ಹೊಸದಿಲ್ಲಿ,: ಈ ವರ್ಷ ದಾಖಲೆಯ ಎರಡು ಲಕ್ಷ ಭಾರತೀಯ ಮುಸ್ಲಿಮರು ಹಜ್ ನಿರ್ವಹಿಸಲು ಪ್ರಯಾಣ ಬೆಳೆಸಲಿದ್ದಾರೆ, ಈ ಪೈಕಿ ಶೇ.48 ಮಹಿಳೆಯರು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.
ಈ ವರ್ಷ 2,340ಕ್ಕೂ ಅಧಿಕ ಮಹಿಳೆಯರು ಪುರುಷರ ಜೊತೆಗಾರರು ಇಲ್ಲದೆ ಹಜ್ಗೆ ತೆರಳಲಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 1,180 ಆಗಿತ್ತು. ಈ ಮಹಿಳೆಯರನ್ನು ಯಾವುದೇ ಲಾಟರಿ ವ್ಯವಸ್ಥೆಯಿಲ್ಲದೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಜ್ ಕೋಟ ಹೆಚ್ಚಾಗಿರುವ ಕಾರಣ ನಿರೀಕ್ಷಣಾ ಪಟ್ಟಿಯಲ್ಲಿದ್ದ ಎಲ್ಲರಿಗೂ ಈ ವರ್ಷ ಅವಕಾಶ ನೀಡಿರುವುದರಿಂದ ಇದೇ ಮೊದಲ ಬಾರಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಎಲ್ಲ ಅರ್ಜಿದಾರರು ಹಜ್ಗೆ ತೆರಳಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ ನಂತರ ಇದೇ ಮೊದಲ ಬಾರಿ ಎರಡು ಲಕ್ಷ ಭಾರತೀಯ ಮುಸ್ಲಿಮರು 21 ವಿವಿಧ ವಿಮಾನ ನಿಲ್ದಾಣಗಳಿಂದ 500 ವಿಮಾನಗಳಲ್ಲಿ ಹಜ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.
ಹಜ್ಗೆ ತೆರಳುವ ವಿಮಾನಗಳು ದಿಲ್ಲಿ, ಗಯಾ,ಗುವಾಹತಿ ಮತ್ತು ಶ್ರೀನಗರದಿಂದ ಜುಲೈ 4ಕ್ಕೆ, ಬೆಂಗಳೂರು ಮತ್ತು ಕಲ್ಲಿಕೋಟೆಯಿಂದ ಜುಲೈ 7ಕ್ಕೆ, ಕೊಚ್ಚಿನ್ನಿಂದ ಜುಲೈ 14ಕ್ಕೆ, ಮಂಗಳೂರಿನಿಂದ ಜುಲೈ 17ಕ್ಕೆ, ಮುಂಬೈಯಿಂದ ಜುಲೈ 14 ಮತ್ತು 21ಕ್ಕೆ ಹಾಗೂ ಶ್ರೀನಗರದಿಂದ ಜುಲೈ 21ಕ್ಕೆ ಪ್ರಯಾಣ ಬೆಳೆಸಲಿವೆ. ಎರಡನೇ ಹಂತದಲ್ಲಿ, ವಿಮಾನಗಳು, ಅಹ್ಮದಾಬಾದ್, ಜೈಪುರ ಮತ್ತು ಲಕ್ನೋದಿಂದ ಜುಲೈ 20ಕ್ಕೆ, ಭೋಪಾಲ ಮತ್ತು ರಾಂಚಿಯಿಂದ ಜುಲೈ 21ಕ್ಕೆ, ಔರಂಗಾಬಾದ್ನಿಂದ ಜುಲೈ 22ಕ್ಕೆ, ಕೋಲ್ಕತಾ ಮತ್ತು ನಾಗ್ಪುರದಿಂದ ಜುಲೈ 25ಕ್ಕೆ, ಹೈದರಾಬಾದ್ನಿಂದ ಜುಲೈ 26ಕ್ಕೆ, ವಾರಣಾಸಿಯಿಂದ ಜುಲೈ 29ಕ್ಕೆ ಮತ್ತು ಚೆನ್ನೈಯಿಂದ ಜುಲೈ 31ಕ್ಕೆ ಹಜ್ಗೆ ಪ್ರಯಾಣ ಬೆಳೆಸಲಿವೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…