Featured

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು: vishwanews24

ಉಚ್ಚಿಲ ದಸರಾ -ನವದುರ್ಗೆ -ಶಾರದ ಮಾತೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಹೊತ್ತಿಗೆ ಬಿರುಸುಗೊಂಡ ಕಡಲು

ಚಿತ್ರ ಕೃಪೆ: ಸಚಿನ್ ಉಚ್ಚಿಲ

ಕಾಪು: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ‌ ೯ ದಿನಗಳ ಕಾಲ ನಡೆದ ೩ನೇ ವರ್ಷ ಉಚ್ಚಿಲ ದಸರಾ ಮಹೋತ್ಸವ ೨೦೨೫ರ ಸಂದರ್ಭ ಪೂಜಿತ ಶ್ರೀ ಶಾರದಾಂಬೆ ಸಹಿತ ನವದುರ್ಗೆಯರ ಮೃಣ್ಮಯ ಮೂರ್ತಿಗಳ ವಿಸರ್ಜನೆ ಶನಿವಾರ ರಾತ್ರಿ ಕಾಪು ಬೀಚ್ ನಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಉಚ್ಚಿ ದೇವಸ್ಥಾನದಿಂದ ಹೊರಟು ಎರ್ಮಾಳು ಮೂಲಕ ಹಾದು ಕಾಪು ಕೊಪ್ಪಲಂಗಡಿ ಮೂಲಕ ವೈಭವದ ಶೋಭಾಯಾತ್ರೆಯಲ್ಲಿ ಕಾಪು ಬೀಚ್ ತಲುಪಿದ ನವದುರ್ಗೆಯರನ್ನು ಸುಮಂಗಲಿಯರು ಪುಷ್ಪವೃಷಿ ಗೈಯ್ಯುವ ಮೂಲಕ ಸ್ವಾಗತಿಸಿದರು.

ಬಳಿಕ ಬೀಚ್ ನಲ್ಲಿ ವಿಶೇಷವಾಗಿ ನಿರ್ಮಿಸಿದ ಪೀಠಗಳಲ್ಲಿ‌ ಸ್ಥಾಪಿಸಿ ಗಂಗಾರತಿ , ಸಮುದ್ರಾರತಿ ಹಾಗು ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವತಾ ಮೂರ್ತಿಗಳಿಗೆ ಡ್ರೋಣ್ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಿತು.

ಬಿರುಸುಗೊಂಡ ಕಡಲು
ಶೋಭಾ ಯಾತ್ರೆ ಮುಗಿದು ವಿಗ್ರಹಗಳಿಗೆ ಕಾಪು ಬೀಚ್ ಬಳಿ ಗಂಗಾರತಿ ಬೆಳಗಿ ತದನಂತರ ಸಮುದ್ರಕ್ಕೆ ವಿಸರ್ಜನೆ ಮಾಡುವ ಸಮಯದಲ್ಲಿ ಕಡಲು ಬಿರುಸುಗೊಂಡಿತ್ತು.

ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿ
ನವದುರ್ಗಸಹಿತವಾದ ಶಾರದಾ ಮಾತ್ರೆಯ ಮೃಣ್ಮಯ ವಿಗ್ರಹಗಳ ವಿಸರ್ಜನೆ ಸಮಯದಲ್ಲಿ ಕಾಪ್ ಬೀಚಿನ ಭಾಗ ಸಂಪೂರ್ಣ ಜನಸ್ತೋಮದಿಂದ ತುಂಬಿಹೋಗಿತ್ತು ಸಾವಿರ ಸಾವಿರ ಸುಮಂಗಲೆಯರು ನವದುರ್ಗ ಸಹಿತವಾಗಿ ಶಾರದಾ ಮಾತೆಗೆ ದೀಪವನ್ನು ಬೆಳಗಿ ಆರತಿ ಮಾಡಿದರು.
ಸುಮಾರು 11 ಗಂಟೆಯ ಸಮೀಪ ಕಾಪು ಬೀಚ್
ಭಾಗದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದಸರಾ ಸಂಪನ್ನತೆಯಲ್ಲಿ ಸಾಕ್ಷಿಯಾದರು.

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

13 hours ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

1 day ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

1 day ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

1 day ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

1 day ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

1 day ago