Featured

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ , ಇಲ್ಲಿನ ಜನರು ಇಲ್ಲೇ ಇರಬೇಕು : ತಾಲಿಬಾನ್ ವಕ್ತಾರ -Vishwanews24

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ , ಇಲ್ಲಿನ ಜನರು ಇಲ್ಲೇ ಇರಬೇಕು : ತಾಲಿಬಾನ್ ವಕ್ತಾರ -Vishwanews24

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ. ಇಲ್ಲಿನ ಜನರು ಇಲ್ಲೇ ಇರಬೇಕು. ಅವರಿಗೆ ದೇಶ ಬಿಟ್ಟು ಹೋಗಲು ಅನುಮತಿ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ಧಾನೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರದ್ದೇ ಪಾರುಪತ್ಯವಾಗಿದ್ದು ಅವರು ಹೇಳಿದ್ದೇ ಅಂತಿಮ ಎಂಬಂತಾಗಿದೆ.

ಅವರ ಅಟ್ಟಹಾಸಕ್ಕೆ ಹೆದರಿ ಜನ ಗುಂಪುಗುಂಪಾಗಿ ದೇಶ ತೊರೆಯುತ್ತಿದ್ದು ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಹಿಡಿ ಜಾಗ ಸಿಕ್ಕರೂ ಜೀವ ಉಳಿಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದಾರೆ. ಆದರೆ, ಇದೀಗ ದೇಶ ಬಿಟ್ಟು ಹೋಗುವವರಿಗೆ ತಾಲಿಬಾನ್​ ತಡೆಯೊಡ್ಡಿದ್ದು, ಇನ್ನು ಮುಂದೆ ಅಫ್ಘಾನಿಸ್ತಾನದ ನಾಗರೀಕರು ಯಾರೂ ದೇಶದಿಂದ ಹೊರ ಹೋಗುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಅಫ್ಘಾನಿಸ್ತಾನದ ನಾಗರಿಕರು ಏರ್‌ಪೋರ್ಟ್‌ಗೆ ತೆರಳಲು ಅವಕಾಶವಿಲ್ಲ. ಇಲ್ಲಿನ ಜನರು ಇಲ್ಲೇ ಇರಬೇಕು. ಅವರಿಗೆ ದೇಶ ಬಿಟ್ಟು ಹೋಗಲು ಅನುಮತಿ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ಧಾನೆ. ಆಗಸ್ಟ್​​ 31ರ ಬಳಿಕ ವಿದೇಶಿಯರ ಸ್ಥಳಾಂತರ ಮುಂದುವರೆದರೆ ಅದು ಕೂಡಾ ಒಪ್ಪಂದದ ಉಲ್ಲಂಘನೆ ಆಗುತ್ತದೆ. ನೆರೆಹೊರೆ ದೇಶಗಳ ವಿರುದ್ಧ ಆಫ್ಘನ್ ನೆಲ ಬಳಕೆಗೆ ಅವಕಾಶವಿಲ್ಲ. ವಿದೇಶಿ ಪಡೆಗಳು ದೀರ್ಘಕಾಲ ಆಫ್ಘನ್‌ನಲ್ಲಿರಲು ಅವಕಾಶವಿಲ್ಲ. ವಿದೇಶಿ ರಾಯಭಾರ ಕಚೇರಿಗಳಿಗೆ ಭದ್ರತೆ ನೀಡುತ್ತೇವೆ. ಅವರು ಕೆಲಸ ಮುಂದುವರಿಸಬೇಕು. ರಾಯಭಾರಿಗಳಿಗೆ ಸಂಪೂರ್ಣ ಭದ್ರತೆ ನೀಡುವ ಹೊಣೆ ನಮ್ಮದು ಎಂದು ತಾಲಿಬಾನ್​ ಹೇಳಿಕೊಂಡಿದೆ.

ಅಫ್ಘಾನಿಸ್ತಾನದ ಜನರಿಗೆ ಕ್ಷಮಾದಾನ ಘೋಷಣೆ ಮಾಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು‌ ಪ್ರಯತ್ನ ಸಾಗಿದೆ ಎಂದು ಜಬೀವುಲ್ಲಾ ಹೇಳಿಕೆ ನೀಡಿದ್ದು, ತಾಲಿಬಾನ್‌ಗೆ ದ್ರೋಹ ಬಗೆದವರ ಬಗ್ಗೆ ಈಗ ಮಾತನಾಡಲ್ಲ. ಸಮಯ ಬಂದಾಗ ತಾಲಿಬಾನ್ ಈ ಬಗ್ಗೆ ಮಾತನಾಡುತ್ತೆ ಎಂದು ಹೇಳಿದ್ದಾನೆ. ಅಂತೆಯೇ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಸಾವಿನ ಬಗ್ಗೆಯೂ ಮಾತನಾಡಿದ್ದು, ಯುದ್ಧದ ಸಮಯದಲ್ಲಿ ಡ್ಯಾನಿಶ್ ಸಿದ್ದಿಕಿ ಸಾವು ಸಂಭವಿಸಿದೆ. ಯಾರ ಬುಲೆಟ್‌ನಿಂದ ಸಾವು ಸಂಭವಿಸಿದೆ ಎಂದು ಗೊತ್ತಿಲ್ಲ. ಡ್ಯಾನಿಶ್ ಸಿದ್ದಿಕಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾನೆ.

ಒಂದು ವೇಳೆ ಆಮೆರಿಕಾ ಪಡೆ ಆಗಸ್ಟ್ 31 ರ ಬಳಿಕವೂ ಅಫ್ಘನ್​ನಲ್ಲಿದ್ದರೆ ತಾಲಿಬಾನ್ ನಾಯಕತ್ವ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ. ಪಂಜಶಿರ್ ಪ್ರಾಂತ್ಯದ ನಮ್ಮ ಸಹೋದರರು ಕಾಬೂಲ್​ಗೆ ಬರಬೇಕು. ನಮ್ಮ ಇಬ್ಬರ ಗುರಿ ಒಂದೇ ಹೆದರಬೇಡಿ. ಹೋರಾಟ ಬೇಡ. ವಾಪಸ್ ಬನ್ನಿ ಎಂದು ಪಂಜಶಿರ್ ಪ್ರಾಂತ್ಯದ ನಾಯಕರಿಗೆ ತಾಲಿಬಾನ್ ಕರೆ ನೀಡಿದೆ.

ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಚೀನಾ ದೇಶವನ್ನು ಹಾಡಿ ಹೊಗಳಿದ್ದು, ಚೀನಾ ನಮ್ಮ ಒಳ್ಳೆಯ ನೆರೆಹೊರೆಯ ದೇಶ. ಚೀನಾದೊಂದಿಗೆ ಅಫ್ಘಾನಿಸ್ತಾನದ ಹೊಸ ಸರ್ಕಾರ ಒಳ್ಳೆಯ ಸಂಬಂಧ ಹೊಂದುತ್ತದೆ ಎಂದಿದ್ದಾನೆ. ಇನ್ನು ಮಹಿಳೆಯರ ಬಗ್ಗೆ ಮಾತನಾಡಿ, ಉದ್ಯೋಗಸ್ಥ ಮಹಿಳೆಯರು ಮನೆಯಲ್ಲಿ ಇರುವುದು ತಾತ್ಕಾಲಿಕ ಎಲ್ಲವೂ ಶೀಘ್ರದಲ್ಲೇ ಸರಿಹೋಗಲಿದೆ ಎಂಬ ಭರವಸೆ ನೀಡಿದ್ದಾನೆ.

Vishwa News 24

Recent Posts

ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು -vishwanews24

ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು ಮಲ್ಪೆ: ಕಳೆದ ಎರಡು ದಿನಗಳಿಂದ ಆಳಸಮುದ್ರದಲ್ಲಿ ಭಾರೀ…

14 minutes ago

ಸೆ.7ರೊಳಗೆ ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಕೆ.ಜೆ. ಜಾರ್ಜ್‌ -vishwanews24

ಸೆ.7ರೊಳಗೆ ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಕೆ.ಜೆ. ಜಾರ್ಜ್‌ ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು…

3 hours ago

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು -vishwanews24

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು : ಮಂಗಳೂರು ಸೆಂಟ್ರಲ್…

5 hours ago

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು -vishwanews24

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು ಉಡುಪಿ :…

6 hours ago

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ -vishwanews24

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ ತುಳು ಭಾಷೆ, ಸಾಹಿತ್ಯ,…

6 hours ago

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ -vishwanews24

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ ಉಡುಪಿ: ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣ ಗೊಳಿಸಲು ನೀಡಲಾಗಿದ್ದ ಗಡುವನ್ನು ಆ.…

6 hours ago