ಉಡುಪಿ: ಇತ್ತೀಚೆಗೆ ಕೇಬಲ್ ಅಪರೇಟರುನವರು 2 ವರ್ಷಕೊಮ್ಮೆ ತಮ್ಮ ಸೆಟ್ ಆಫ್ ಬಾಕ್ಸ್ ಗಳನ್ನು ಬದಲಾವಣೆ ಮಾಡುತಿದ್ದು ಇದರಿಂದಾಗಿ ಗ್ರಾಹಕರಿಗೆ ಬಹಳ ತೊಂದರೆ ಆಗಿದೆ. ಕೆಲವೊಂದು ಕೇಬಲ್ ಅಪರೇಟರ್ ಮುಖ್ಯಸ್ಥರ ಸ್ವಂತ ಲಾಭಕ್ಕಾಗಿ ಇತರ ಕೇಬಲ್ ಅಪರೇಟರ್ ಗಳ ಮೂಲಕ ಹೊಸ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಒತ್ತಾಯಿಸುತಿದ್ದಾರೆ.
ಹೊಸ ಹೊಸ ಕಂಪೆನಿಗಳು ಕೇಬಲ್ ಉದ್ಯಮಕ್ಕೆ ಕಾಲಿಟ್ಟಿದ್ದು ಇವರುಗಳು ಗ್ರಾಹಕರಿಗೆ ಹೊಸ ಪ್ಲಾನ್ ಗಳನ್ನು ನೀಡಿದರೆ ಅದನ್ನು ಗ್ರಾಹಕರಿಗೆ ಅಪರೇಟರ್ ಗಳು ನೀಡದೆ ವಂಚಿಸುತಿದ್ದಾರೆ. ಇದೀಗ ಉಡುಪಿಗೆ ಕಾಲಿಟ್ಟಿರುವ ಗುಜರಾತ್ ಮೂಲದ ಸಂಸ್ಥೆ ಗ್ರಾಹಕರಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ಜೊತೆಗೆ ಮೂರು ತಿಂಗಳ ಮಾಸಿಕ ದರವನ್ನು ಉಚಿತವಾಗಿ ನೀಡುತಿರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಇದಾವುದು ಸೌಲಭ್ಯ ಗ್ರಾಹಕರಿಗೆ ನೀಡದೆ ಅಪರೇಟರುಗಳು ವಂಚಿಸುತಿದ್ದಾರೆ.
ಪದೇ ಪದೇ ಬದಲಾಯಿಸುವ ಈ ಪ್ರಕ್ರಿಯೆ ಹೆಚ್ಚು ಸಮಸ್ಯೆ ಆಗುತಿರುವುದು ಹಿರಿಯರಿಗೆ ಮತ್ತು ಗ್ರಾಮಾಂತರ ಜನರಿಗೆ ಅನಾನುಕೂಲ ಆಗಿದೆ. ಚಾನೆಲುಗಳ ನಂಬರ ವ್ಯತ್ಯಾಸ ಇರುವುದರಿಂದ ಮತ್ತು ಚಾನೆಲುಗಳ ಪ್ರಸಾರ ಹಿಂದಿಗಿಂತಲೂ ಕಳಪೆ ಆಗಿರುತ್ತದೆ. ಹೆಚ್ಚಿನ ಭಾಗದಲ್ಲಿ ಗ್ರಾಹಕರು ತಿರಸ್ಕರಿಸಿದರೂ ಒತ್ತಾಯ ಪೂರ್ವಕವಾಗಿ ಅಳವಡಿಸಿದ ಬಗ್ಗೆ ದೂರುಗಳು ಬರುತಿದೆ. ಗ್ರಾಹಕರು ತಮಗೆ ನೀಡಲಾದ ಮೂರು ತಿಂಗಳ ಉಚಿತ ಮಾಸಿಕ ದರದ ಸೌಲಭ್ಯ ನೀಡುವ ಬೇಡಿಕೆ ಕೇಳಿದಾಗ ಗ್ರಾಹಕರೊಂದಿಗೆ ಹಲವು ಅಪರೇಟರುಗಳು ಅನುಚಿತವಾಗಿ ವರ್ತಿಸುತಿದ್ದಾರೆ. ತಕ್ಷಣವೆ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಹಕರು ಒತ್ತಾಯಿಸುತಿದ್ದಾರೆ.
ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…