಆಧಾರದಲ್ಲಿ ನೀರು, ಮಣ್ಣು, ಗಾಳಿ ಮಲಿನವಾದ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಕಲ್ಲಿದ್ದಲು ಬೂದಿಯಿಂದ ಧಾನ್ಯ, ಮಲ್ಲಿಗೆ ಹೂವು, ತೋಟಗಾರಿಕಾ ಬೆಳೆಯೂ ಹಾಳಾಗಿದ್ದು ಎರಡು ಕಿ. ಮೀ. ವ್ಯಾಪ್ತಿಯಲ್ಲಿ ಪರಿಣಾಮ ಬೀರಿದೆ.

ಅದಾನಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರವನ್ನು ಈ ಹಂತದಲ್ಲಿ ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಮುಚ್ಚಿದರೂ ಉದ್ದೇಶ ಸಫಲವಾಗದು ಎಂದು ನ್ಯಾಯಾೀಶರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಸಮಿತಿ ನೇಮಕ: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿಗಳು, ಚೆನ್ನೈ ಐಐಟಿಯ ಹಿರಿಯ ಪ್ರತಿನಿಗಳು, ಬೆಂಗಳೂರು ಐಐಟಿಯ ಹಿರಿಯ ವಿಜ್ಞಾನಿಗಳನ್ನು ಉನ್ನತ ತಜ್ಞರ ಸಮಿತಿ ಒಳಗೊಂಡಿದೆ.

ನಂದಿಕೂರು ಜನಜಾಗೃತಿ ಸಮಿತಿ 2004ರಲ್ಲಿ ರಾಷ್ಟ್ರೀಯ ಪರಿಸರ ಸಕ್ಷಮ ಪ್ರಾಕಾರಕ್ಕೆ ಸಲ್ಲಿಸಿದ್ದ ಮನವಿ ತಿರಸ್ಕೃತವಾಗಿತ್ತು. 2005ರಲ್ಲಿ ಕರ್ನಾಟಕ ಹೈಕೋರ್ಟು ಮೊರೆ ಹೋಗಿದ್ದು ಪ್ರಕರಣವನ್ನು ರಾಷ್ಟ್ರೀಯ ಹಸಿರು ಪೀಠದ ಚೆನ್ನೈ ವಲಯಕ್ಕೆ 2012ರಲ್ಲಿ ವರ್ಗಾಯಿಸಲಾಗಿತ್ತು.

ಚೆನ್ನೈನ ವಲಯ ಮಂಡಳಿಯಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ಹೊಸದಿಲ್ಲಿಗೆ ಪ್ರಕರಣ ವರ್ಗಾಯಿಸಿದ್ದು ಕೊನೆಗೂ ನ್ಯಾಯಯುತ ಆದೇಶ ಹೊರಬಿದ್ದಿದೆ.
ರಾಜ್ಯಕ್ಕೆ ಅದಾನಿ ಯುಪಿಸಿಎಲ್ ಖಾಸಗಿ ಸಂಸ್ಥೆ ಉತ್ಪಾದಿಸುವ ವಿದ್ಯುತ್ತಿನ ಅಗತ್ಯವೇ ಇಲ್ಲ. 2018, ಜು. 31ಕ್ಕೆ ನೀಡಿದ ಇಂಧನ ಇಲಾಖೆಯ ಮಾಹಿತಿ ಪ್ರಕಾರ 27,176ಮೆ. ವಾ. ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಪವನ ವಿದ್ಯುತ್ 4,713.26ಮೆ. ವಾ., ಸೌರ ವಿದ್ಯುತ್ 5,172ಮೆ. ವಾ., ಕರಾವಳಿಯಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಮೂರ್ಖ ನಿರ್ಧಾರವಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಕೇರಳದ ಗ್ರಿಡ್ ಮೂಲಕ ಅನ್ಯ ರಾಜ್ಯಗಳಿಗೆ ವಿದ್ಯುತ್ ಮಾರುವ ನಿಟ್ಟಿನಲ್ಲಿ ನೂತನ ಸರಬರಾಜು ಲೈನನ್ನು ಅದಾನಿ ಯುಪಿಸಿಎಲ್ ಅಳವಡಿಸಲು ಉದ್ದೇಶಿಸಿದೆ.

ರಾಜ್ಯ ಸರಕಾರ ಪರಿಸರಕ್ಕೆ ಹಾನಿ ಮಾಡುತ್ತಿರುವ ಯುಪಿಸಿಎಲ್ ಘಟಕ ಮುಚ್ಚಿಸಲು ನಿರ್ದೇಶನ ನೀಡಬೇಕು ಎಂದು ನಂದಿಕೂರು ಜನಜಾಗೃತಿ ಸಮಿತಿ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ..

 

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago