Featured

ಉಚ್ಚಿಲ-ಪಣಿಯೂರು : 7 ಕೋಟಿ ರೂ. ಅನುದಾನದ ದ್ವಿಪಥ ರಸ್ತೆ ಕಾಮಗಾರಿಯ ಅವ್ಯವಸ್ಥೆ; ವ್ಯಾಪಾರಸ್ಥರು, ನಿವಾಸಿಗಳಿಗೆ ಧೂಳು ತಿನ್ನುವ ಸಂಕಟ, ವಾಹನ ಸವಾರರಿಗೆ ಸಂಚಾರದ ಸಂಕಟ -Vishwanews24

ಉಚ್ಚಿಲ-ಪಣಿಯೂರು : 7 ಕೋಟಿ ರೂ. ಅನುದಾನದ ದ್ವಿಪಥ ರಸ್ತೆ ಕಾಮಗಾರಿಯ ಅವ್ಯವಸ್ಥೆ; ವ್ಯಾಪಾರಸ್ಥರು, ನಿವಾಸಿಗಳಿಗೆ ಧೂಳು ತಿನ್ನುವ ಸಂಕಟ, ವಾಹನ ಸವಾರರಿಗೆ ಸಂಚಾರದ ಸಂಕಟ -Vishwanews24

ಕಾಪು : ರೂಪಾಯಿ 7 ಕೋಟಿ ಅನುದಾನದ ಉಚ್ಚಿಲ ರಾ.ಹೆ. ೬೬ರಿಂದ ಪಣಿಯೂರು – ಮುದರಂಗಡಿ ಸಂಪರ್ಕದ ಲೋಕೋಪಯೋಗಿ ರಸ್ತೆಯ ಪಣಿಯೂರು ಜಂಕ್ಷನ್‌ವರೆಗಿನ ೨.೬೦ ಕಿ.ಮೀ ದ್ವಿಪಥ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಿಂದ ಸಾಗುತ್ತಿದ್ದು, ಈ ಭಾಗದ ನಿವಾಸಿಗಳು, ವ್ಯಾಪಾರಸ್ಥರು ನಿತ್ಯ ಧೂಳಿನ ಕಾಟ ಅನುಭವಿಸುವಂತಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಸಂಕಟ ಅನುಭವಿಸುವಂತಾಗಿದೆ

ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ವಾಹನ ನಿಬಿಡ ಮತ್ತು ಜನಸಂಚಾರ ನಿಬಿಡವಾದ ಪ್ರಮುಖ ರಸ್ತೆಯು ಇದಾಗಿದೆ. ಆದರೆ ಅಭಿವೃದ್ಧಿ ಕಾಮಗಾರಿಯು ಆರಂಭ ಶೂರನಂತೆ ೫ ಕಡೆಗಳಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ ಮಾತ್ರ ಸೀಮಿತಗೊಂಡಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿ ಮುಂದುವರೆಯುವುದು ಕಂಡು ಬರುತ್ತಿಲ್ಲ. ಮೋರಿ ನಿರ್ಮಾಣಗೊಂಡ ಬಳಿಕ ತೆರವುಗೊಳಿಸದ ಮಣ್ಣು ರಸ್ತೆಯಲ್ಲಿಯೇ ಉಳಿದಿದ್ದು, ವಾಹನ ಸಂಚಾರದ ಸಂದರ್ಭ ಸ್ಥಳೀಯರು ಧೂಳಿನ ಅಭಿಷೇಕವನ್ನು ಅನುಭವಿಸುವಂತಾಗಿದೆ. ಅದರೊಂದಿಗೆ ನಡೆದ ಕಾಮಗಾರಿಯ ಪ್ರದೇಶದಲ್ಲಿ ವಾಹನಗಳು ದೊಡ್ಡ ಶಬ್ದ ಮಾಡುತ್ತಾ ಹೊಂಡ ದಿಣ್ಣೆಗಳನ್ನು ಏರಿ ಸಾಗುವ ದುಸ್ಥಿತಿ ಅನುಭವಿಸುವಂತಾಗಿದೆ ಎಂದು ವಾಹನ ಚಾಲಕರು ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ನಗರ, ಪಟ್ಟಣಗಳನ್ನು ಸಂಪರ್ಕಿಸುವ ಸಂಪರ್ಕ ರಸ್ತೆಗಳು ಸುಸಜ್ಜಿತಗೊಂಡಲ್ಲಿ ಗ್ರಾಮದ ಜೊತೆಗೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ೨೦೨೦ರ ಅಕ್ಟೋಬರ್ ೧೮ರಂದು ದ್ವಿಪಥ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ೫೦ ಮೀ. ವ್ಯಾಪ್ತಿಯಲ್ಲಿ ಚರಂಡಿ ಹಾಗೂ ರಸ್ತೆಯ ನಡುವೆ ವಿಭಾಜಕವನ್ನು ನಿರ್ಮಿಸಿ ಸುರಕ್ಷಿತ ಸಂಚಾರ ಮತ್ತು ಸುಂದರ ರಸ್ತೆಯ ನಿರ್ಮಾಣ ಕಾರ್ಯ ನಡೆಯಲಿದ್ದು ರಾಷ್ಟಿçÃಯ ಹೆದ್ದಾರಿ ಸಂಪರ್ಕದ ಈ ಪ್ರದೇಶವು ಸುಸಜ್ಜಿತಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ರಸ್ತೆಯ ನಡುವೆಯೇ ಚರಂಡಿ ನಿರ್ಮಿಸಿದಂತಾಗಿದ್ದು, ಕಾಮಗಾರಿಯೂ ಮಂದಗತಿಯಿ0ದ ಸಾಗುತ್ತಿದ್ದು ಈ ಭಾಗದಲ್ಲಿ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು, ವಾಹನ ಸವಾರರು, ವ್ಯಾಪಾರಸ್ಥರು ಅನುಭವಿಸುವ ಸಂಕಷ್ಟಕ್ಕೆ ಸಂಬ0ಧ ಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತು ಕಾಮಗಾರಿಯು ವೇಗವನ್ನು ಪಡೆದು ಸುರಕ್ಷಿತ ಸಂಚಾರ ಸಾಧ್ಯಕ್ಕೆ ಜನತೆ ಆಗ್ರಹಿಸುತ್ತಿದ್ದಾರೆ.

Vishwa News 24

Recent Posts

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

4 minutes ago

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

23 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

1 day ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

1 day ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

1 day ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

1 day ago