ಉಡುಪಿ: ಇದೇ ಬರುವ ಅಕ್ಟೋಬರ್ .12 ಶನಿವಾರ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮಕ್ಕಳ ಜ್ಞಾನ ವಿಕಸನ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ನಕಾರಾತ್ಮಕ ಶಕ್ತಿಯನ್ನು ತೆಗೆದು ಧನಾತ್ಮಕ ಶಕ್ತಿ ಜಾಗ್ರತಗೊಳಿಸುವುದು.ದೇಹದ ಆಧ್ಯಾತ್ಮ ಕೇಂದ್ರ ಜಾಗರಣಗೊಳಿಸುವುದು.ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಧ್ಯಾನ ಕ್ರಿಯೆ ಬಗ್ಗೆ ಮಾಹಿತಿ. ಮಕ್ಕಳ ಮಾನಸಿಕ , ಆರೋಗ್ಯ ವಿಕಾಸನ.ಮಕ್ಕಳ ಸಣ್ಣಪುಟ್ಟ ತಪ್ಪು ನಡವಳಿಕೆ ಯಿಂದ ಭವಿಷ್ಯದಲ್ಲಿ ಮುಂದೆ ಬರುವ ಸಮಸ್ಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು.ಹಿರಿಯರಿಗೆ ಗೌರವಿಸುವುದು ಹೇಗೆ ಮತ್ತು ಅದರಿಂದ ಆಗುವ ಶೇಯಸ್ಸಿನ ಬಗ್ಗೆ ಮಾಹಿತಿ.ಜೀವನಕ್ಕೆ ಗುರಿ ಮತ್ತು ಅದರತ್ತ ಹೋಗುವ ದಾರಿ ಇವುಗಳ ಬಗ್ಗೆ ಶಿಭಿರ ದಲ್ಲಿ ಮಕ್ಕಳಿಗೆ ವಿಷೇಶ ತರಬೇತಿ ನೀಡಲಾಗುತ್ತದೆ.
“ಮಕ್ಕಳೇ ವಿಶ್ವದ ಮುಂದಿನ ಭವಿಷ್ಯ” ಎಂಬ ಕಾರ್ಯಕ್ರಮವನ್ನು ರಾಜ್ಯದ ಅನೇಕ ಕಡೆ ಆಯೋಜಿಸಿದ ಮಹಾನ್ ಸಂತ ಗುರೂಜಿ ಸಾಯಿ ಈಶ್ವರ್ ಇವರು ಈ ಶಿಬಿರವನ್ನು ಆಯೋಜಿಸಿದ್ದಾರೆ.
ಒಂದು ಆರೋಗ್ಯಕರ ಮನೆಯ ಪರಿಸರದಲ್ಲಿ ಮಕ್ಕಳ ಬೆಳವಣಿಗೆ, ಮಕ್ಕಳ ಜ್ಞಾನದ ಸರ್ವತೋಮುಖ ವಿಕಾಸಕ್ಕೆ ದಾರಿಯಾಗಲಿದೆ ಈ ಶಿಬಿರ, ಮಕ್ಕಳಿಗೆ ನಿಯಮಿತ ಬದುಕುವ ದಾರಿ ಯೊಂದಿಗೆ ಅವರ ದೇಹದಲ್ಲಿಯ ಆತ್ಮ , ತೇಜಸ್ವು (AURA) ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಉತ್ತಮ ಸಂಸ್ಕೃತಿ , ಸಂಸ್ಕಾರಯುತ ಜೀವನ ರೂಪಿಸಲು ಈ ಶಿಬಿರ ಮಾರ್ಗದರ್ಶನ ನೀಡುತ್ತದೆ.
ಶಿಬಿರದಲ್ಲಿ 7 ರಿಂದ 18 ವರ್ಷ ಪ್ರಾಯದ ಮಕ್ಕಳು ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಶ್ರೀಮತಿ ಸ್ನೇಹಾ ಸಂಪತ್ ಶೆಟ್ಟಿ 9731028652, ಪ್ರಸಾದ್ ಎಸ್ ಅಮೀನ್ 7619115623 ಇವರನ್ನು ಸಂಪರ್ಕಿಸಲು ಸಾಯಿ ಸಾಂತ್ವನ ಮಂದಿರ (ಟ್ರಸ್ಟ್) ತಿಳಿಸಿದೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…