Featured

ಅಮಿತ್‌ ಶಾ ಸಮಾವೇಶದಲ್ಲಿ ಕೂಲ್‌ ಡ್ರಿಂಕ್ಸ್‌  ವ್ಯಾಪಾರಿಗೆ  ನಷ್ಟ- ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್‌ ಸಿಂಹ – Vishwanews24

ಅಮಿತ್‌ ಶಾ ಸಮಾವೇಶದಲ್ಲಿ ಕೂಲ್‌ ಡ್ರಿಂಕ್ಸ್‌  ವ್ಯಾಪಾರಿಗೆ  ನಷ್ಟ- ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್‌ ಸಿಂಹ

ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಏಪ್ರಿಲ್ 28 ರಂದು ನಡೆದಿದ್ದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಕೂಲ್‌ ಡ್ರಿಂಕ್ಸ್‌ ವ್ಯಾಪಾರ ಮಾಡಲು ಬಂದಿದ್ದ ಸಮೀರ್ ಸಾಬ್, ನೆರದಿದ್ದ ಜನರ ವರ್ತನೆಯಿಂದ ನಷ್ಟ ಅನುಭವಿಸಿದ್ದ.. ಸಮೀರ್ ಗೆ ಆಗಿರೋ ನಷ್ಟವನ್ನ ಸಂಸದ ಪ್ರತಾಪ್ ಸಿಂಹ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಧ್ಯರಾತ್ರಿ 12ರ ಸುಮಾರಿಗೆ ಸಮೀರ್‌ಗೆ ಫೋನ್ ಮಾಡಿದ್ದ ಪ್ರತಾಪ್ ಸಿಂಹ ನಷ್ಟವಾಗಿರೋ ಬಗ್ಗೆ ಮಾಹಿತಿ ಕೇಳಿದ್ದರು. ನಂತರ, ಸಮೀತರ್‌ ಒಟ್ಟಾರೆ 30 ಸಾವಿರ ನಷ್ಟವಾಗಿರಬಹುದು ಎಂದು ಹೇಳಿದ್ದರು. ಆದರೆ, ಪ್ರತಾಪ್‌ ಸಿಂಹ್‌ 35 ಸಾವಿರ ಹಣ ಪಾವತಿಸಿ ಸ್ಕ್ರೀನ್ ಶಾಟ್ ಸಮೇತ್ ಫೋಟೋ ಟ್ವೀಟ್ ಮಾಡಿದ್ದಾರೆ.. ಅದಲ್ಲದೆ, ಸಮೀರ್ ಸಾಬ್ ಗೆ ಹಣ ಕಳುಹಿಸಿದ್ದೇನೆ..ಸಾರಿ ಬ್ರದರ್‌, ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಏಪ್ರಿಲ್‌ 28 ರಂದು ಅಮಿತ್‌ ಶಾ ಲಕ್ಷ್ಮೇಶ್ವರ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತಯಾಚನೆ ಮಾಡಿದ್ದರು. ಮಧ್ಯಾಹ್ನದ ಸಮಯ ಆಗಿದ್ದರಿಂದ ಜನ ಬಾಯಾರಿಕೆಯಿಂದ ಬಳಲಿ ಹೋಗಿದ್ದರು. ನೀತಿಸಂಹಿತೆ ಇರುವ ಕಾರಣದಿಂದ, ನೀರು ಊಟದ ವ್ಯವಸ್ಥೆ ಕಷ್ಟ ಅಂತಾ ಆಯೋಜಕರು ಮೈಕ್ ನಲ್ಲಿ ಹೇಳಿದ್ದರು.

ಆದರೆ, ಬಿಸಿಲಿನ ತಾಪ ತಾಳಲು ಸಾಧ್ಯವಾಗಿರಲಿಲ್ಲ. ಅಲ್ಲಿನ ಹೆಣ್ಣುಮಕ್ಕಳ ಒತ್ತಾಯಕ್ಕೆ ಮಣಿದು ನೀರಿನ ಪೌಚ್‌ಗಳನ್ನು ತರಿಸೋದಕ್ಕೆ ಆಯೋಜಕರು ಮುಂದಾಗಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತ, ಸಮೀರ್ ಅವರಿಗೆ 30 ನೀರಿನ ಪ್ಯಾಕೆಟ್‌ಗಳನ್ನು ಆಯೋಜಕರು ಆರ್ಡರ್ ಕೊಟ್ಟಿದ್ದರು. ಸಮೀರ್‌ ಕೂಲ್‌ ಡ್ರಿಂಕ್ಸ್‌ ಇರುವ ವಾಹನದಲ್ಲಿ ನೀರಿನ ಪ್ಯಾಕೆಟ್‌ ತುಂಬಿಕೊಂಡು ಸಮಾವೇಶ ನಡೆಯುವ ಸ್ಥಳಕ್ಕೆ ಬಂದಿದ್ದರು.

ಇನ್ನೇನು ನೀರಿನ ಪ್ಯಾಕೆಟ್‌ಗಳನ್ನು ಇಳಿಸಿ ವಾಪಾಸ್‌ ತೆರಳು ಸಮೀರ್‌ ಮುಂದಾಗುವಾಗ ಆಯೋಜಕರು ಜನರು ಇದ್ದ ಕಡೆ ನೀರಿ ಪ್ಯಾಕೆಟ್‌ಗಳನ್ನು ಇಳಿಸುವಂತೆ ಸಮೀರ್‌ಗೆ ಸೂಚನೆ ನೀಡಿದ್ದರು. ಮೊದಲೇ ಬಾಯಾರಿಕೆಯಿಂದ ಬೇಸತ್ತಿದ್ದ ಜನ, ನೀರಿ‌ನ ಗಾಡಿ ನೋಡಿ, ಆಯೋಜಕರೇ ವ್ಯವಸ್ಥೆ ಮಾಡಿದ್ದಾರೆ ಅಂತಾ ಅಲ್ಲಿದ್ದ ನೀರಿನ ಬಾಟಲ್‌ಗಳೊಂದಿಗೆ ಬಹುತೇಕ ಕೂಲ್‌ ಡ್ರಿಂಕ್ಸ್ ಖಾಲಿ ಮಾಡಿದ್ದರು. ಮುಗಿಬಿದ್ದು ಗಾಡಿ ಮೇಲೆ ಹತ್ತಿ ನೀರಿನ ಬಾಟಲ್ ತೆಗೆದುಕೊಂಡಿದ್ದರು. ಜನರನ್ನ ಕಂಟ್ರೋಲ್ ಮಾಡಲು ಸಾಧ್ಯವಾಗದೇ, ಸಮೀರ್ ಕಣ್ಣೀರು ಹಾಕುತ್ತ ಅಸಹಾಯಕರಾಗಿ ನಿಂತಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಜನರನ್ನ ಚದುರಿಸಿದರೂ, ಅದಾಗಲೇ ದೊಡ್ಡ ನಷ್ಟ ಸಮೀರ್‌ಗೆ ಆಗಿತ್ತು. ಇದರಿಂದಾಗಿ ಸ್ಥಳದಿಂದ ಅಳುತ್ತಲೇ ಸಮೀರ್ ಹೊರ ನಡೆದಿದ್ದರು.

ಸಮೀರ್‌ ಅವರು ವಾಹನದಲ್ಲಿಯೇ ಕುಳಿತು ಅತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ಮಾಧ್ಯಮಗಳೂ ವರದಿ ಮಾಡಿದ್ದವು. ಇದನ್ನು ಮನಗಂಡ ಪ್ರತಾಪ್‌ ಸಿಂಹ ಅವರು, ಸಮೀರ್‌ ಅವರಿಗೆ 35 ಸಾವಿರ ರೂಪಾಯಿಯನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದಾರೆ.

ಪ್ರತಾಪ್ ಸಿಂಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಟ್ವೀಟ್‌ ಮಾಡಿದ ಪ್ರತಾಪ್‌ ಸಿಂಹ, ಸಮೀರ್‌ ಹಸನ್‌ ಸಾಬ್‌ಗೆ ಹಣ ಕಳುಹಿಸಿದ್ದೇನೆ. ಸಾರಿ ಬ್ರದರ್‌, ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸಮೀರ್‌ ಸಾಬ್‌ಗೆ ನಷ್ಟವಾದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈಗ ನಷ್ಟ ಪಾವತಿಸುವ ಮೂಲಕ ಪ್ರತಾಪ್‌ ಸಿಂಹ ಅವರು ಯುವಕನ ನೆರವಿಗೆ ನಿಂತಿದ್ದಾರೆ.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

12 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

12 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago