ಉಡುಪಿ : ನಗರದಲ್ಲಿ ಶುಕ್ರವಾರ ಸಾಯಂಕಾಲ ಕೆಲ ನಿಮಿಷಗಳ ಕಾಲ ಬಿಳಿಬಣ್ಣದ ಬೂದಿ ಮಿಶ್ರಿತ ಮಳೆಯಾಗಿದೆ.
4 ಗಂಟೆ ಸುಮಾರಿಗೆ 5 ನಿಮಿಷಗಳ ಕಾಲ ಕಲ್ಸಂಕ, ಕೆಎಂ ಮಾರ್ಗ, ರಥಬೀದಿ, ಕಡಿಯಾಳಿ, ಮಿಶನ್ ಕಾಂಪೌಂಡ್ ಮೊದಲಾದ ಸ್ಥಳಗಳಲ್ಲಿ ಈ ರೀತಿ ಮಳೆಯಾಗಿದೆ. ಪಟಪಟ ಉದ್ದಿನ ಬೇಳೆಯಂತೆ ಬಿದ್ದ ಈ ಮಳೆಗೆ ಜನರು ಕಕ್ಕಾಬಿಕ್ಕಿಯಾದರು. ದ್ವಿಚಕ್ರ ವಾಹನ, ಕಾರುಗಳ ಮೇಲೆ ಬಿಳಿ ಬಣ್ಣದ ಮಳೆ ಬಿದ್ದು ಕಲೆ ಮೂಡಿಸಿತು. ಉಡುಪಿ ನಗರದಲ್ಲಿ ಮಾತ್ರ ಈ ರೀತಿಯ ಮಳೆಯಾಗಿರುವ ಮಾಹಿತಿ ಇದೆ. ಕೈಗಾರಿಕೆಗಳ ಹಾರುಬೂದಿ ಕಾರಣ ಇರಬಹುದೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭೂಗರ್ಭ ಶಾಸ್ತ್ರಜ್ಞ ಡಾ.ಉದಯಶಂಕರ್, ಇದೇ ರೀತಿ ಕೆಂಪು ಬಣ್ಣದಲ್ಲಿ 10 ದಿನಗಳ ಹಿಂದೆ ಕೆಲವೆಡೆ ತುಂತುರು ಮಳೆ ಸುರಿದಿತ್ತು. ಇದಕ್ಕೆ ನಿಖರ ಕಾರಣ ತಿಳಿಯಲು ಸಾಧ್ಯವಿಲ್ಲ. ಮಳೆ ಆರಂಭವಾಗುವ ಸಮಯದಲ್ಲಿ ಆಮ್ಲೀಯ ಮಳೆ ಬೀಳುವುದು ಸಾಮಾನ್ಯ. ಈಗ ಇಷ್ಟೊಂದು ಮಳೆಯಾದ ಬಳಿಕ ಇಂಥ ಘಟನೆ ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ. ಉಡುಪಿಯಲ್ಲಿ ಹಾರುಬೂದಿ ಸೂಸುವ ಕೈಗಾರಿಕೆಗಳಾಗಲಿ, ದೊಡ್ಡ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಮಾಡುವಂತ ಕೈಗಾರಿಕೆ ಘಟಕಗಳು ಇಲ್ಲ; ಆದರೂ ಈ ರೀತಿ ಮಳೆಯಾಗಿರುವುದು ವಿಚಿತ್ರವಾಗಿದೆ. ಪ್ರಕೃತಿಯಲ್ಲಿ ಸಂಭವಿಸುವ ಇಂಥ ಕೆಲವು ವಿಚಾರಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂದಿದ್ದಾರೆ.
ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ…
ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ ರಾಷ್ಟ್ರೀಯ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ದರ್ಶನ್ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…
ದ. ಕ, ಉಡುಪಿ ಸೇರಿದಂತೆ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …
ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…
ಮಂಗಳೂರು: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…