Featured

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಕಾರ್ಕಳ: ನ್ಯಾಯ, ನೀತಿ, ಧರ್ಮ, ಆಚರಣೆಗಳು ಇಂದಿಗೂ ಜೀವಂತವಾಗಿಯೇ ಉಳಿದಿರುವುದು ತುಳುನಾಡಿನ ಕಾರಣಿಕ ಶಕ್ತಿಗಳ ಕ್ಷೇತ್ರಗಳಲ್ಲಿ , ಅಂತಹ ಜಾಗದಲ್ಲಿ ಸುಳ್ಳು ಸತ್ಯವಾಗದು, ಸತ್ಯ ಸುಳ್ಳಾಗದು, ಧರ್ಮ ಭಕ್ತಿಯಿಂದ ಬಂದವರನ್ನ ಸಲುಹಿದ ಶಕ್ತಿಗಳು ನಮ್ಮ ತುಳುನಾಡಿನಲ್ಲಿದೆ ಅಂತಹದೇ ಒಂದು ಕ್ಷೇತ್ರದ ಪರಿಚಯ ಇಲ್ಲಿದೆ.

ತುಳುನಾಡಿನಲ್ಲಿ ಹಲವಾರು ಕಾರಣಿಕ ಶಕ್ತಿಗಳ ಸನ್ನಿಧಾನದಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಹಾಗೂ ಪರಿವಾರ ದೈವಗಳು.ಈ ಕ್ಷೇತ್ರದಲ್ಲಿ ಇದೇ ಬರುವ ತಾರೀಕು ಮಾರ್ಚ್ ೨೧ ಮತ್ತು ೨೨ ರಂದು ಬ್ರಹ್ಮಕಲಶೋತ್ಸವ ಮತ್ತು ೨೬ ನೇ ವರ್ಷದ ವರ್ಧತ್ಯುತ್ಸವ ಹಾಗೂ ನೇಮೊತ್ಸವ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ನಡೆಯಲಿದೆ.

ಐತಿಹಾಸಿಕದ ಕಥೆಗಳಿರುವ ಶ್ರೀ ಕ್ಷೇತ್ರಗಳಲ್ಲಿ ಒಂದಾದ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ದೈವಸ್ಥಾನವು ನಮಗೆ ಕಾಣ ಸಿಗುತ್ತದೆ. ಸನ್ನಿಧಾನದ ಹತ್ತಿರಲ್ಲಿರುವ ಕೆರೆಯ ವಿಶಾಲವಾದ ನೀರಿನಲ್ಲಿ ದೇವಸ್ಥಾನದ ಉತ್ಸವ ಸಮಯದಲ್ಲಿ ಗ್ರಾಮ ದೇವರಾದ ಕುಕ್ಕೂಂದೂರು ದುರ್ಗಾ ಪರಮೇಶ್ವರಿ ದೇವರು ಜಳಕಕ್ಕೆ ಹೋಗುವಂತಹ ಪವಿತ್ರವಾದ ತಾಣವಿದು.

ಸುಳಿ ರೂಪದ ರಕ್ತೇಶ್ವರಿ ಗುಂಡಿ ಮತ್ತು ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು

ಶ್ರೀ ಕ್ಷೇತ್ರದ ಹತ್ತಿದಲ್ಲಿರುವ ಮಹಾಸುವರ್ಣ ನದಿಯಲ್ಲಿ ನೀರಿನ ಸುಳಿಯ ರೂಪದಲ್ಲಿ ಕಾಣ ಸಿಗುವ ರಕ್ತೇಶ್ವರಿ ಗುಂಡಿಯು ಅತ್ಯಂತ ಕಾರಣಿಕ ಹಾಗೂ ಪಾವಿತ್ರ್ಯತೆಯ ಜಾಗವಿದು.ಆದರೆ ಈ ಜಾಗಕ್ಕೆ ಯಾರು ಇಳಿಯುವಂತಿಲ್ಲ . ಕಾರ್ಕಳ ತಾಲೂಕಿನ ಎಲ್ಲಿಯೂ ಕಾಣ ಸಿಗದ ಏಕೈಕ ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು ನೋಡುಗರನ್ನ ದಿಗ್ಭ್ರಮೆಗೊಳಿಸುವುದರಲ್ಲಿ ಅಚ್ಚರಿಯಿಲ್ಲ.

ತೊಟ್ಟಿಲ ಭಾಗ್ಯ ಕರುಣಿಸಿದ ಶಕ್ತಿಗಳು.

ವೈದ್ಯಲೋಕಕ್ಕೆ ಸವಾಲಾಗಿರುವ ಹಲವಾರು ಘಟನೆಗಳು ಈ ಕ್ಷೇತ್ರದ ಶಕ್ತಿಗಳ ಕೃಪಾಕಟಾಕ್ಷದಿಂದ ಯಶಸ್ಸಾಗಿರುವ ಅದೇಷ್ಟೊ ಉದಾಹರಣೆಗಳು ಇಲ್ಲಿ ಕಾಣ ಸಿಗುತ್ತದೆ. ಮದುವೆಯಾದ ದಂಪತಿಗಳಿಗೆ ತೊಟ್ಟಿಲು ತೂಗುವ ಯೋಗ ವೈದ್ಯರು ಇಲ್ಲ ಅಂದ್ರು ಕೇವಲ ಒಂದು ಎಲೆ ಗಂಧ ಪ್ರಸಾದ ನೀಡಿ ಅಭಯ ವಾಕ್ಯದಿಂದ ಮಗುವಿನ ಭಾಗ್ಯ ಕರುಣಿಸಿದ ಶಕ್ತಿಗಳು. ವ್ಯವಹಾರಿಕ ಕ್ಷೇತ್ರದಲ್ಲಿಯೂ ಉನ್ನತಿಯ ಕಾರಣಿಕ ತೋರಿಸಿದ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಕ್ಷೇತ್ರ.

ವರದಿ: ಪುರುಷೋತ್ತಮ ಸಾಲ್ಯಾನ್ 9343846360

 

 

 

Vishwa News 24

Recent Posts

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ – vishwanews24

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಮಹಿಳೆಯ…

60 minutes ago

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ – vishwanews24

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ ನವದೆಹಲಿ :ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು…

1 hour ago

ಉಡುಪಿ : ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ : ಕೃಷ್ಣರಾಜ ತಂತ್ರಿ – vishwanews24

ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ.. ಏಸಿಯಲ್ಲಿ ಇರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯಲ್ಲ.. ಕರಾವಳಿಗೆ ಕೂಲರ್‌ಗಿಂದ…

3 hours ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

4 hours ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

5 hours ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

5 hours ago