ಉಡುಪಿ: ಜೀವನದಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯಿಂದಾಗಿ ಭೀಕ್ಷಾಟನೆಯಿಂದ ಉಡುಪಿಯಲ್ಲಿ ಜೀವನ ನಿರ್ವಹಿಸುತ್ತಿದ್ದ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ, ಉಡುಪಿಯ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ ಸಿಬ್ಬಂದಿಯವರು ವೃದ್ಧರನ್ನು ಸುರಕ್ಷಿತವಾಗಿ ಊರಾದ ಚೆನ್ನೈಗೆ ರವಾನಿಸಿದರು.
ಪ್ರತಿ ನಿತ್ಯ ಮುಂಜಾನೆ ಮಲಬಾರ್ ಗೋಲ್ಡ್ ಸಂಸ್ಥೆಯು ಪತ್ರಿ ನಿತ್ಯ ಮುಂಜಾನೆ ನಗರದಲ್ಲಿ ನೆಲೆಕಂಡಿರುವ ಅನಾಥರಿಗೆ ಅಸಹಾಯಕರಿಗೆ ಉಪಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಆ ಸಮಯದಲ್ಲಿ ವೃದ್ದರು ಆಹಾರದ ಪೊಟ್ಟಣವನ್ನು ಸ್ವೀಕರಿಸುತ್ತಿದ್ದರು. ತನ್ನ ಹೆಸರು ಎಂ.ಪ್ರಭಾವಾಸನ್ ಚೆನ್ನೈಯ ನಿವಾಸಿ, ಅಸಹಾಯಕ ಪರಿಸ್ಥಿತಿಯಲ್ಲಿರುವೆನು ಊರಿಗೆ ಹೋಗಲು ವ್ಯವಸ್ಥೆಗೊಳಿಸುವಂತೆ ಆಹಾರ ಪೊಟ್ಟಣ ವಿತರಣಾ ಸಿಬ್ಬಂದಿಯವರಲ್ಲಿ ಹೇಳಿಕೊಂಡಿದ್ದರು. ವಿಷಯ ತಿಳಿದ ಮಲಬಾರ್ ಗೋಲ್ಡ್ ಮಳಿಗೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ನೆರವಿಗೆ ಬಂದು, ವೃದ್ಧರನ್ನು ಚಿಕಿತ್ಸೆ ಒಳಪಡಿಸಿ, ಊರಿಗೆ ರವಾನಿಸಿದರು.
ಕಾರ್ಯಚರಣೆಯಲ್ಲಿ ಹಫೀಝ್ ರೆಹಮಾನ್ ಶಾಖಾ ಮುಖ್ಯಸ್ಥರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ತಂಝೀಮ್ ಶಿರ್ವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಾರ್ಕೆಟಿಂಗ್ ವ್ಯವಸ್ಥಾಪಕರು, ಸಿರಾಜ್ ದ್ದೀನ್ ವೈ ಪ್ರಾದೇಶಿಕ ಸಂಯೋಜಕರು ಕರ್ನಾಟಕ ತನಲ್, ಸಿಂಧೂ ಚೆನ್ನೈ ತನಲ್ ಪ್ರತಿನಿಧಿ ರಿಂಷಾದ್ ಮುಖ್ಯಸ್ಥರು ಪುನರ್ವಸತಿ ಕೇಂದ್ರ ತನಲ್ ಭಾಗಿಯಾಗಿದ್ದರು
ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು ಉಡುಪಿ: ಮುದರಂಗಡಿ ಗ್ರಾ.ಪಂ ಮಾಜಿ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್…
ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು ಶಿಮ್ಲಾ :…
ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 32ನೇ ಕಂತಿನ ಹಣ ಬಿಡುಗಡೆಯಾಗಿದೆ.…
ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ?…
ಶಿರ್ವ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು ಶಿರ್ವ : ರಸ್ತೆ ದಾಟಲು ನಿಂತಿದ್ದ…