Featured

ಉಡುಪಿ: ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚನೆ – vishwanews24

ಉಡುಪಿ: ಸಾಲದ ಅಡಮಾನ ಚಿನ್ನ ಖರೀದಿ ಸಂಸ್ಥೆಗೆ ವಂಚಿಸಿದ ಆರೋಪಿಗಳು

RTGS ಮೂಲಕ 6 ಲಕ್ಷ ಮುಂಗಡ ಹಣ ವರ್ಗಾಹಿಸಿ ವಂಚನೆ

ಉಡುಪಿ: ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಟ್‌ & ಡೈಮಂಡ್‌ ಪೈನಾನ್ಸ್‌ ನಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ.

ಕೆಲಸ ಮಾಡುವ ಸಂಸ್ಥೆಯು ಸಾರ್ವಜನಿಕರ ಚಿನ್ನದ ಸಾಲಗಳನ್ನು ಪಡೆದು ಚಿನ್ನ ಬಿಡಿಸಿ ಕೊಳ್ಳಲು ಸಾದ್ಯವಾಗದ ಚಿನ್ನವನ್ನು ಗ್ರಾಹಕರ ಪರವಾಗಿ ಬಿಡಿಸಿಕೊಂಡು ನೆರವಾಗಿ ಚಿನ್ನವನ್ನು ಖರೀದಿ ಮಾಡುವ ವ್ಯವಹಾರವನ್ನು ಮಾಡುತ್ತದೆ. ಜನವರಿ 2 ರಂದು ಕಂಪನಿಯ ಮ್ಯಾನೇಜರ್‌ ಅಭಿ ಮತ್ತು ಕಂಪನಿಯಲ್ಲಿ ಪೀಲ್ಡ್‌ ಆಫೀಸರ್‌ ಕೆಲಸ ಮಾಡಿ ಕೊಂಡಿರುವ ಕವನ್ ಎಂಬುವವರಲ್ಲಿ ಉಡುಪಿಯಿಂದ ಅಭ್ಬಾಸ್‌ ಎಂಬುವವರು ಕಛೇರಿಗೆ ಪೋನ್‌ ಮಾಡಿ ಉಡುಪಿಯಲ್ಲಿ ಸೊಸೈಟಿಯಲ್ಲಿ ಚಿನ್ನವನ್ನು ಅಡವಿಟ್ಟಿರುತ್ತಾರೆ. ಉಡುಪಿಗೆ ಹೋಗಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸಿಕೊಂಡು ಬರುವಂತೆ ಕಳುಹಿಸಿರುತ್ತಾರೆ.

ಕಳುಹಿಸಿದ ನಂತರ ದೂರುದಾರರು ಅಬ್ಬಾಸ್‌ ಎಂಬುವವರನ್ನು 03/01/2025 ರಂದು ಕಾಪು ತಾಲೂಕು ಉಚ್ಚಿಲ ಬಳಿ ಮಧ್ಯಾಹ್ನ 02:00 ಗಂಟೆಗೆ ಭೇಟಿ ಮಾಡಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸುವ ಬಗ್ಗೆ ಮಾತನಾಡಿ ಕೊಂಡು ಬೆಳಪು ವ್ಯವಸಾಯ ಸಹಕಾರಿ ಸಂಘ, ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿ ಲಿಮಿಡೆಟ್‌ ಮತ್ತು ಕುಂದಾಪುರ ವ್ಯವಸಾಯ ಸಹಕಾರಿ ಸಂಘ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಈ ಬ್ಯಾಂಕ್‌ ಗಳಲ್ಲಿ ಚಿನ್ನ ಅಡವಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಅಬ್ಬಾಸ್‌ ನ ಕುಂದಾಪುರ ಫೆಡರಲ್‌ ಬ್ಯಾಂಕ್‌ ನ ಖಾತೆ ಗೆ RTGS ಮೂಲಕ ಮುಂಗಡ ಹಣವನ್ನು 6 ಲಕ್ಷ ರೂಪಾಯಿ ಹಣವನ್ನು ವರ್ಗಾಹಿಸಿರುವುದಾಗಿದೆ. ನಂತರ ಜನವರಿ 4 ರಂದು ದೂರುದಾರ ಕಾರ್ತಿಕ್ ಅವರು ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಆರೋಪಿತರಾದ ಮೊಹಮ್ಮದ್‌ ಹನೀಫ್‌ ಮತ್ತು ಹೆಸರು ಗೊತ್ತಿಲ್ಲದ ವ್ಯಕ್ತಿ ಹಾಜರಾತಿಯಲ್ಲಿ 44 ಗ್ರಾಮ್‌ ಮತ್ತು ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿ ಲಿಮಿಡೆಟ್‌ ನಲ್ಲಿ ಆರೋಪಿತರಾದ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 16 ಗ್ರಾಮ್‌ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಸಂತೆಕಟ್ಟೆ ಯಲ್ಲಿ ಆರೋಪಿತರಾದ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 32 ಗ್ರಾಮ್‌ ಚಿನ್ನವನ್ನು ಬಿಡಿಸಿಕೊಂಡಿರುದ್ದಾರೆ.

ನಂತರ ಆರೋಪಿಯು ಕುಂದಾಪುರದಲ್ಲಿಯೂ ಚಿನ್ನ ಬಿಡಿಸಲು ಹೋಗುವ ಎಂದು ದೂರುದಾರರನ್ನು ಉಡುಪಿ ಬಸ್‌ ನಿಲ್ದಾಣಕ್ಕೆ ಬರಲು ಹೇಳಿ ದೂರುದಾರ ಕಾರ್ತಿಕ್ ಅವರನ್ನು ಕಾಯಿಸಿ ನಂತರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾರ್ತಿಕ್ ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ಬ್ಯಾಂಕ್‌ ಸಿಬ್ಬಂದಿಯವರಲ್ಲಿ ವಿಚಾರಿಸಿರುತ್ತಾರೆ.ಆದರೂ ಈ ಬಗ್ಗೆ ಸಂಶಯಗೊಂಡು ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ತಿಳಿದುಕೊಳ್ಳಲು ಉಡುಪಿಯ ಚಿನ್ನ ಟೇಸ್ಟಿಂಗ್‌ ಗೆ ಮಧ್ಯಾಹ್ನ 01:15 ಗಂಟೆಗೆ ಅಂಗಡಿಗೆ ಹೋಗಿ ಪರೀಕ್ಷಿಸಿದ್ದಲ್ಲಿ ತಾನು ಬ್ಯಾಂಕ್‌ ನಿಂದ ಬಿಡಿಸಿದ ಚಿನ್ನದ ಆಭರಣಗಳು ನಕಲಿ ಎಂದು ತಿಳಿದು ಬಂದಿರುತ್ತದೆ. ಆರೋಪಿಗಳು ಸೊಸೈಟಿಯಲ್ಲಿ ಚಿನ್ನವನ್ನು ಅಡವಿರಿಸಿರುವುದಾಗಿ ಹೇಳಿ ಚಿನ್ನ ಬಿಡಿಸಲು ಹಣ ವಿಲ್ಲ ಎಂದು ಹೇಳಿ ದೂರುದಾರರಿಗೆ ನಕಲಿ ಚಿನ್ನ ನೀಡಿ ಪಿರ್ಯಾದಿದಾರರ ಸಂಸ್ಥೆಗೆ 6 ಲಕ್ಷ ರೂಪಾಯಿ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 5/2025, ಕಲಂ: 318(4), 318(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Vishwa News 24

Recent Posts

ಮೀನುಗಾರರಿಗೆ ಸಬ್ಸಿಡಿ ರಹಿತ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ – vishwanews24

ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…

3 minutes ago

ಕಡಬ : ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪ್ರಕರಣ ದಾಖಲು – vishwanews24

ಕಡಬ : ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪ್ರಕರಣ ದಾಖಲು ಕಡಬ : ಜಲಪಾತಕ್ಕೆ ತೆರಳಿದ್ದ…

14 minutes ago

ಅ.4ರಿಂದ ಬೆಂಗಳೂರು – ಮಂಗಳೂರು ನಡುವಿನ ಹಲವು ರೈಲುಗಳ ಸಂಚಾರ ರದ್ದು – vishwanews24

ಹಳಿ ನಿರ್ವಹಣೆ: ಅ.4ರಿಂದ ಬೆಂಗಳೂರು - ಮಂಗಳೂರು ನಡುವಿನ ಹಲವು ರೈಲುಗಳ ಸಂಚಾರ ರದ್ದು ಮಂಗಳೂರು: ಶಿರಿಬಾಗಿಲು- ಯಡಕುಮೇರಿ ರೈಲು…

21 minutes ago

ಮುಂಬೈ ಭೂಕುಸಿತ: ಇಬ್ಬರು ಬಲಿ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – vishwanews24

ಮುಂಬೈ ಭೂಕುಸಿತ: ಇಬ್ಬರು ಬಲಿ, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಮುಂಬೈ: ಘಾಟ್ಕೋಪರ್‌ನ ಚಿರಾಗ್ ನಗರದ ಗೌಸಿಯಾ ಚಾಲ್‌ನಲ್ಲಿ ಬುಧವಾರ…

37 minutes ago

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ : ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ – vishwanews24

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ : ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ…

1 hour ago

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ -vishwanews24

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…

22 hours ago