ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕರೆಮಾಡಿ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681
ಮೇಷ ರಾಶಿ
ಉದ್ಯೋಗರಂಗದಲ್ಲಿ ಅನಿರೀಕ್ಷಿತ ಲಾಭವಿದೆ. ದೇವತಾಕಾರ್ಯಗಳಿಗೆ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳಿರುತ್ತವೆ. ನಿರೀಕ್ಷಿತ ಮನೋಕಾಮನೆಗಳು ಒಂದೊಂದಾಗಿ ನೆರವೇರಿ ಸಂತೋಷ ಉಂಟಾಗಲಿದೆ. ಕೆಲಸದಲ್ಲಿ ನೀವು ಅನೇಕ ಜವಾಬ್ದಾರಿಗಳನ್ನು ಎದುರಿಸಬೇಕಾಗುತ್ತದೆ, ಅದನ್ನು ನೀವು ಉತ್ತಮವಾಗಿ ನಿರ್ವಸುತ್ತೀರಿ. ಅದು ಕಚೇರಿ ಅಥವಾ ಮನೆಯಾಗಿರಲಿ, ಅವರು ಎಲ್ಲವನ್ನೂ ಸರಿಯಾಗಿ ಮಾಡುವಿರಿ.
.ಅದೃಷ್ಟ ಸಂಖ್ಯೆ 1
ವೃಷಭ ರಾಶಿ
ಅನಿರೀಕ್ಷಿತವಾಗಿ ಬಂಧು ಬಳಗದವರು ಬರಬಹುದು. ಪ್ರವಾಸ ಯಾತ್ರಾದಿಗಳಿಂದ ಸಂತೃಪ್ತಿ ತರಲಿದೆ. ಮನೆಯ ವಿಸ್ತರಣೆ ಕಾರ್ಯ, ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ದುಡುಕಿ ಮಾಡಿದ ಕೆಲಸವು ಆಶಾಭಂಗ ಉಂಟುಮಾಡಬಹುದು. ಇಂದು ನೀವು ಏನು ಕೆಲಸ ಮಾಡುತ್ತಿದ್ದೀರಿ ಎನ್ನುವುದರ ಮೇಲೆ ನೀವು ಯಶಸ್ಸನ್ನು ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 8
ಮಿಥುನ ರಾಶಿ
ಮಕ್ಕಳ ವಿದ್ಯಾ ಪ್ರಗತಿಯಿಂದ ಸಂತಸವಿದೆ. ಶೀತ, ಕಫ ಮತ್ತು ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಪಶುಸಂಗೋಪನೆಯಿಂದ ಸಮಾಧಾನ ಸಿಗಲಿದೆ. ಮಂಗಳ ಕಾರ್ಯ ನಡೆಯುವ ಸೂಚನೆ ಇದೆ. ನೀವು ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ ಮತ್ತು ಕುಟುಂಬದ ಸಂಪತ್ತು ಹೆಚ್ಚಾಗುತ್ತದೆ.
ಅದೃಷ್ಟ ಸಂಖ್ಯೆ 6
ಕಟಕ ರಾಶಿ
ಎಣಿಕೆಗಿಂತ ಮಿಗಿಲಾದ ಧನಸಂಪತ್ತು ನಿಮ್ಮದಾಗಬಹುದು. ದೂರ ಸಂಚಾರವು ಆಪತ್ತು ತರಬಹುದು. ಎಚ್ಚರಿಕೆಯ ಅಗತ್ಯವಿದೆ. ಗೆಳೆಯರ ಸಹವಾಸದಿಂದ ದುರ್ವ್ಯಸನದ ದಾಸರಾಗದಿರಿ ಜೋಕೆ. ಮನದನ್ನೆಯ ಮಾತು ಹಿತ ತರಲಿದೆ. ವ್ಯವಹಾರದ ಬೆಳವಣಿಗೆಗೆ ನೀವು ಇಂದು ತೆಗೆದುಕೊಳ್ಳುವ ನಿರ್ಧಾರದಿಂದ ಪ್ರಯೋಜನವಾಗುವುದು.
ಅದೃಷ್ಟ ಸಂಖ್ಯೆ 3
ಸಿಂಹ ರಾಶಿ
ಅಧಿಕಾರಿ ವರ್ಗದಲ್ಲಿ ಭಿನ್ನಮತ ಮೂಡಲಿದೆ. ವ್ಯವಹಾರಕ್ಕಾಗಿ ದೂರ ಸಂಚಾರವಿದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಧರ್ಮಕಾರ್ಯಗಳಲ್ಲಿ ವಿಘ್ನಭೀತಿ ತರಬಹುದು. ಸಂಸಾರದಲ್ಲಿ ಪಾಲಕ ವರ್ಗದವರಿಗೆ ಕ್ಲೇಷ ಹೆಚ್ಚಾಗಲಿದೆ. ಇಂದು ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ವಿರೋಧಿಗಳ ಪಿತೂರಿ ವಿಫಲಗೊಳ್ಳುತ್ತದೆ.
ಅದೃಷ್ಟ ಸಂಖ್ಯೆ 5
ಕನ್ಯಾ ರಾಶಿ
ವೃತ್ತಿರಂಗದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯವಹಾರದಲ್ಲಿ ಲಾಭ ಶೂನ್ಯವಾಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಸಡ್ಡೆ ಮೂಡಬಹುದು. ವಾದ ವಿವಾದಗಳು ನ್ಯಾಯಾಲಯದ ದರ್ಶನ ಮಾಡಿಸಲಿದೆ. ವೈವಾಹಿಕ ಜೀವನದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಆರ್ಥಿಕ ಲಾಭವಿದ್ದರೂ, ಖರ್ಚಿನ ಮೇಲೆ ನಿಗಾ ಇರಿಸಿ.
ಅದೃಷ್ಟ ಸಂಖ್ಯೆ 9
ತುಲಾ ರಾಶಿ
ಗೆಳೆಯರ ಆಗಮನ ಮನಸ್ಸಿಗೆ ನೆಮ್ಮದಿ ತರಲಿದೆ. ಹಲವಾರು ಖರ್ಚುಗಳ ಪಟ್ಟಿ ಬೆಳೆಯಲಿದೆ. ಗೃಹದಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಕಚೇರಿ ಕೆಲಸಗಳಲ್ಲಿ ಚಿಂತೆ ಹೆಚ್ಚಲಿದೆ. ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಲು ವೆಚ್ಚವನ್ನು ಕಡಿಮೆ ಮಾಡಿ. ಆದರೂ, ನೀವು ಹಣದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ ಮತ್ತು ನೀವು ವೃತ್ತಿಕ್ಷೇತ್ರದಿಂದ ಒಳ್ಳೆಯ ಸುದ್ದಿಯನ್ನು ಕೇಳಬಹುದು.
ಅದೃಷ್ಟ ಸಂಖ್ಯೆ 7
ವೃಶ್ಚಿಕ ರಾಶಿ
ಆದಾಯದ ವೃದ್ದಿಯಲ್ಲಿ ಹೊಸ ಮಾರ್ಗಗಳು ಗೋಚರಕ್ಕೆ ಬರಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಉತ್ತಮ. ಆಕಸ್ಮಿಕ ಧನಾಗಮನದಿಂದ ಕಾರ್ಯ ಸಿದ್ಧಿಸಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನಹರಿಸಿ. ವ್ಯವಹಾರದ ಬೆಳವಣಿಗೆಗಾಗಿ ನೀವು ಇಂದು ಒಪ್ಪಂದ ಮಾಡಿಕೊಳ್ಳುತ್ತೀರಿ, ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಅದೃಷ್ಟ ಸಂಖ್ಯೆ 4
ಧನುಸ್ಸು ರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಸಾಮಾಧಾನ ತರಲಿದೆ. ಪತಿ ಪತ್ನಿಯ ಜಗಳದಲ್ಲಿ ಕೂಸು ಬಡವಾಗಬಹುದು ಎಚ್ಚರವಿರಲಿ. ನೂತನ ಕೆಲಸ ಕಾರ್ಯಗಳಿಗೆ ಅವಸರಿಸದಿರಿ. ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬರಬಹುದು ಜಾಗ್ರತೆ ವಹಿಸಿ. ಕುಟುಂಬದೊಂದಿಗೆ ಕೆಲವು ಕಾರ್ಯಗಳಿಗೆ ಸೇರಲು ಅವಕಾಶವಿದೆ.
ಅದೃಷ್ಟ ಸಂಖ್ಯೆ 2
ಮಕರ ರಾಶಿ
ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ವ್ಯಾಪಾರ ವ್ಯವಹಾರಗಳು ತಕ್ಕ ಮಟ್ಟಿಗೆ ಲಾಭ ತರಲಿವೆ. ಹಿರಿಯರ ವಿಚಾರದಲ್ಲಿ ವಾದ ವಿವಾದಕ್ಕೆ ಕಾರಣರಾಗದಿರಿ. ಬಂಧುಗಳ ಆಗಮನವಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಇಂದು ಕೊನೆಗೊಳ್ಳುತ್ತದೆ. ಪ್ರೀತಿಯ ಸಂಬಂಧಗಳು ಉತ್ತಮವಾಗಿರುತ್ತವೆ ಮತ್ತು ಪೋಷಕರ ಆಶೀರ್ವಾದ ಸಹ ಸಿಗುತ್ತದೆ.
ಅದೃಷ್ಟ ಸಂಖ್ಯೆ 6
ಕುಂಭ ರಾಶಿ
ವೃತ್ತಿರಂಗದಲ್ಲಿ ಬದಲಾವಣೆ ಕಂಡುಬರಲಿದೆ. ಆಗಾಗ ಮನೆಯಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಕಲಹ ಬರಬಹುದು. ಕಾರ್ಮಿಕ ವರ್ಗದವರು ಚೇತರಿಕೆಯನ್ನು ಹೊಂದುವರು. ಕೃಷಿಕರಿಗೆ ಉತ್ಸಾಹದ ವಾತಾವರಣವಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಇಂದು ಪ್ರಶಂಸಿಸಲಾಗುತ್ತದೆ. ನೀವು ಜನರಿಗೆ ಸಹಾಯ ಮಾಡಿದರೆ, ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ.
ಅದೃಷ್ಟ ಸಂಖ್ಯೆ 1
ಮೀನ ರಾಶಿ
ಅನವಶ್ಯಕ ತಪ್ಪು ಅಭಿಪ್ರಾಯಗಳು ನಿಮ್ಮನ್ನು ಸುತ್ತಿಕೊಳ್ಳಲಿವೆ. ದೇವತಾ ಕಾರ್ಯಕ್ಕೆ ಹೋಗುವ ಸಂಭವವಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗ ಪಡಸಿಕೊಳ್ಳಿ. ದಿನಾಂತ್ಯದಲ್ಲಿ ಶುಭವಾರ್ತೆ ಕೇಳುವಿರಿ.ವ್ಯವಹಾರವು ಇಂದು ಪ್ರಯೋಜನ ಪಡೆಯುತ್ತದೆ
ಅದೃಷ್ಟ ಸಂಖ್ಯೆ 3
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…