Featured

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಕಾರ್ಕಳ: ನ್ಯಾಯ, ನೀತಿ, ಧರ್ಮ, ಆಚರಣೆಗಳು ಇಂದಿಗೂ ಜೀವಂತವಾಗಿಯೇ ಉಳಿದಿರುವುದು ತುಳುನಾಡಿನ ಕಾರಣಿಕ ಶಕ್ತಿಗಳ ಕ್ಷೇತ್ರಗಳಲ್ಲಿ , ಅಂತಹ ಜಾಗದಲ್ಲಿ ಸುಳ್ಳು ಸತ್ಯವಾಗದು, ಸತ್ಯ ಸುಳ್ಳಾಗದು, ಧರ್ಮ ಭಕ್ತಿಯಿಂದ ಬಂದವರನ್ನ ಸಲುಹಿದ ಶಕ್ತಿಗಳು ನಮ್ಮ ತುಳುನಾಡಿನಲ್ಲಿದೆ ಅಂತಹದೇ ಒಂದು ಕ್ಷೇತ್ರದ ಪರಿಚಯ ಇಲ್ಲಿದೆ.

ತುಳುನಾಡಿನಲ್ಲಿ ಹಲವಾರು ಕಾರಣಿಕ ಶಕ್ತಿಗಳ ಸನ್ನಿಧಾನದಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಹಾಗೂ ಪರಿವಾರ ದೈವಗಳು.ಈ ಕ್ಷೇತ್ರದಲ್ಲಿ ಇದೇ ಬರುವ ತಾರೀಕು ಮಾರ್ಚ್ ೨೧ ಮತ್ತು ೨೨ ರಂದು ಬ್ರಹ್ಮಕಲಶೋತ್ಸವ ಮತ್ತು ೨೬ ನೇ ವರ್ಷದ ವರ್ಧತ್ಯುತ್ಸವ ಹಾಗೂ ನೇಮೊತ್ಸವ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ನಡೆಯಲಿದೆ.

ಐತಿಹಾಸಿಕದ ಕಥೆಗಳಿರುವ ಶ್ರೀ ಕ್ಷೇತ್ರಗಳಲ್ಲಿ ಒಂದಾದ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ದೈವಸ್ಥಾನವು ನಮಗೆ ಕಾಣ ಸಿಗುತ್ತದೆ. ಸನ್ನಿಧಾನದ ಹತ್ತಿರಲ್ಲಿರುವ ಕೆರೆಯ ವಿಶಾಲವಾದ ನೀರಿನಲ್ಲಿ ದೇವಸ್ಥಾನದ ಉತ್ಸವ ಸಮಯದಲ್ಲಿ ಗ್ರಾಮ ದೇವರಾದ ಕುಕ್ಕೂಂದೂರು ದುರ್ಗಾ ಪರಮೇಶ್ವರಿ ದೇವರು ಜಳಕಕ್ಕೆ ಹೋಗುವಂತಹ ಪವಿತ್ರವಾದ ತಾಣವಿದು.

ಸುಳಿ ರೂಪದ ರಕ್ತೇಶ್ವರಿ ಗುಂಡಿ ಮತ್ತು ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು

ಶ್ರೀ ಕ್ಷೇತ್ರದ ಹತ್ತಿದಲ್ಲಿರುವ ಮಹಾಸುವರ್ಣ ನದಿಯಲ್ಲಿ ನೀರಿನ ಸುಳಿಯ ರೂಪದಲ್ಲಿ ಕಾಣ ಸಿಗುವ ರಕ್ತೇಶ್ವರಿ ಗುಂಡಿಯು ಅತ್ಯಂತ ಕಾರಣಿಕ ಹಾಗೂ ಪಾವಿತ್ರ್ಯತೆಯ ಜಾಗವಿದು.ಆದರೆ ಈ ಜಾಗಕ್ಕೆ ಯಾರು ಇಳಿಯುವಂತಿಲ್ಲ . ಕಾರ್ಕಳ ತಾಲೂಕಿನ ಎಲ್ಲಿಯೂ ಕಾಣ ಸಿಗದ ಏಕೈಕ ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು ನೋಡುಗರನ್ನ ದಿಗ್ಭ್ರಮೆಗೊಳಿಸುವುದರಲ್ಲಿ ಅಚ್ಚರಿಯಿಲ್ಲ.

ತೊಟ್ಟಿಲ ಭಾಗ್ಯ ಕರುಣಿಸಿದ ಶಕ್ತಿಗಳು.

ವೈದ್ಯಲೋಕಕ್ಕೆ ಸವಾಲಾಗಿರುವ ಹಲವಾರು ಘಟನೆಗಳು ಈ ಕ್ಷೇತ್ರದ ಶಕ್ತಿಗಳ ಕೃಪಾಕಟಾಕ್ಷದಿಂದ ಯಶಸ್ಸಾಗಿರುವ ಅದೇಷ್ಟೊ ಉದಾಹರಣೆಗಳು ಇಲ್ಲಿ ಕಾಣ ಸಿಗುತ್ತದೆ. ಮದುವೆಯಾದ ದಂಪತಿಗಳಿಗೆ ತೊಟ್ಟಿಲು ತೂಗುವ ಯೋಗ ವೈದ್ಯರು ಇಲ್ಲ ಅಂದ್ರು ಕೇವಲ ಒಂದು ಎಲೆ ಗಂಧ ಪ್ರಸಾದ ನೀಡಿ ಅಭಯ ವಾಕ್ಯದಿಂದ ಮಗುವಿನ ಭಾಗ್ಯ ಕರುಣಿಸಿದ ಶಕ್ತಿಗಳು. ವ್ಯವಹಾರಿಕ ಕ್ಷೇತ್ರದಲ್ಲಿಯೂ ಉನ್ನತಿಯ ಕಾರಣಿಕ ತೋರಿಸಿದ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಕ್ಷೇತ್ರ.

ವರದಿ: ಪುರುಷೋತ್ತಮ ಸಾಲ್ಯಾನ್ 9343846360

 

 

 

Vishwa News 24

Recent Posts

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…

10 hours ago

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…

10 hours ago

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…

11 hours ago

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

11 hours ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

11 hours ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

11 hours ago