Featured

ಉಚ್ಚಿಲ-ಪಣಿಯೂರು : 7 ಕೋಟಿ ರೂ. ಅನುದಾನದ ದ್ವಿಪಥ ರಸ್ತೆ ಕಾಮಗಾರಿಯ ಅವ್ಯವಸ್ಥೆ; ವ್ಯಾಪಾರಸ್ಥರು, ನಿವಾಸಿಗಳಿಗೆ ಧೂಳು ತಿನ್ನುವ ಸಂಕಟ, ವಾಹನ ಸವಾರರಿಗೆ ಸಂಚಾರದ ಸಂಕಟ -Vishwanews24

ಉಚ್ಚಿಲ-ಪಣಿಯೂರು : 7 ಕೋಟಿ ರೂ. ಅನುದಾನದ ದ್ವಿಪಥ ರಸ್ತೆ ಕಾಮಗಾರಿಯ ಅವ್ಯವಸ್ಥೆ; ವ್ಯಾಪಾರಸ್ಥರು, ನಿವಾಸಿಗಳಿಗೆ ಧೂಳು ತಿನ್ನುವ ಸಂಕಟ, ವಾಹನ ಸವಾರರಿಗೆ ಸಂಚಾರದ ಸಂಕಟ -Vishwanews24

ಕಾಪು : ರೂಪಾಯಿ 7 ಕೋಟಿ ಅನುದಾನದ ಉಚ್ಚಿಲ ರಾ.ಹೆ. ೬೬ರಿಂದ ಪಣಿಯೂರು – ಮುದರಂಗಡಿ ಸಂಪರ್ಕದ ಲೋಕೋಪಯೋಗಿ ರಸ್ತೆಯ ಪಣಿಯೂರು ಜಂಕ್ಷನ್‌ವರೆಗಿನ ೨.೬೦ ಕಿ.ಮೀ ದ್ವಿಪಥ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಿಂದ ಸಾಗುತ್ತಿದ್ದು, ಈ ಭಾಗದ ನಿವಾಸಿಗಳು, ವ್ಯಾಪಾರಸ್ಥರು ನಿತ್ಯ ಧೂಳಿನ ಕಾಟ ಅನುಭವಿಸುವಂತಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಸಂಕಟ ಅನುಭವಿಸುವಂತಾಗಿದೆ

ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ವಾಹನ ನಿಬಿಡ ಮತ್ತು ಜನಸಂಚಾರ ನಿಬಿಡವಾದ ಪ್ರಮುಖ ರಸ್ತೆಯು ಇದಾಗಿದೆ. ಆದರೆ ಅಭಿವೃದ್ಧಿ ಕಾಮಗಾರಿಯು ಆರಂಭ ಶೂರನಂತೆ ೫ ಕಡೆಗಳಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ ಮಾತ್ರ ಸೀಮಿತಗೊಂಡಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿ ಮುಂದುವರೆಯುವುದು ಕಂಡು ಬರುತ್ತಿಲ್ಲ. ಮೋರಿ ನಿರ್ಮಾಣಗೊಂಡ ಬಳಿಕ ತೆರವುಗೊಳಿಸದ ಮಣ್ಣು ರಸ್ತೆಯಲ್ಲಿಯೇ ಉಳಿದಿದ್ದು, ವಾಹನ ಸಂಚಾರದ ಸಂದರ್ಭ ಸ್ಥಳೀಯರು ಧೂಳಿನ ಅಭಿಷೇಕವನ್ನು ಅನುಭವಿಸುವಂತಾಗಿದೆ. ಅದರೊಂದಿಗೆ ನಡೆದ ಕಾಮಗಾರಿಯ ಪ್ರದೇಶದಲ್ಲಿ ವಾಹನಗಳು ದೊಡ್ಡ ಶಬ್ದ ಮಾಡುತ್ತಾ ಹೊಂಡ ದಿಣ್ಣೆಗಳನ್ನು ಏರಿ ಸಾಗುವ ದುಸ್ಥಿತಿ ಅನುಭವಿಸುವಂತಾಗಿದೆ ಎಂದು ವಾಹನ ಚಾಲಕರು ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ನಗರ, ಪಟ್ಟಣಗಳನ್ನು ಸಂಪರ್ಕಿಸುವ ಸಂಪರ್ಕ ರಸ್ತೆಗಳು ಸುಸಜ್ಜಿತಗೊಂಡಲ್ಲಿ ಗ್ರಾಮದ ಜೊತೆಗೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ೨೦೨೦ರ ಅಕ್ಟೋಬರ್ ೧೮ರಂದು ದ್ವಿಪಥ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ೫೦ ಮೀ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ರಸ್ತೆಯ ನಡುವೆ ವಿಭಾಜಕವನ್ನು ನಿರ್ಮಿಸಿ ಸುರಕ್ಷಿತ ಸಂಚಾರ ಮತ್ತು ಸುಂದರ ರಸ್ತೆಯ ನಿರ್ಮಾಣ ಕಾರ್ಯ ನಡೆಯಲಿದ್ದು ರಾಷ್ಟಿçÃಯ ಹೆದ್ದಾರಿ ಸಂಪರ್ಕದ ಈ ಪ್ರದೇಶವು ಸುಸಜ್ಜಿತಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ರಸ್ತೆಯ ನಡುವೆಯೇ ಚರಂಡಿ ನಿರ್ಮಿಸಿದಂತಾಗಿದ್ದು, ಕಾಮಗಾರಿಯೂ ಮಂದಗತಿಯಿ0ದ ಸಾಗುತ್ತಿದ್ದು ಈ ಭಾಗದಲ್ಲಿ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು, ವಾಹನ ಸವಾರರು, ವ್ಯಾಪಾರಸ್ಥರು ಅನುಭವಿಸುವ ಸಂಕಷ್ಟಕ್ಕೆ ಸಂಬ0ಧ ಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತು ಕಾಮಗಾರಿಯು ವೇಗವನ್ನು ಪಡೆದು ಸುರಕ್ಷಿತ ಸಂಚಾರ ಸಾಧ್ಯಕ್ಕೆ ಜನತೆ ಆಗ್ರಹಿಸುತ್ತಿದ್ದಾರೆ.

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

16 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

16 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

17 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

17 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

17 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

20 hours ago