ಉಡುಪಿ ಉತ್ಸವ : ದಿನೇ ದಿನೇ ಹೆಚ್ಚುತ್ತಿರುವ ಜನಾಕರ್ಷಣೆ,ಆದಿತ್ಯವಾರದ ಮಜಾ ಉಡುಪಿ ಉತ್ಸವದಲ್ಲಿ ಕಳೆಯಿರಿ
ಉಡುಪಿ: ಉಡುಪಿ ಕಲ್ಸಂಕ ರೋಯಲ್ ಗಾರ್ಡ್ ನಲ್ಲಿ ಆರಂಭಗೊಂಡಿರುವ ‘ಉಡುಪಿ ಉತ್ಸವ’ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಎಲ್ಲಾ ರೀತಿಯ ಶಾಪಿಂಗ್ ಜತೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಜನತೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.
ಪ್ರತೀ ದಿನ ಸಂಜೆ 4 ಗಂಟೆಯಿಂದ 9ರವರೆಗೆ ತೆರೆದುಕೊಳ್ಳುತ್ತಿರುವ ಈ ಉತ್ಸವ ಕುಟುಂಬದ ಪರಿಪೂರ್ಣ ಬಯ ಕೆಯನ್ನು ಒಂದೇ ಸೂರಿನಡಿ ಪೂರೈಸುತ್ತಿದೆ. ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು, ಮಕ್ಕಳ ಆಟೋಟ ವಸ್ತುಗಳು, ಚಿತ್ತಾಪಹರಿಸುವ ವಿವಿಧ ರಾಜ್ಯಗಳ ಸಾಂಪ್ರಾದಾಯಿಕ ಆಧುನಿಕ ಶೈಲಿಯ ಬಟ್ಟೆ ಬರೆಗಳು, ಪುಸ್ತಕ, ವಸ್ತ್ರಮಳಿಗೆ ಹೀಗೆ ಎಲ್ಲ ಆವಶ್ಯಕತೆಗಳನ್ನು ಪೂರೈಸಲಾಗುತ್ತಿದೆ.
ಮನೋರಂಜನಾ ಪ್ರಿಯರಿಗಾಗಿ ವಿನ್ಯಾಸಗೊಂಡ ಇಟಾಲಿಯನ್ ಟೊರಾಟೊರಾ, ಕ್ಯಾಟರ್ ಪಿಲ್ಲರ್, ಜಂಪಿಂಗ್ ಫ್ರಾಗ್, ಡ್ಯಾಶಿಂಗ್ ಕಾಡು, ಟೈಟಾನಿಕ್, ಮೆರ್ರಿ ಕೊಲಂಬಸ್, 3ಡಿ ಶೋ, ಲಾಫಿಂಗ್ ಹೌಸ್ ಮೊದಲಾದ 20ಕ್ಕೂ ಅಧಿಕ ಅಮ್ಯೂಸ್ಮೆಂಟ್ಗಳು ಭರಪೂರ ಮನೋರಂಜನೆ ಒದ ಗಿಸುತ್ತಿವೆ. ಅಟೋಮೊಬೈಲ್ಸ್, ಹೋಂ ಅಪ್ಲೈನ್ಸ್ಸ್, ಹೆಲ್ತ್ಕೇರ್, ಫ್ಯಾಶನ್ವೇರ್ಸ್, ಗಾರ್ಮೆಂಟ್ಸ್, ಆಂಟಿಕ್, ಫಿಟ್ಟಿಂಗ್ಸ್, ಕಾರ್ಪೆಟ್ಸ್, ಆರ್ಟಿಫಿಶಯಲ್ ಆ್ಯಂಡ್ ಆ್ಯಂಟಿಕ್ ಜುವೆಲ್ಲರಿಸ್, ಹ್ಯಾಂಡ್ಲೂಮ್, ಹ್ಯಾಂಡಿಕ್ರಾಫ್ಟ್ ವಿಭಾ ಗಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಆರಿಸುವ ವಿಫುಲ ಆಯ್ಕೆಗಳಿವೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…