ಉಡುಪಿ : ನಗರದಲ್ಲಿ ಶುಕ್ರವಾರ ಸಾಯಂಕಾಲ ಕೆಲ ನಿಮಿಷಗಳ ಕಾಲ ಬಿಳಿಬಣ್ಣದ ಬೂದಿ ಮಿಶ್ರಿತ ಮಳೆಯಾಗಿದೆ.
4 ಗಂಟೆ ಸುಮಾರಿಗೆ 5 ನಿಮಿಷಗಳ ಕಾಲ ಕಲ್ಸಂಕ, ಕೆಎಂ ಮಾರ್ಗ, ರಥಬೀದಿ, ಕಡಿಯಾಳಿ, ಮಿಶನ್ ಕಾಂಪೌಂಡ್ ಮೊದಲಾದ ಸ್ಥಳಗಳಲ್ಲಿ ಈ ರೀತಿ ಮಳೆಯಾಗಿದೆ. ಪಟಪಟ ಉದ್ದಿನ ಬೇಳೆಯಂತೆ ಬಿದ್ದ ಈ ಮಳೆಗೆ ಜನರು ಕಕ್ಕಾಬಿಕ್ಕಿಯಾದರು. ದ್ವಿಚಕ್ರ ವಾಹನ, ಕಾರುಗಳ ಮೇಲೆ ಬಿಳಿ ಬಣ್ಣದ ಮಳೆ ಬಿದ್ದು ಕಲೆ ಮೂಡಿಸಿತು. ಉಡುಪಿ ನಗರದಲ್ಲಿ ಮಾತ್ರ ಈ ರೀತಿಯ ಮಳೆಯಾಗಿರುವ ಮಾಹಿತಿ ಇದೆ. ಕೈಗಾರಿಕೆಗಳ ಹಾರುಬೂದಿ ಕಾರಣ ಇರಬಹುದೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭೂಗರ್ಭ ಶಾಸ್ತ್ರಜ್ಞ ಡಾ.ಉದಯಶಂಕರ್, ಇದೇ ರೀತಿ ಕೆಂಪು ಬಣ್ಣದಲ್ಲಿ 10 ದಿನಗಳ ಹಿಂದೆ ಕೆಲವೆಡೆ ತುಂತುರು ಮಳೆ ಸುರಿದಿತ್ತು. ಇದಕ್ಕೆ ನಿಖರ ಕಾರಣ ತಿಳಿಯಲು ಸಾಧ್ಯವಿಲ್ಲ. ಮಳೆ ಆರಂಭವಾಗುವ ಸಮಯದಲ್ಲಿ ಆಮ್ಲೀಯ ಮಳೆ ಬೀಳುವುದು ಸಾಮಾನ್ಯ. ಈಗ ಇಷ್ಟೊಂದು ಮಳೆಯಾದ ಬಳಿಕ ಇಂಥ ಘಟನೆ ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ. ಉಡುಪಿಯಲ್ಲಿ ಹಾರುಬೂದಿ ಸೂಸುವ ಕೈಗಾರಿಕೆಗಳಾಗಲಿ, ದೊಡ್ಡ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಮಾಡುವಂತ ಕೈಗಾರಿಕೆ ಘಟಕಗಳು ಇಲ್ಲ; ಆದರೂ ಈ ರೀತಿ ಮಳೆಯಾಗಿರುವುದು ವಿಚಿತ್ರವಾಗಿದೆ. ಪ್ರಕೃತಿಯಲ್ಲಿ ಸಂಭವಿಸುವ ಇಂಥ ಕೆಲವು ವಿಚಾರಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂದಿದ್ದಾರೆ.
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…