ಉಡುಪಿ/ಕುಂದಾಪುರ: ಇತಿಹಾಸ ಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವ್ಯವಸ್ಥಾನದ ವ್ಯವಸ್ಥಾಪನಾ ಸಮಿತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಾಖಲೆಗಳನ್ನು ನಾಶಪಡಿಸಿದ ಘಟನೆ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತಿದ್ದ ಸೇವಾ ಚೀಟಿಯಲ್ಲಿ ಕ್ರಮಸಂಖ್ಯೆ ಒಂದೇ ಇರುವುದನ್ನು ಗಮನಿಸಿದ ಭಕ್ತರು ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ತಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾ ಚೀಟಿಗಳನ್ನು ಮುದ್ರಣಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಆಪರೇಟರ್ ರಾಜೇಶ್ ಕಾಮತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಅವ್ಯವಹಾರ? ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಸೇವೆ ಸಲ್ಲಿಸಲು ಹಣ ಪಡೆದು ನೀಡಲಾಗುವ ಚೀಟಿಯಲ್ಲಿ ದೇವಸ್ಥಾನದ ಸಿಬ್ಬಂದಿ ಅಸಲಿ ರಶೀದಿ ನೀಡದೇ ನಕಲಿ ಚೀಟಿಗಳನ್ನು ನೀಡಿ ವಂಚಿಸಲಾಗುತ್ತಿದೆ ಎನ್ನುವುದು ಬಹಿರಂಗಗೊಂಡಿದೆ. ಕಚೇರಿಯ ಕಂಪ್ಯೂಟರ್ ನಲ್ಲಿ ತೆಗೆಯುವ ಪ್ರತೀ ರಶೀದಿಯಲ್ಲಿಯೂ ಕ್ರಮಸಂಖ್ಯೆ ನಮೂದಾಗುತ್ತಿದ್ದು, ಕೆಲವು ಒಂದೇ ಸಂಖ್ಯೆಯ ರಶೀದಿಗಳನ್ನು ನೀಡುವ ಮೂಲಕ ದೇವಳಕ್ಕೆ ಸಲ್ಲಬೇಕಾದ ಹಣವನ್ನು ಲಪಟಾಯಿಸಲಾಗುತ್ತಿದೆ ಎನ್ನುವುದು ಮೇಲ್ನೋಟದ ತನಿಖೆಯಲ್ಲಿ ಕಂಡುಬಂದಿದೆ.
ಶುಕ್ರವಾರ ಸಂಕ್ರಾಂತಿಯ ವಿಶೇಷ ಪೂಜೆ ನಡೆದಿದ್ದು, ದೇವಿಯ ಸರ್ವಾಲಂಕಾರ ಪೂಜೆಗೆ ತಲಾ 350 ರೂಪಾಯಿಗಳಂತೆ 28 ಭಕ್ತರು ರಶೀದಿ ಪಡೆದಿದ್ದರು. ಇದರಲ್ಲಿ 8 ರಶೀದಿ ಮಾತ್ರ ಬೇರೆ ಕ್ರಮಸಂಖ್ಯೆಗಳನ್ನು ಹೊಂದಿದ್ದು, ಉಳಿದಂತೆ 20 ರಶೀದಿಗಳು ಒಂದೇ ಕ್ರಮಸಂಖ್ಯೆಯಲ್ಲಿ ಮುದ್ರಿತವಾಗಿದ್ದವು. ಇದರಿಂದ ಸಿಬ್ಬಂದಿಗೆ ಅನುಮಾನವುಂಟಾಯಿತು. ಆದರೆ ಈ ಬಗ್ಗೆ ವಿಚಾರಿಸಲು ದಿನಂಪ್ರತಿ ರಶೀದಿ ತೆಗೆಯುತ್ತಿದ್ದ ರಾಜೇಶ್ ಕಾಮತ್ ರಜೆಯಲ್ಲಿದ್ದ ಎನ್ನಲಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಗಮನಕ್ಕೆ ತರಲಾಗಿ ಇಲಾಖೆಗೆ ದೂರು ನೀಡುವಂತೆ ಸೂಚಿಸಿದ್ದು, ಅದರಂತೆ ತನಿಖೆ ನಡೆಸಲಾಗಿದೆ.
ಅವ್ಯವಹಾರದ ಮಾಹಿತಿ ತಿಳಿದು ತನಿಖೆಗೆ ಮುಂದಾದಾಗ, ರಾಜೇಶ್ ಕಾಮತ್ ಕಂಪ್ಯೂಟರ್ ನಲ್ಲಿ ಇರುವ ದಾಖಲೆಗಳು ನಾಶವಾಗಿದ್ದವು. ಕಳೆದ ಎರಡು ವರ್ಷಗಳ ದಾಖಲೆಗಳನ್ನು ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಆಶೋಕ್ ಎಂಬಾತನು ಪಾಸ್ ವಾರ್ಡ್ ಬಳಸಿ ಇಟ್ಟಿದ್ದ ದಾಖಲೆಗಳನ್ನು ಕೂಡ ನಾಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ತನಿಖಾಧಿಕಾರಿ ನಿಂಗಯ್ಯ ನಕಲಿ ರಶೀದಿಗಳನ್ನು ಹಾಗೂ ಕಂಪ್ಯೂಟರ್ ನ್ನು ವಶಕ್ಕೆ ಪಡೆದಿದ್ದು, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಅವರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಸೂಚಿಸಿದ್ದಾರೆ. ದೇವಸ್ಥಾನದ ಅನ್ನ ಸಂತರ್ಪಣೆಯ ವಿಚಾರದಲ್ಲಿಯೂ ಕಳಪೆ ಸಾಮಗ್ರಿಗಳನ್ನು ತರಿಸಿ ಹೆಚ್ಚು ಬಿಲ್ ಪಾವತಿ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಮುಜರಾಯಿ ಇಲಾಖೆಯ ಅಧೀನಕ್ಕೆ ಬರುವ ದೇವಳಗಳಲ್ಲಿ ಬರುವ ಭಕ್ತರ ಕಾಣಿಕೆಗಳ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಸರಿಯಿದೆ ಎನ್ನುವುದರ ಬಗ್ಗೆ ಇದೀಗ ಸಾಮಾಜಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗುತ್ತಿದೆ.
ಉಡುಪಿ: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್ ಖಂಡನೆ ಉಡುಪಿ: ಇತ್ತೀಚೆಗೆ ನ್ಯಾಯಯುತವಾದ…
ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್ಕಾರ್ಟ್ : ಭಾರಿ ದಂಡ ವಿಧಿಸಿದ ಮುಂಬೈನ ಗ್ರಾಹಕ ನ್ಯಾಯಾಲಯ ಮುಂಬೈ: ಆನ್ಲೈನ್ನಲ್ಲಿ ಲಕ್ಷಾಂತರ…
ಕೇಂದ್ರದ ಭರವಸೆಯ ಬಳಿಕ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ ನವದೆಹಲಿ: ಹೋರಾಟಗಾರ ಹಾಗೂ ಲಡಾಖ್ನ ಸಾಮಾಜಿಕ ಕಾರ್ಯಕರ್ತ…
ಜು.26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ ಬೆಂಗಳೂರು: ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ…
ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ ; ವಾಹನ ಸವಾರರಲ್ಲಿ ಆತಂಕ ಬೆಳ್ತಂಗಡಿ,: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು…
ಸುಳ್ಯ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ ಸುಳ್ಯ: ಮನೆ ಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು…