ಹೊಸದಿಲ್ಲಿ: ಸಂಪೂರ್ಣ ಚಂದ್ರಗ್ರಹಣದ ಬಳಿಕ, ಮಂಗಳವಾರ ಮತ್ತೊಂದು ಮಹತ್ವದ ಹಾಗೂ ಅಪರೂಪದ ವಿದ್ಯಮಾನಕ್ಕೆ ಚಂದ್ರ ಸಾಕ್ಷಿಯಾಗುತ್ತಿದೆ. ಜಗತ್ತಿನಾದ್ಯಂತ ಮಂಗಳವಾರ ಆಕಾಶದಲ್ಲಿ ಸೂಪರ್ಮೂನ್ ದರ್ಶನವಾಗಲಿದೆ. ಈ ಪೂರ್ಣ ಚಂದಿರನಿಗೆ ಸ್ಟ್ರಾಬೆರಿ ಸೂಪರ್ಮೂನ್ (Strawberry Super moon,) ಮೀಡ್, ಹನಿ ಅಥವಾ ರೋಸ್ ಮೂನ್ ಎಂಬ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ. ಭಾರತದಲ್ಲಿ ವತ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಸೂರ್ಯಾಸ್ತವಾಗುತ್ತಿದ್ದಂತೆ, ಪೂರ್ವ ದಿಗಂತದಿಂದ ಹುಣ್ಣಿಮೆಯ ಚಂದ್ರ ಮೂಡುತ್ತದೆ. ಹಾಗೆಯೇ ಸೂರ್ಯೋದಯವಾಗುವಾಗ ಪಶ್ಚಿಮದಲ್ಲಿ ಮುಳುಗುತ್ತದೆ. ಭಾನುವಾರ ಸಂಜೆಯಿಂದ ಬುಧವಾರ ಬೆಳಿಗ್ಗೆಯವರೆಗಿನ ಮೂರು ದಿನಗಳವರೆಗೆ ಈ ಬಾರಿ ಸಂಪೂರ್ಣವಾಗಿ ಚಂದ್ರನ ದರ್ಶನವಾಗಲಿದೆ.
ಏನಿದು ಸೂಪರ್ಮೂನ್?
ಖಗೋಳ ತಜ್ಞ ರಿಚರ್ಡ್ ನೊಲ್ಲೆ ಅವರು 1979ರಲ್ಲಿ ಸೂಪರ್ಮೂನ್ ಪದವನ್ನು ಹುಟ್ಟುಹಾಕಿದ್ದರು. ಇದು ಚಂದ್ರ, ಭೂಮಿಯ ಅತಿ ಸಮೀಪ ಬಂದಾಗ, ಭೂಮಿಯ ಕಕ್ಷೆಯ ಶೇ 90ರಷ್ಟು ಸಮೀಪಿಸಿದಾಗ ಉಂಟಾಗುವ ಹುಣ್ಣಿಮೆಯಾಗಿದೆ.
ಚಂದ್ರನ ಕಕ್ಷೆಯು ಭೂಮಿಗೆ ಅತ್ಯಂತ ಸಮೀಪ ಬಂದಾಗ, ಪೂರ್ಣ ಚಂದಿರ ಇರುವ ಸನ್ನಿವೇಶವನ್ನು ಸೂಪರ್ಮೂನ್ ಎನ್ನಲಾಗುತ್ತದೆ. ಚಂದ್ರನು ಭೂಮಿಯ ಸುತ್ತ ಅಂಡಾಕಾರ ಹಾದಿಯಲ್ಲಿ ಸುತ್ತುವಾಗ, ಈ ಗ್ರಹಣದಲ್ಲಿನ ದೂರದ ಅಂಶವನ್ನು ತುತ್ತತುದಿ (Apogee) ಎಂದು ಕರೆಯಲಾಗುತ್ತದೆ. ಮತ್ತು ಅದು ಭೂಮಿಯಿಂದ ಸರಾಸರಿ 4,05,500 ಕಿಮೀ ದೂರದಲ್ಲಿರುತ್ತದೆ.
ನಾಸಾ ಪ್ರಕಾರ, ಭೂಮಿಗೆ ಚಂದ್ರ ಅತ್ಯಂತ ಹತ್ತಿರವಿದ್ದಾಗ (Perigee), ಭೂಮಿಯಿಂದ ಅದರ ಸರಾಸರಿ ದೂರ ಸುಮಾರು 3,63,300 ಕಿಮೀ ಇರುತ್ತದೆ. ಈ ಸಮೀಪದ ಬಿಂದುವಿನಲ್ಲಿ ಕಾಣಿಸಿಕೊಳ್ಳುವ ಪೂರ್ಣ ಚಂದ್ರ ಹೆಚ್ಚು ಪ್ರಖರವಾಗಿರುತ್ತದೆ ಮತ್ತು ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ. ಇದರಿಂದ ಅದಕ್ಕೆ ಸೂಪರ್ಮೂನ್ ಎಂದು ಹೆಸರಿಸಲಾಗಿದೆ.
ಸ್ಟ್ರಾಬೆರಿ ಸೂಪರ್ಮೂನ್ ಎಂಬ ಹೆಸರೇಕೆ?
ಸ್ಟ್ರಾಬೆರಿ ಮೂನ್ ಎಂಬ ಹೆಸರು, ಈಶಾನ್ಯ ಅಮೆರಿಕದಲ್ಲಿ ವಾಸಿಸುವ ಅಲ್ಗೊನ್ಕ್ವಿನ್ ಬಡುಕಟ್ಟುಗಳಿಂದ ಬಂದಿದೆ. ಈ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಸ್ಟ್ರಾಬೆರಿ ಬೆಳೆಯ ಕೊಯ್ಲು ಆರಂಭವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿನ ಚಂದ್ರಗ್ರಹಣಕ್ಕೆ ಈ ಹೆಸರು ಬಂದಿದೆ.
ಈ ಪೂರ್ಣಚಂದ್ರನಿಗೆ ಯುರೋಪ್ನಲ್ಲಿ ಮೀಡ್ ಅಥವಾ ಹನಿ ಮೂನ್ (ಜೇನಿನ ಚಂದ್ರ) ಎಂದು ಕರೆಯಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಇಲ್ಲಿ ಹೆಚ್ಚಿನ ಜೇನುತುಪ್ಪ ಲಭ್ಯವಾಗುತ್ತದೆ. ಹೀಗಾಗಿ ಇದು ಅತ್ಯಂತ ‘ಸಿಹಿಯಾದ’ ಚಂದ್ರ ಕೂಡ ಹೌದು.
ಯುರೋಪ್ನಲ್ಲಿ ಇದ್ದಕ್ಕೆ ರೋಸ್ ಮೂನ್ ಅಥವಾ ಗುಲಾಬಿ ಚಂದ್ರ ಎಂಬ ವಿಶೇಷಣದೊಂದಿಗೆ ಸಹ ಕರೆಯಲಾಗುತ್ತದೆ. ಇದು ಕೂಡ ಗುಲಾಬಿ ಹೂವಿನ ಬೆಳೆಗೆ ಸಂಬಂಧಿಸಿದ್ದು. ಅವಧಿಗೆ ಅನುಗುಣವಾಗಿ ಈ ಹುಣ್ಣಿಮೆ ಚಂದ್ರನಿಗೆ ಫ್ಲವರ್ ಮೂನ್, ಹಾಟ್ ಮೂನ್, ಹೋ ಮೂನ್ ಮತ್ತು ಪ್ಲಾಂಟಿಂಗ್ ಮೂನ್ ಎಮಬ ವಿವಿಧ ಹೆಸರುಗಳಿವೆ.
ಸ್ಟ್ರಾಬೆರಿ ಮೂನ್ ದರ್ಶನ ಯಾವಾಗ?
ಮಂಗಳವಾರ ಸಂಜೆ 5.21ರಿಂದ ಭಾರತದ ಅಕಾಶದಲ್ಲಿ ಈ ಸ್ಟ್ರಾಬೆರಿ ಚಂದ್ರ ಶೇ 99.8ರಷ್ಟು ಪೂರ್ಣವಾಗಿ ಗೋಚರಿಸುತ್ತಾನೆ.
ಏ. 2ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…
ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ,…
ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಾ.31 ರಿಂದ ಎ.2 ರವರೆಗೆ ಮುಖ್ಯಪ್ರಾಣ ಏಕಶಿಲಾಮೂರ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ…