Featured

ಅಶಕ್ತರಿಗೆ ನೆರವಾಗುತ್ತಿದೆ ಮೂಳೂರಿನ‌ ವಾಟ್ಸಪ್ ನಿರೆಲ್ ತಂಡ.


ಅಶಕ್ತರಿಗೆ ನೆರವಾಗುತ್ತಿದೆ ಮೂಳೂರಿನ‌ ವಾಟ್ಸಪ್ ನಿರೆಲ್ ತಂಡ.

ಕಾಪು: ಜನ ಸೇವೆಯೆ ದೇವರ ಸೇವೆ ಎಂಬ ಮಾತು ಅಕ್ಷರಶಃ ನಿಜವಾಗಬೇಕೆಂದರೆ ಇಂತಹ ತಂಡವೊಂದು ಪ್ರತಿಯೊಂದು ಊರಿನಲ್ಲೂ ಇರಬೇಕು ಹಾಗಾದರೆ ಈ‌ ತಂಡ ಯಾವುದು, ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದ ಮಾಹಿತಿ ಇಲ್ಲಿದೆ.

ತುಳುನಾಡಿನ ಒಂದಿಷ್ಟು ಯುವಕರ ತಂಡ ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಸಮಾಜಸೇವೆಗೆ ಮೀಸಲಿಟ್ಟು ಆಶಕ್ತರಿಗೆ ನೆರವಾಗುವ ಕಾರ್ಯವನ್ನ ಮಾಡುತ್ತಿದ್ದಾರೆ.

ಯಾವುದೇ ಕಾರ್ಯ ಮಾಡಬೇಕಾದರೂ ಅದಕ್ಕೊಂದು ಹೆಸರಿಡಬೇಕು ಈ ಹೆಸರು ಯಾವುದೆಂದರೆ ” ನಿರೆಲ್”(ನೆರಳು)
ಬಡತನದ ಬೇಗೆಯಲ್ಲಿ ಬೆಂದು ಆರೋಗ್ಯ ಕಾಪಾಡಲು ಸಾಧ್ಯವಾಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ನೆರಳಾಗಿ ನಿಂತು ಈ ಕಾರ್ಯವನ್ನ ಮಾಡುತ್ತಿದ್ದಾರೆ

ಇದು ಕೇವಲ ಒಂದೇ ಊರಿಗೆ ಮೀಸಲಾಗಿಲ್ಲ‌ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾವುದೇ ಮೂಲೆಯಾದರೂ ಸರಿ ಇವರ ಸೇವೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ,ವಾಟ್ಸಪ್ ಗ್ರೂಪ್‌ ರಚಿಸಿಕೊಂಡು ತಮ್ಮದೇ ಶೈಲಿಯಲ್ಲಿ ಈ ಕೈಂಕಾರ್ಯ ನಡೆಸುತ್ತಿರುವ ಯುವಕರ ಕೆಲಸ ಶ್ಲಾಘನೀಯವೆ ಸರಿ.

ಅಷ್ಟು ಇಷ್ಟು ಎಂಬ ಭೇದ ಭಾವವಿಲ್ಲದೆ ಬಂದಷ್ಟನ್ನು ನೇರವಾಗಿ ಕುಟುಂಬಗಳಿಗೆ ಮುಟ್ಟಿಸುವ ಕೆಲಸ ಈ ಸಂಸ್ಥೆ ಮಾಡುತ್ತಿದೆ.ಯಾರಿಗೂ ಒತ್ತಾಯವಿಲ್ಲ ಕೊಟ್ಟದ್ದು ಪಂಚಾಮೃತ ಬಂದದ್ದು ಕಾರ್ಯಭಾಗ ಅನ್ನುವ ಮನೋಭಾವ ಈ‌ ಯುವಕರದ್ದು,ಪ್ರಚಾರದ ಹುಚ್ಚಿಲ್ಲ ಕೊಟ್ಟೆವೂ ಎಂಬ ಆಡಂಬರ ಇಲ್ಲದೆ ಮಾಡುವ ಈ ಕಾರ್ಯಕ್ಕೆ ಜನಸ್ಪಂದನೆ ದೊರಕುತ್ತಿದೆ ಮಾತ್ರವಲ್ಲದೆ ಜನಸಾಮಾನ್ಯರಿಂದ ಶ್ಲಾಘನೆಯು ಬರುತ್ತಿದೆ.

ಮುಂದೆಯೂ ಇದೆ ರೀತಿಯಾಗಿ ಇವರ ಸೇವೆ ಮುಂದುವರಿಯಲಿ ಎಂದು ನಾವೆಲ್ಲರೂ ಆಶೀಸಬೇಕಾಗಿದೆ.

 

ಕಳೆದ ವಾರ ಧನಸಹಾಯ ಮಾಡಿದ ವಿವರ ಇಲ್ಲಿದೆ.

*”ನಿರೆಲ್ ಫ್ರೆಂಡ್ಸ್‌ ‌ಬಳಗ”* ಇದರ ವತಿಯಿಂದ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕಿನ ಪಕ್ಷಿಕೆರೆ ಗ್ರಾಮದ ನಿವಾಸಿ ಹರೀಶ ಮತ್ತು ಭಾರತಿ ಇವರ ಪುತ್ರ ಚೇತನ್(3 ವರ್ಷ)ರವರ ಕುಟುಂಬಕ್ಕೆ *35000ರೂ.* ನೆರವು ನೀಡಲಾಯಿತು.

ಮನೆ ತುಂಬ ನಲಿವಿನಿಂದ ಓಡಾಡಿಕೊಂಡು ಇರಬೇಕಾಗಿದ್ದ ಮೂರು ವರ್ಷದ ಪುಟ್ಟ ಮಗು ಚೇತನ್ ಮೂಳೆ ಕಾನ್ಸರ್ ಗೆ ತುತ್ತಾಗಿ ಹಾಸಿಗೆ ಹಿಡಿದಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಮಗುವಿನ ಹೆತ್ತವರು ಚಿಕಿತ್ಸೆಯ ವೆಚ್ಚ ಬರಿಸಲಾಗದೆ ದಾನಿಗಳ ನೆರವು ಯಾಚಿಸಿದ್ದರು. ಇವರ ಕಣ್ಣೀರ ಕಥೆಗೆ ಸ್ಪಂದಿಸಿರುವ *ನಿರೆಲ್ ಫ್ರೆಂಡ್ಸ್* ಬಳಗದ ಸಹೃದಯ ಮಿತ್ರರು ಹಣ ಸಂಗ್ರಹ ನಡೆಸಿದ್ದು, ಒಟ್ಟಾದ ಹಣವನ್ನು ಚೇತನ್ ಅವರ ಮನೆಗೆ ತೆರಳಿ ಶ್ರೀಯುತ ಹರೀಶ್ ರವರಿಗೆ ಧನಸಹಾಯ ಹಸ್ತಾoತರ ಮಾಡಲಾಯಿತು.
ಈ ವೇಳೆ ನಿರೆಲ್ ಫ್ರೆಂಡ್ಸ್ ಬಳಗದ ನಿರ್ವಾಹಕರು ಅರುಣ್ ಕುಲಾಲ್ ಮೂಳೂರು, ಸದಸ್ಯರು ಹೇಮಂತ್ ಕುಮಾರ್ ಕಿನ್ನಿಗೋಳಿ, ಅವಿನಾಶ್ ಕುಲಾಲ್ ಮೂಳೂರು, ಪ್ರಶಾಂತ್ ಎಸ್.ಪೂಜಾರಿ ಉಚ್ಚಿಲ, ಸುರೇಶ್ ಶೆಟ್ಟಿ ಮೂಳೂರು, ದಿವಾಕರ್ ಕರ್ಕೇರ ಕಿನ್ನಿಗೋಳಿ (ಮಂಗಳೂರು ತಾಲೂಕು‌ ಪಂಚಾಯತ್ ಸದಸ್ಯರು),
ಜಾಗರಣ ಸಂಜೀವಿನಿ ಪಕ್ಷಿಕೆರೆ ಇದರ ಸಕ್ರಿಯ ಸದಸ್ಯರು ಶಶಿಧರ್ ಪೂಜಾರಿ, ಧನುಷ್ ಕುಲಾಲ್, ಧನು ಅಂಚನ್ ಉಪಸ್ಥಿತರಿದ್ದರು.
ಸಹಾಯಹಸ್ತ ನೀಡುವವರು ಇದ್ದಲ್ಲಿ ಮಗುವಿನ ಖಾತೆಗೆ ನೆರವು ನೀಡಬಹುದು
*Chethan H*
*A/c no: 01362210047670*
*IFSC:SYNB0000136*
*Branch:Kinnigoli*
*Syndicate Bank*
*Contact:9148496812*

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

1 minute ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

20 minutes ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

27 minutes ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

42 minutes ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

52 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

2 hours ago