Featured

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು: vishwanews24

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು

ಚಿತ್ರ ಕೃಪೆ: ಸಚಿನ್ ಉಚ್ಚಿಲ

ಕಾಪು: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ‌ ೯ ದಿನಗಳ ಕಾಲ ನಡೆದ ೩ನೇ ವರ್ಷ ಉಚ್ಚಿಲ ದಸರಾ ಮಹೋತ್ಸವ ೨೦೨೫ರ ಸಂದರ್ಭ ಪೂಜಿತ ಶ್ರೀ ಶಾರದಾಂಬೆ ಸಹಿತ ನವದುರ್ಗೆಯರ ಮೃಣ್ಮಯ ಮೂರ್ತಿಗಳ ವಿಸರ್ಜನೆ ಶನಿವಾರ ರಾತ್ರಿ ಕಾಪು ಬೀಚ್ ನಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಉಚ್ಚಿ ದೇವಸ್ಥಾನದಿಂದ ಹೊರಟು ಎರ್ಮಾಳು ಮೂಲಕ ಹಾದು ಕಾಪು ಕೊಪ್ಪಲಂಗಡಿ ಮೂಲಕ ವೈಭವದ ಶೋಭಾಯಾತ್ರೆಯಲ್ಲಿ ಕಾಪು ಬೀಚ್ ತಲುಪಿದ ನವದುರ್ಗೆಯರನ್ನು ಸುಮಂಗಲಿಯರು ಪುಷ್ಪವೃಷಿ ಗೈಯ್ಯುವ ಮೂಲಕ ಸ್ವಾಗತಿಸಿದರು.

ಬಳಿಕ ಬೀಚ್ ನಲ್ಲಿ ವಿಶೇಷವಾಗಿ ನಿರ್ಮಿಸಿದ ಪೀಠಗಳಲ್ಲಿ‌ ಸ್ಥಾಪಿಸಿ ಗಂಗಾರತಿ , ಸಮುದ್ರಾರತಿ ಹಾಗು ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವತಾ ಮೂರ್ತಿಗಳಿಗೆ ಡ್ರೋಣ್ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಿತು.

ಬಿರುಸುಗೊಂಡ ಕಡಲು
ಶೋಭಾ ಯಾತ್ರೆ ಮುಗಿದು ವಿಗ್ರಹಗಳಿಗೆ ಕಾಪು ಬೀಚ್ ಬಳಿ ಗಂಗಾರತಿ ಬೆಳಗಿ ತದನಂತರ ಸಮುದ್ರಕ್ಕೆ ವಿಸರ್ಜನೆ ಮಾಡುವ ಸಮಯದಲ್ಲಿ ಕಡಲು ಬಿರುಸುಗೊಂಡಿತ್ತು.

ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿ
ನವದುರ್ಗಸಹಿತವಾದ ಶಾರದಾ ಮಾತ್ರೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಸಮಯದಲ್ಲಿ ಕಾಪ್ ಬೀಚಿನ ಭಾಗ ಸಂಪೂರ್ಣ ಜನಸ್ತೋಮದಿಂದ ತುಂಬಿಹೋಗಿತ್ತು ಸಾವಿರ ಸಾವಿರ ಸುಮಂಗಲೆಯರು ನವದುರ್ಗ ಸಹಿತವಾಗಿ ಶಾರದಾ ಮಾತೆಗೆ ದೀಪವನ್ನು ಬೆಳಗಿ ಆರತಿ ಮಾಡಿದರು.
ಸುಮಾರು 11 ಗಂಟೆಯ ಸಮೀಪ ಕಾಪು ಬೀಚ್
ಭಾಗದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದಸರಾ ಸಂಪನ್ನತೆಯಲ್ಲಿ ಸಾಕ್ಷಿಯಾದರು.

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

3 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

3 days ago