ಉಡುಪಿ: ಇದೇ ಬರುವ ಅಕ್ಟೋಬರ್ .12 ಶನಿವಾರ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮಕ್ಕಳ ಜ್ಞಾನ ವಿಕಸನ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ನಕಾರಾತ್ಮಕ ಶಕ್ತಿಯನ್ನು ತೆಗೆದು ಧನಾತ್ಮಕ ಶಕ್ತಿ ಜಾಗ್ರತಗೊಳಿಸುವುದು.ದೇಹದ ಆಧ್ಯಾತ್ಮ ಕೇಂದ್ರ ಜಾಗರಣಗೊಳಿಸುವುದು.ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಧ್ಯಾನ ಕ್ರಿಯೆ ಬಗ್ಗೆ ಮಾಹಿತಿ. ಮಕ್ಕಳ ಮಾನಸಿಕ , ಆರೋಗ್ಯ ವಿಕಾಸನ.ಮಕ್ಕಳ ಸಣ್ಣಪುಟ್ಟ ತಪ್ಪು ನಡವಳಿಕೆ ಯಿಂದ ಭವಿಷ್ಯದಲ್ಲಿ ಮುಂದೆ ಬರುವ ಸಮಸ್ಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು.ಹಿರಿಯರಿಗೆ ಗೌರವಿಸುವುದು ಹೇಗೆ ಮತ್ತು ಅದರಿಂದ ಆಗುವ ಶೇಯಸ್ಸಿನ ಬಗ್ಗೆ ಮಾಹಿತಿ.ಜೀವನಕ್ಕೆ ಗುರಿ ಮತ್ತು ಅದರತ್ತ ಹೋಗುವ ದಾರಿ ಇವುಗಳ ಬಗ್ಗೆ ಶಿಭಿರ ದಲ್ಲಿ ಮಕ್ಕಳಿಗೆ ವಿಷೇಶ ತರಬೇತಿ ನೀಡಲಾಗುತ್ತದೆ.
“ಮಕ್ಕಳೇ ವಿಶ್ವದ ಮುಂದಿನ ಭವಿಷ್ಯ” ಎಂಬ ಕಾರ್ಯಕ್ರಮವನ್ನು ರಾಜ್ಯದ ಅನೇಕ ಕಡೆ ಆಯೋಜಿಸಿದ ಮಹಾನ್ ಸಂತ ಗುರೂಜಿ ಸಾಯಿ ಈಶ್ವರ್ ಇವರು ಈ ಶಿಬಿರವನ್ನು ಆಯೋಜಿಸಿದ್ದಾರೆ.
ಒಂದು ಆರೋಗ್ಯಕರ ಮನೆಯ ಪರಿಸರದಲ್ಲಿ ಮಕ್ಕಳ ಬೆಳವಣಿಗೆ, ಮಕ್ಕಳ ಜ್ಞಾನದ ಸರ್ವತೋಮುಖ ವಿಕಾಸಕ್ಕೆ ದಾರಿಯಾಗಲಿದೆ ಈ ಶಿಬಿರ, ಮಕ್ಕಳಿಗೆ ನಿಯಮಿತ ಬದುಕುವ ದಾರಿ ಯೊಂದಿಗೆ ಅವರ ದೇಹದಲ್ಲಿಯ ಆತ್ಮ , ತೇಜಸ್ವು (AURA) ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಉತ್ತಮ ಸಂಸ್ಕೃತಿ , ಸಂಸ್ಕಾರಯುತ ಜೀವನ ರೂಪಿಸಲು ಈ ಶಿಬಿರ ಮಾರ್ಗದರ್ಶನ ನೀಡುತ್ತದೆ.
ಶಿಬಿರದಲ್ಲಿ 7 ರಿಂದ 18 ವರ್ಷ ಪ್ರಾಯದ ಮಕ್ಕಳು ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಶ್ರೀಮತಿ ಸ್ನೇಹಾ ಸಂಪತ್ ಶೆಟ್ಟಿ 9731028652, ಪ್ರಸಾದ್ ಎಸ್ ಅಮೀನ್ 7619115623 ಇವರನ್ನು ಸಂಪರ್ಕಿಸಲು ಸಾಯಿ ಸಾಂತ್ವನ ಮಂದಿರ (ಟ್ರಸ್ಟ್) ತಿಳಿಸಿದೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್ಲೈನ್ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…