Featured

ಉಡುಪಿ :ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳಲ್ಲಿ ಹಿಜಾಬ್‌ ಕೂಡ ಒಂದು : ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ – Vishwanews24

ಉಡುಪಿ : ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳಲ್ಲಿ ಹಿಜಾಬ್‌ ಕೂಡ ಅದೇ ಪುಸ್ತಕದ ಒಂದು ಕಥೆ : ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ – Vishwanews24

ಉಡುಪಿ: ಹಿಜಾಬ್‌ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಜನೆಗಳು ಸಂಪೂರ್ಣ ವಿಫಲವಾದ ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳ ಹಲವಾರು ಆಗಿದ್ದು ಹಿಜಾಬ್‌ ಕೂಡ ಅದೇ ಪುಸ್ತಕದ ಒಂದು ಕಥೆಯಾಗಿದೆ. ಇತ್ತೀಚೆಗೆ ನಾರಾಯಣ ಗುರುಗಳ ಟ್ಯಾಬ್ಲೋ ವಿಚಾರವನ್ನು ಮರೆಮಾಚಲು ಹಿಜಾಬ್‌ ವಿಚಾರ ಮುಂದಿಟ್ಟು ಅವರ ರಾಜಕೀಯದ ದಾಳವಾಗಿ ಉಪಯೋಗಿಸುವುದು ನಿಜಕ್ಕೂ ಖಂಡನೀಯ. ವಿದ್ಯಾರ್ಥಿಗಳ ಜೀವನದಲ್ಲಿ ಓದಿನ ಬದಲು ಧರ್ಮದ ಅಮಲನ್ನು ಏರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಅಜೇಂಡಾ ಆಗಿದೆ. ಅಲ್ಲದೆ ವಿನಾಕಾರಣ ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡುವ ಬಿಜೆಪಿಗರ ವರ್ತನೆ ಖಂಡನೀಯವಾಗಿದೆ.

ಕೇಂದ್ರ ಸರಕಾರದ ವಿಫಲ ಬಜೆಟ್‌ ನ ಮರೆಮಾಚಲು ಕೂಡ ಹಿಜಾಬ್‌ ವಿಚಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತದೆ. ಸದಾ ಯುವಜನರ ಕುರಿತು ಮಾತನಾಡುವ ಮೋದಿಯವರ ಯುವ ಜನರ ಕಾಳಜಿ ಬಜೆಟ್‌ ಎಲ್ಲಿಯೂ ಕಾಣಿಸುತ್ತಿಲ್ಲ ಭಾಷಣಗಳಿಗೆ ಸೀಮಿತವಾಗಿರುವ ಮೋದಿಯವರ ಮಾತು ಬಿಜೆಪಿಗರು ಮನಸ್ಸನ್ನು ಬೇರೆ ಕಡೆ ವಿಕೇಂದ್ರಿಕರಿಸಲು ಹಿಜಾಬ್‌ ನಂತಹ ಅನಗತ್ಯ ವಿಷಯಗಳನ್ನು ಹುಟ್ಟು ಹಾಕಿ ಎತ್ತಿ ಹಿಡಿಯೋದು ಸರ್ವೆ ಸಾಮಾನ್ಯವಾಗಿದೆ. ಬಿಜೆಪಿಗರ ಇಂತಹ ಸಮಯಾನುಸಾರದ ಕಥೆಗಳನ್ನು ನಂಬಲು ಜನ ಇಲ್ಲಿ ಯಾರೂ ಮೂರ್ಖರಿಲ್ಲ. ವಿದ್ಯಾರ್ಥಿಗಳನ್ನು ಮುಂದೆ ಇಟ್ಟು ರಾಜಕೀಯವನ್ನು ಮಾಡುವುದನ್ನು ಬಿಟ್ಟು ನೀವೆ ಹುಟ್ಟಿಸಿದ ಹಿಜಾಬ್‌ ವಿಚಾರವನ್ನು ಸರಿಪಡಿಸಿ ಇಲ್ಲ ನಿಮ್ಮ ಸರಕಾರ ಕೊಟ್ಟಿರೋ ಆಶ್ವಾಸನೆಗೆಳನ್ನು ಈಡೇರಿಸಲಾಗದೆ ಬಿಜೆಪಿ ನಾಯಕರೂ ಕೂಡ ಹಿಜಾಬ್‌ ಹಾಕಿಕೊಂಡು ಓಡಾಡುವ ಸನ್ನಿವೇಶ ಬಂದೀತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

1 day ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago