Featured

ಉಡುಪಿ: ಅ. 3 ರಿಂದ  12 ರವರೆಗೆ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್ – vishwanews24

ಉಡುಪಿ: ಅ. 3 ರಿಂದ  12 ರವರೆಗೆ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್

      ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆದಸರಾ ದರ್ಶನಿ-2024” ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ  ಕಾರ್ಯಾಚರಿಸಲಾಗುತ್ತಿದೆ.

ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30 ಕ್ಕೆ ತಲುಪಿ, 11.00 ಕ್ಕೆ ಹೊರಟು, ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11.30 ಕ್ಕೆ ತಲುಪಿ, ಮಧ್ಯಾಹ್ನ 12 ಕ್ಕೆ ಹೊರಟು, ಕಮಲಶಿಲೆ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1.30 ಕ್ಕೆ ತಲುಪಿ, ಮಧ್ಯಾಹ್ನ ಊಟದ ನಂತರ, ಮಧ್ಯಾಹ್ನ 3 ಕ್ಕೆ ಹೊರಟು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಜೆ 4.30 ಕ್ಕೆ ತಲುಪಿ, ಸಂಜೆ 4.45 ಕ್ಕೆ ಹೊರಟು, ನೀಲಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಬಸ್ ಸಂಜೆ 5.15 ಕ್ಕೆ ತಲುಪಿ, ಸಂಜೆ 5.30 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6.15 ಹಾಗೂ ಉಡುಪಿ ಘಟಕ್ಕೆ ಸಂಜೆ 6.30 ಗಂಟೆಗೆ ಬಸ್ ತಲುಪಲಿದೆ.

     ಒಟ್ಟು 223 ಕಿ.ಮೀ ಇದ್ದು, ಪ್ರಪೋಸಲ್ ದರ ವಯಸ್ಕರಿಗೆ 400 ರೂ ಹಾಗೂ ಮಕ್ಕಳಿಗೆ 350 ರೂ ನಿಗಧಿಪಡಿಸಲಾಗಿದೆ.

ಪ್ಯಾಕೇಜ್ 2. ಕ್ಷೇತ್ರ ದರ್ಶನ : ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8.30 ಕ್ಕೆ ಬಸ್ ಹೊರಟು, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಳಗ್ಗೆ 8.45 ಕ್ಕೆ ತಲುಪಿ, ಬೆಳಗ್ಗೆ 9.25 ಕ್ಕೆ ಹೊರಟು, ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 9.45 ಕ್ಕೆ ತಲುಪಿ, ಬೆಳಗ್ಗೆ 10.15 ಕ್ಕೆ ಹೊರಟು, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 10.25 ಕ್ಕೆ ತಲುಪಿ, ಬೆಳಗ್ಗೆ 10.45 ಕ್ಕೆ ಹೊರಟು, ಮರವಂತೆಗೆ ಬೆಳಗ್ಗೆ 11.15 ಕ್ಕೆ ತಲುಪಿ, ಬೆಳಗ್ಗೆ 11.45 ಕ್ಕೆ ಅಲ್ಲಿಂದ ಹೊರಟು, ಮುಡೇಶ್ವರ ವನ್ನು ಮಧ್ಯಾಹ್ನ 1 ಗಂಟೆಗೆ ತಲುಪಿ, ಮಧ್ಯಾಹ್ನದ ಊಟದ ನಂತರ 2.30 ಕ್ಕೆ ಬಸ್ ಹೊರಟು, ಇಡಗುಂಜಿಗೆ ಮಧ್ಯಾಹ್ನ 3 ಕ್ಕೆ ತಲುಪಿ, ಮಧ್ಯಾಹ್ನ 3.30 ಕ್ಕೆ ಹೊರಟು, ಅಪ್ಸರಕೊಂಡಕ್ಕೆ ಬಸ್ ಸಂಜೆ 3.50 ಕ್ಕೆ ತಲುಪಿ, ಅಲ್ಲಿಂದ ಸಂಜೆ 4.30 ಕ್ಕೆ ಹೊರಟು, ಕಾಸರಕೋಡ್ ಇಕೋಬೀಚ್ಗೆ sಸಂಜೆ 4.45 ಕ್ಕೆ ತಲುಪಿ, ಅಲ್ಲಿಂದ ಸಂಜೆ 5.45 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್ ತಲುಪುವ ರಾತ್ರಿ 8.30 ಹಾಗೂ ಉಡುಪಿ ಘಟಕಕ್ಕೆ ರಾತ್ರಿ 8.45 ಕ್ಕೆ ಬಸ್ ತಲುಪಲಿದೆ.

  ಒಟ್ಟು 281 ಕಿ.ಮೀ ಗೆ ಪ್ರಪೋಸಲ್ ದರ ವಯಸ್ಕರಿಗೆ 500 ರೂ ಹಾಗೂ ಮಕ್ಕಳಿಗೆ 400 ರೂ. ನಿಗಧಿಪಡಿಸಿದ್ದು, online ಬುಕ್ಕಿಂಗ್ಗಾಗಿ www.ksrtc.in  ಮತ್ತು ಮುಂಗಡ ಬುಕ್ಕಿಂಗ್ಗಾಗಿ ಡಾ.ವಿ.ಎಸ್ ಆಚಾರ್ಯ ಬಸ್ ನಿಲ್ದಾಣ, ಉಡುಪಿ ಮೊ.ನಂ: 9663266400 ಅನ್ನು ಸಂಪರ್ಕಿಸಬಹುದಾಗಿದೆ ಎಂದು .ರಾ..ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.

Vishwa News 24

Recent Posts

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

13 minutes ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

26 minutes ago

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ : ಪ್ರಿಯಾಂಕ್ ಖರ್ಗೆ – vishwanews24

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ .. ಜೈಲಿನಲ್ಲಿನ ಕೆಲವು ಅಧಿಕಾರಿಗಳು ತಮ್ಮ ಹಳೆಯ ಚಾಳಿ…

52 minutes ago

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು – vishwanews24

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…

1 hour ago

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು  ತಂಬಾಕು ಮತ್ತು ನಿಕೋಟಿನ್ ಹೊಂದಿರುವ…

1 hour ago

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

2 hours ago