ಉಡುಪಿ: ಆನ್ಲೈನ್ ಟ್ರೇಡಿಂಗ್ ಮೂಲಕ ದುಪ್ಪಟ್ಟು ಲಾಭಾಂಶ ಪಡೆಯಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 18,59,500 ರೂ. ವಂಚಿಸಿರುವ ಘಟನೆ ನಡೆಸಿದೆ.
ಬ್ರಹ್ಮಾವರ ತಾಲೂಕಿ ಚೇರ್ಕಾಡಿ ಗ್ರಾಮದ ರವೀಂದ್ರ (31) ಅವರು ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರು. ಅವರು ರವೀಂದ್ರ ಎಂಬ ಟೆಲಿಗ್ರಾಮ್ ಐಡಿ ಹೊಂದಿದ್ದು, ಯಾರೋ ಅಪರಿಚಿತ ವ್ಯಕ್ತಿ 2004 ಎಂಬ ಟೆಲಿಗ್ರಾಮ್ ಗ್ರೂಪ್ಗೆ ಅವರನ್ನು ಸುಮಾರು 8 ತಿಂಗಳ ಹಿಂದೆ ಸೇರಿಸಿದ್ದು, ಈಗ್ರೂಪ್ನಲ್ಲಿ KELLY ಮೊ. ನಂಬ್ರ 7447418627 ನೇರವರು ಟ್ರೇಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದಲ್ಲಿ ಹಣಗಳಿಸುವ ವಿಧಾನದ ಬಗ್ಗೆ ಹೇಳಿ ಕೊಡುವುದಾಗಿ ಮೆಸೇಜ್ ಕಳುಹಿಸಿಸುತ್ತಿದ್ದರು. ಅನಂತರ ರವೀಂದ್ರ ಅವರಿಗೆ 7447418627 ದೂರವಾಣಿಯಿಂದ ಟೆಲಿಗ್ರಾಂ ಐಡಿಗೆ ಪರ್ಸನಲ್ ಆಗಿ ಮೆಸೇಜ್ ಮಾಡಿ ಟ್ರೇಡಿಂಗ್ ಬಗ್ಗೆ ತಿಳಿಸಿಕೊಡುವುದಾಗಿ ಹಾಗೂ ಟ್ರೇಡಿಂಗ್ನಿಂದ ಬಂದ ಲಾಭಾಂಶದ ವಿವರಗಳ ಬಗ್ಗೆ ಗ್ರೂಪ್ನಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದ್ದರು.
ಅವರ ಬಳಿ WI INDEX(http://h5.wealthindex.help) ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಅಕೌಂಟ್ ಕ್ರಿಯೇಟ್ ಮಾಡಲು ತಿಳಿಸಿದಂತೆ ರವೀಂದ್ರ ಅವರು ತನ್ನ ಹೆಸರಿನಲ್ಲಿ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡಿರುತ್ತಾರೆ. ಅನಂತರ 2004 ಎಂಬ ಟೆಲಿಗ್ರಾಂ ಗ್ರೂಪ್ನಲ್ಲಿ ಅಪರಿಚಿತ ವ್ಯಕ್ತಿ KELLY ಎಂಬವರು ಟ್ರೇಡಿಂಗ್ ನಲ್ಲಿ ಲಾಭಾಂಶ ಗಳಿಸುವ ಬಗ್ಗೆ ಮಾಹಿತಿ ನೀಡುತ್ತಿದ್ದು ಅದನ್ನು ರವೀಂದ್ರ ಅವರು ನಂಬಿ ಅವರು ಹೇಳಿದ ವಿವಿಧ ಖಾತೆಗೆ ಹಂತ ಹಂತವಾಗಿ 18,59,500 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಅನಂತರ ರವೀಂದ್ರ ಅವರು ಹಾಕಿದ ಹಣವಾಗಲಿ, ಲಾಭಾಂಶವಾಗಲಿ ಈವರೆಗೆ ಆರೋಪಿತರು ನೀಡದೇ ನಂಬಿಸಿ ವಂಚಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…