Featured

ಉಡುಪಿ: ಕಾಪು ಶಾಸಕರ ವಿರುದ್ದ ಅವಹೇಳನಕಾರಿ ಹೇಳಿಕೆ ನಿಜ ಆಗಿದ್ದರೆ ಮಾಜಿ ಸಚಿವ ಸೊರಕೆ ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ :ಕುಯಿಲಾಡಿ -Vishwanews24

ಉಡುಪಿ: ಕಾಪು ಶಾಸಕರ ವಿರುದ್ದ ಅವಹೇಳನಕಾರಿ ಹೇಳಿಕೆ ನಿಜ ಆಗಿದ್ದರೆ ಮಾಜಿ ಸಚಿವ ಸೊರಕೆ ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ :ಕುಯಿಲಾಡಿ -Vishwanews24

ಉಡುಪಿ: ಪೋಲಿಸರಿಂದ ಕಾಪು ಶಾಸಕರು ಮಾಮುಲೂ ಪಡೆಯುತ್ತಾರೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೆಸರಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು ಹೇಳಿಕೆ ನಿಜವೇ ಆಗಿದ್ದರೆ ಅವರ ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಬೆದರಿಕೆ ಹಾಕಿದ್ದಾರೆ.

ಅವರು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸೊಕರೆಯವರು ಇದಕ್ಕೆ ಸ್ಪಷ್ಟೀಕರಣ ನೀಡಬೇಕು ಇಲ್ಲವಾದಲ್ಲಿ ಸೊರಕೆಯವರು ಸಭೆ ಮಾಡುವ ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ ಎಂದರು.

ಸೊರಕೆಯವರು ಕಳೆದ ಕೆಲವು ತಿಂಗಳುಗಳಿಂದ ಕಾಪುವಿನಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ ಸಂತೋಷ ಆದರೆ ರಾಜಕೀಯಕ್ಕೂ ಇತಿ ಮಿತಿ ಇದೆ ಎಂದ ಕುಯಿಲಾಡಿದ ಇತ್ತೀಚೆಗೆ ಉದ್ಘಾಟನಾ ಸಮಾರಂಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತಂದು ಪ್ರತಿಭಟನೆಗಳನ್ನು ನಡೆಸುತ್ತಾ ಇದ್ದಾರೆ. ಸೊರಕೆಯವರ ಕಾಲದಲ್ಲಿ ಆದ ಕಾಮಾಗಾರಿ ಎಂದು ಯಾರು ಕೂಡಾ ಅಲ್ಲಗಳೆಯುತ್ತಿಲ್ಲ. ಓರ್ವ ಶಾಸಕನ ಕಾಲದಲ್ಲಿ ಯೋಜನೆಯ ಶಂಕು ಸ್ಥಾಪನೆ ಆದರೆ ಮತ್ತೋರ್ವ ಶಾಸಕನ ಕಾಲದಲ್ಲಿ ಅದು ಉದ್ಘಾಟನೆಗೊಳ್ಳುತ್ತದೆ ಇದರ ಕುರಿತು ಸ್ವಲ್ಪವಾದರೂ ಕಾಮನ್ ಸೆನ್ಸ್ ಮಾಜಿ ಶಾಸಕರಿಗೆ ಇರಬೇಕು. ಅದನ್ನು ಬಿಟ್ಟು ತಮ್ಮ ಚೇಲಾಗಳನ್ನು, ಕಾಂಗ್ರೆಸ್ ಫುಡಾರಿಗಳನ್ನು ತಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ನಮಗೆ ಇವುಗಳನ್ನು ಯಾವ ರೀತಿಯಲ್ಲಿ ಮಟ್ಟ ಹಾಕಬೇಕು ಎಂದು ಗೊತ್ತಿದೆ ಎಂದರು.

ಸೊರಕೆಯವರಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದೆ ಇಂತಹ ಘಟನೆಗಳು ಕೇವಲ ಕಾಪುವಿನಲ್ಲಿ ಮಾತ್ರ ನಡೆಯುತ್ತಿದೆ. ಸೊರಕೆಯವರು ಶಾಸಕರಾಗಿದ್ದಾಗ ಲಾಲಾಜಿ ಮೆಂಡನ್ ಕಾಲದ ಹಲವು ಕಾಮಗಾರಿಗಳ ಉದ್ಘಾಟನೆ ಆಗಿದೆ. ಆದರೆ ಈ ಯಾವ ಕಾರ್ಯಕ್ರಮಗಳಿಗೂ ಲಾಲಾಜಿ ಮೆಂಡನ್ ಅವರನ್ನು ಕರೆಯುವ ಸೌಜನ್ಯವನ್ನೂ ಸೊರಕೆಯವರು ತೋರಿಸಿಲ್ಲ ಎಂದರು.

ಸೊರಕೆಯವರಿಗೆ ಮೈಸೂರಿನ ಘಟನೆಯ ಬಗ್ಗೆ ಇಷ್ಟು ನೋವಾಗಿದ್ದು ಹೌದಾದರೆ ಹಿಂದೂ, ಕ್ರಿಶ್ಚಿಯನ್ನರ ಮಾರಣಹೋಮ ಮಾಡಿರುವ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಸರಕಾರ ಆಚರಿಸಿದಾಗ ಸೊರಕೆಯವರು ಏಕೆ ಮಾತಾಡಿಲ್ಲ? ಸೊರಕೆಯವರ ಮೊಸಳೆ ಕಣ್ಣೀರಿಗೆ ಯಾವ ಹಿಂದೂ ಕೂಡಾ ಕರಗುವುದಿಲ್ಲ. ಸೊರಕೆಯವರಿಗೆ ಅಷ್ಟು ಪ್ರೀತಿ ಇದ್ದರೆ ಶ್ರೀರಾಮ ಮಂದಿರದ ಕುರಿತು ಅವರು ನೀಡಿರುವ ಹೇಳಿಕೆಯನ್ನು ಹಿಂಡಪಡೆಯಲಿ ಎಂದರು.

ಸೊರಕೆಯವರು ಕಾಲ ಬಂದ ಹಾಗೆ ವೇಷ ಬದಲು ಮಾಡುವುದು ಬೇಡ. ಕಾಂಗ್ರೆಸ್ ನವರು ರಾಮ ಮಂದಿರಕ್ಕೆ ಎಷ್ಟು ದುಡ್ಡು ನೀಡಿದ್ದಾರೆ ಅದರ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಿ ಮೂರು ರಸ್ತೆಯಲ್ಲಿ ಸೇರಿಕೊಂಡು ಬೊಬ್ಬೆ ಹಾಕಿದ ಕೂಡಲೇ ಹಿಂದೂ ಕರಗುತ್ತಾನೆ ಎಂಬ ಭಾವನೆ ಬೇಡ. ಇನ್ನು ಮುಂದೆ ಎಲ್ಲಾ ಸಭೆಗೆ ಕೇಸರಿ ಶಾಲು ಹಾಕಿ ಬರಲಿ ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದಿಲ್ಲೆ ಎಂಬುದು ಸೊರಕೆಯವರಿಗೆ ಗೊತ್ತಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago