Featured

ಆರ್.ಎಸ್.ಎಸ್ ಕಾಪು ತಾಲೂಕು ಸಂಘಚಾಲಕ ದಿ.ತಾರನಾಥ್ ಕೋಟ್ಯಾನ್ ಅವರ ಶೃದ್ಧಾಂಜಲಿ ಸಭೆ.vishwanews24

ಆರ್.ಎಸ್.ಎಸ್ ಕಾಪು ತಾಲೂಕು ಸಂಘಚಾಲಕ ದಿ.ತಾರನಾಥ್ ಕೋಟ್ಯಾನ್ ಅವರ ಶೃದ್ಧಾಂಜಲಿ ಸಭೆ.

ಕಾಪು: ಕಾಪು ತಾಲೂಕಿನ ಆರ್ ಎಸ್ ಎಸ್ ತಾಲೂಕು ಸಂಘಚಾಲಕರಾಗಿದ್ದ ದಿ.ತಾರನಾಥ್ ಕೋಟ್ಯಾನ್ ಅವರಿಗೆ ಚಿರಶಾಂತಿಯನ್ನು ಕೋರಿ ಕಾಪು ವೀರಭದ್ರ ಸಭಾಭವನದಲ್ಲಿ ಶೃದ್ಧಾಂಜಲಿ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಕಾಪು ಶಾಸಕ ಲಾಲಾಜಿ‌ ಆರ್ ಮೆಂಡನ್ ಮಾತನಾಡಿ” ಸಮಾಜದಲ್ಲಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂಡು ಕೆಲವು ವರ್ಷಗಳ ಹಿಂದೆ ಕಾಪುವಿನಲ್ಲಿ ನಡೆದ ಹನುಮಚಾಲಿಸ ಯಜ್ಞ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.ಕೋಟ್ಯಾನ್ ಅವರ ಅಗಲುವಿಕೆ ಹಿಂದೂ ಸಮಾಜಕ್ಕೆ ತುಂಬಲಾಗದ ನಷ್ಟ ಎಂದರು.

ವಾಮನ ಶೆಣೈ ಮಾತನಾಡಿ ಬ್ರಹ್ಮಲಿಪಿ ಬದಲಾಯಿಸುವ ಅಧಿಕಾರ ಈ ಭೂಮಿಯಲ್ಲಿ ಯಾರಿಗೂ ಇಲ್ಲ ಹಾಗಂತ ಕೋಟ್ಯಾನ್ ಅವರ ಇಹಲೋಕ ತ್ಯಜಿಸುವ ವಯಸ್ಸಲ್ಲ.ದೇವರಿಗೆ ಯಾರು ತುಂಬಾ ಹತ್ತಿರ ಇರುತ್ತಾರೋ ಅವರನ್ನು ದೇವರು ಬೇಗನೇ ತನ್ನ ಬಳಿ ಕರೆಸಿಕೊಳ್ಳುತ್ತಾನೆ.ಸಜ್ಜನನಾಗಿದ್ದುಕೊಂಡು ಸಮಾಜದೊಂದಿಗೆ ಬೆರೆಯುತ್ತಿದ್ದ ತಾರನಾಥ್ ಕೋಟ್ಯಾನ್ ಅವರ ನಡೆನುಡಿ ಯಾವಾಗಲೂ ನೇರವಾಗಿ ಇರುತ್ತಿತ್ತು ಕಲ್ಮಶ ಇಲ್ಲದ ಮನಸ್ಸು ಕೋಟ್ಯಾನ್ ಅವರದ್ದು ಎಂದರು.
ಸವಾಲುಗಳನ್ನು ಮೆಟ್ಟಿ ನಿಂತು ಧೈರ್ಯದಿಂದ ಉತ್ತರ ಕೊಡುವ ಶಕ್ತಿ ಇವರಿಗಿತ್ತು ಅಲ್ಲದೆ ಯಾವುದೇ ಸಮಯದಲ್ಲ್ಲೂ ಮುಗುಳ್ನಗೆಯೊಂದಿಗೆ ಸದಾ ಹಾಲು ಜೇನಿನಂತೆ ಬೆರೆಯುತ್ತಿದ್ದ ತಾರನಾಥ ಕೋಟ್ಯಾನ್ ಈಗ ಇಲ್ಲ ಅನ್ನುವುದೆ ನಂಬಲಾಗದು  ಎಂದರು.

ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ ಗುರ್ಮೆ,ಯಶ್ಪಾಲ್ ಸುವರ್ಣ,ಮಟ್ಟಾರ್ ರತ್ನಾಕರ ಹೆಗ್ಡೆ,ಕುಯಿಲಾಡಿ ಸುರೇಶ್ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,ವಾಮನ‌ಶೆಣೈ,ಕುಶ ಸಾಲಿಯಾನ್,ವಸಂತ್ ಕುಂದರ್,ಮೊದಲಾದವರು ಉಪಸ್ಥಿತಿತರಿದ್ದರು.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

11 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

17 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

17 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

19 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

19 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

19 hours ago