ಇಂದು ಸಂಜೆಯಿಂದ ಫೆ.22 ರವರೆಗೆ ಪೊಳಲಿ ತಾಯಿಯ ಕಲಶಾಭಿಷೇಕದಂದು ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ನಿಹಾರಿಕ ಕುಟುಂಬದ ಜೊತೆ ಕೈ ಜೋಡಿಸಿ ..
ಫೆ. 19 ಶುಕ್ರವಾರ ಸಂಜೆಯಿಂದ 22 ಆದಿತ್ಯವಾರದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.
ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಗೃಹಿಣಿ ತಾಯಿ. ಚಿಕ್ಕದಾದ ಸಂತೋಷದ ಚಿಲುಮೆ ಆಗಿದ್ದ ಈ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ತಮ್ಮ 7 ವರ್ಷದ ಮಗುವಿಗೆ ಕಾಡುವ ವಿಪರೀತ ಜ್ವರ ಬರಸಿಡಿಲಿನಂತೆ ಎಗರಿದೆ. ಎಲ್ಲರ ಕಣ್ಮಣಿಯಾಗಿದ್ದ ಈ ಕಂದಮ್ಮ ಬಿಡದೆ ಕಾಡುವ ಅನಾರೋಗ್ಯದಿಂದ ಕಂಗಾಲಾಗಿದ್ದಾರೆ.
ಮಗುವನ್ನು ದೇರಳಕಟ್ಟೆ , ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಸ್ತುತ ಅತ್ತಾವರದ KMC ಆಸ್ಪತ್ರೆಯಲ್ಲಿರುವ ಈ ಮಗು H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ KMC ವೈದ್ಯರ ನಿದರ್ಶನದಂತೆ ಮಗುವನ್ನು “ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ” ಕರೆದುಕೊಂಡು ಹೋಗಿದ್ದು ಅಲ್ಲಿ ನ ಉನ್ನತ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸುತ್ತಾರೆ.
ಈ ಚಿಕಿತ್ಸೆಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದ್ದು ಈ ಮೊತ್ತವನ್ನು ಭರಿಸಲು ಕುಟುಂಬವು ಆಶಕ್ತವಾಗಿರುವುದರಿಂದ , ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆ ಮತ್ತು ಆತ್ಮೀಯರ ಸಹಕಾರದೊಂದಿಗೆ ದಿನಾಂಕ 19/02/2021 ಶುಕ್ರವಾರ ಸಂಜೆಯಿಂದ 22/02/2021 ಆದಿತ್ಯವಾರದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…
2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುತ್ತೇವೆ : ಪ್ರಧಾನಿ ಮೋದಿ ನವದೆಹಲಿ: 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು…