ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಕಾಂಗ್ರೆಸ್ಸಿನಲ್ಲಿ ಇನ್ನೂ ಕೂಡ ಸರಿಯಾಗಿ ಮತಯಾಚನೆ ನಡೆಯಲಿಲ್ಲ ಕಾರ್ಯಕರ್ತರ ಕೊರತೆಯಿಂದಾಗಿ ಮತ್ತು ಭುಗಿಲದ್ದ ಭಿನ್ನಮತದಿಂದಾಗಿ ಕಾಂಗ್ರೆಸ್ ಇಭ್ಬಾಗಗೊಂಡಿತ್ತು ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಉಡುಪಿ ಭೇಟಿಯ ನಂತರ ಒಂದಷ್ಟು ಮುಲಾಮ್ ಹಚ್ಚುವ ಪ್ರಯತ್ನ ಮಾಡಿದ್ದರು ಕೂಡ ಒಳಗೊಳಗೆ ಭಿನ್ನಮತ ಬುಸುಗುಡುತ್ತಿದೆ ಇದಕ್ಕೆಲ್ಲ ಮೂಲ ಕಾರಣ ಕಾಂಗ್ರೆಸ್ನ ಅಭ್ಯರ್ಥಿ ಆಯ್ಕೆ ವಿಚಾರ, ವರ್ಷದಲ್ಲಿ ಒಂದು ಬಾರಿಯೂ ಕಾಂಗ್ರೆಸ್ ಭವನದ ಕಡೆ ತಲೆಹಾಕಿ ಮಲಗದ ಒಬ್ಬ ಉದ್ಯಮಿಯನ್ನ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದೆ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿರುವಂತದ್ದು.
ಕಾAಗ್ರೇಸ್ನ ಮೊದಲ ಸುತ್ತಿನ ಫೀಲ್ಡ್ ಮಕಾಡೆ ಮಲಗಿದ್ದು ಎರಡನೇ ಸುತ್ತಿನ ಮತಯಾಚನೆ ಕೂಡ ಜನರಿಗೆ ತೃಪ್ತಿದಾಯಕವಾಗಿಲ್ಲ ಉಡುಪಿಯಲ್ಲಿ ನೀಡಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ಅನುಮಾನ ಜನ ವ್ಯಕ್ತಪಡಿಸಿದ್ದು ಉಡುಪಿಯಲ್ಲಿ ನೈಜ ಹಿಂದುತ್ವವಾದಿ ಗೆಲ್ಲಬೇಕು ಎಂಬುದು ಮತದಾರರ ಆಶಯವಾಗಿದೆ.
ಇನ್ನೂ ಹುಟ್ಟಿನಿಂದಲೆ ಹಿಂದೂ ಧರ್ಮದ ಪರವಾಗಿ ಸಂಘಟನೆಯ ಮುಖೇನ ದೇಶ ಸೇವೆಗಾಗಿ ಸವೆದಿರುವ ಗ್ರೌಂಡ್ ಮೂಲದ ಕಾರ್ಯಕರ್ತನಿಗೆ ಬಿಜೆಪಿ ಅವಕಾಶ ನೀಡಿದ್ದು ಗೆಲ್ಲಿಸುವ ಜವಬ್ಧಾರಿ ಕಾರ್ಯಕರ್ತರ ಮೇಲಿದೆ ಎಂದು ಮೊನ್ನೆ ನಡೆದ ಬಹಿರಂಗ ಸಭೆಯಲ್ಲಿ ಅಮಿತ್ ಶಾ ಕರೆ ನೀಡಿದ್ದರು.
ಚುನಾವಣೆಗೆ ಇನ್ನೇನೂ ಕೆಲವೆ ದಿನಗಳು ಬಾಕಿಯಿದ್ದರೂ ಸದ್ಯ ಗೆಲುವೆಂಬ ಚೆಂಡು ಬಿಜೆಪಿಯ ಮನೆಬಾಗಿಲ ಬಳಿ ನಿಂತುಕೊAಡಿದೆ ಕಾಂಗ್ರೇಸ್ ಎಷ್ಟು ಪ್ರಯತ್ನ ಪಟ್ಟರೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ನ ಉದ್ಯಮಿಯ ಗೆಲುವು ಕಷ್ಟ ಸಾಧ್ಯವಾಗಿದೆಂಬು ರಾಜಕೀಯ ವಿಶ್ಲೇಷಕರ ವಾದ , ಗೊತ್ತಿಲ್ಲ ಯಾರನ್ನು ಆಯ್ಕೆ ಮಾಡಬೇಕೆಂಬ ಅಂತಿಮ ನಿರ್ಧಾರ ಮಾಡುವವರು ಮತದಾರರು ಮಾತ್ರ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…