ಉಡುಪಿ ಉತ್ಸವ : ದಿನೇ ದಿನೇ ಹೆಚ್ಚುತ್ತಿರುವ ಜನಾಕರ್ಷಣೆ,ಆದಿತ್ಯವಾರದ ಮಜಾ ಉಡುಪಿ ಉತ್ಸವದಲ್ಲಿ ಕಳೆಯಿರಿ
ಉಡುಪಿ: ಉಡುಪಿ ಕಲ್ಸಂಕ ರೋಯಲ್ ಗಾರ್ಡ್ ನಲ್ಲಿ ಆರಂಭಗೊಂಡಿರುವ ‘ಉಡುಪಿ ಉತ್ಸವ’ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಎಲ್ಲಾ ರೀತಿಯ ಶಾಪಿಂಗ್ ಜತೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಜನತೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.
ಪ್ರತೀ ದಿನ ಸಂಜೆ 4 ಗಂಟೆಯಿಂದ 9ರವರೆಗೆ ತೆರೆದುಕೊಳ್ಳುತ್ತಿರುವ ಈ ಉತ್ಸವ ಕುಟುಂಬದ ಪರಿಪೂರ್ಣ ಬಯ ಕೆಯನ್ನು ಒಂದೇ ಸೂರಿನಡಿ ಪೂರೈಸುತ್ತಿದೆ. ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು, ಮಕ್ಕಳ ಆಟೋಟ ವಸ್ತುಗಳು, ಚಿತ್ತಾಪಹರಿಸುವ ವಿವಿಧ ರಾಜ್ಯಗಳ ಸಾಂಪ್ರಾದಾಯಿಕ ಆಧುನಿಕ ಶೈಲಿಯ ಬಟ್ಟೆ ಬರೆಗಳು, ಪುಸ್ತಕ, ವಸ್ತ್ರಮಳಿಗೆ ಹೀಗೆ ಎಲ್ಲ ಆವಶ್ಯಕತೆಗಳನ್ನು ಪೂರೈಸಲಾಗುತ್ತಿದೆ.
ಮನೋರಂಜನಾ ಪ್ರಿಯರಿಗಾಗಿ ವಿನ್ಯಾಸಗೊಂಡ ಇಟಾಲಿಯನ್ ಟೊರಾಟೊರಾ, ಕ್ಯಾಟರ್ ಪಿಲ್ಲರ್, ಜಂಪಿಂಗ್ ಫ್ರಾಗ್, ಡ್ಯಾಶಿಂಗ್ ಕಾಡು, ಟೈಟಾನಿಕ್, ಮೆರ್ರಿ ಕೊಲಂಬಸ್, 3ಡಿ ಶೋ, ಲಾಫಿಂಗ್ ಹೌಸ್ ಮೊದಲಾದ 20ಕ್ಕೂ ಅಧಿಕ ಅಮ್ಯೂಸ್ಮೆಂಟ್ಗಳು ಭರಪೂರ ಮನೋರಂಜನೆ ಒದ ಗಿಸುತ್ತಿವೆ. ಅಟೋಮೊಬೈಲ್ಸ್, ಹೋಂ ಅಪ್ಲೈನ್ಸ್ಸ್, ಹೆಲ್ತ್ಕೇರ್, ಫ್ಯಾಶನ್ವೇರ್ಸ್, ಗಾರ್ಮೆಂಟ್ಸ್, ಆಂಟಿಕ್, ಫಿಟ್ಟಿಂಗ್ಸ್, ಕಾರ್ಪೆಟ್ಸ್, ಆರ್ಟಿಫಿಶಯಲ್ ಆ್ಯಂಡ್ ಆ್ಯಂಟಿಕ್ ಜುವೆಲ್ಲರಿಸ್, ಹ್ಯಾಂಡ್ಲೂಮ್, ಹ್ಯಾಂಡಿಕ್ರಾಫ್ಟ್ ವಿಭಾ ಗಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಆರಿಸುವ ವಿಫುಲ ಆಯ್ಕೆಗಳಿವೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…