ಉಡುಪಿ

ಉಡುಪಿ ಜಿಲ್ಲಾ ಬಿಜೆಪಿ ಕಮಿಟಿಯಲ್ಲಿ ಬಿಲ್ಲವ-ವಿಶ್ವಕರ್ಮ-ದಲಿತ ಸಮುದಾಯಕ್ಕೆ ಮತ್ತೆ ಅನ್ಯಾಯ…???vishwanews24

ಉಡುಪಿ ಜಿಲ್ಲಾ ಬಿಜೆಪಿ ಕಮಿಟಿಯಲ್ಲಿ ಬಿಲ್ಲವ-ವಿಶ್ವಕರ್ಮ-ದಲಿತ ಸಮುದಾಯಕ್ಕೆ ಮತ್ತೆ ಅನ್ಯಾಯ…???

ಬೆಂಗಳೂರು: ಉಡುಪಿ ಜಿಲ್ಲಾ ಬಿಜೆಪಿಯ ಭಾಗಶಃ ಕಮಿಟಿ ರಚನೆಯಾಗುತ್ತಿರುವಂತೆ ಅಸಮಧಾನ ಹೊರಬಿದ್ದಿದೆ.
ಜಿಲ್ಲೆಯಲ್ಲಿ ಅತಿಹೆಚ್ಚು ಬಿಲ್ಲವ ಸಮುದಾಯದ ಮತದಾರರಿದ್ದರೂ ಕೂಡ ಕಮಿಟಿ ರಚನೆಯ ಸಮಯದಲ್ಲಿ ಬಿಲ್ಲವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಶಾಸಕ ಸ್ಥಾನದ ಟಿಕೆಟ್ ಹಂಚಿಕೆ ಸಮಯದಲ್ಲೂ ಕೂಡ ಇದೇ ರೀತಿಯ ತಾರತಮ್ಯ ಉಡುಪಿ ಜಿಲ್ಲಾ ನಡೆಸಿತ್ತು ಅನ್ನುವ ಆರೋಪ ತಣ್ಣಗಾಗುವ ಮುನ್ನ ಮತ್ತೊಂದು ಬರ ಸಿಡಿಲು ಬಿಲ್ಲವ – ವಿಶ್ವಕರ್ಮ-ದಲಿತ ಸಮುದಾಯದ ಮೇಲೆ ಬಿದ್ದಂತಾಗಿದೆ.

ಭಾಜಪದಲ್ಲಿ ದುಡಿಯಲು ಎಲ್ಲಾ ಜಾತಿಯವರು ಬೇಕು ಸ್ಥಾನ ಹಂಚಿಕೆ ಸಮಯದಲ್ಲಿ ಇದ್ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎಂಬ ಗುಸು ಗುಸು ಮಾತು ಬೂದಿಯೊಳಗಿನ ಕೆಂಡದಂತೆ ಸುಡಲು ಆರಂಭಿಸಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನವನ್ನಾದರೂ ಬಿಲ್ಲವ – ವಿಶ್ವಕರ್ಮ- ದಲಿತ ಕಮ್ಯೂನಿಟಿಗೆ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಉಡುಪಿ ಬಿಜೆಪಿ ಬೆಟ್ಟದ ಹೂವನ್ನಾಗಿಸಿದೆ ಎಂಬ ಆರೋಪ‌ ಕೇಳಿ ಬರುತ್ತಿದೆ.

ಬಿಲ್ಲವ ಸಮುದಾಯದಲ್ಲಿ ಕಾರ್ಯಕರ್ತರಿಗೆ ಅಥವಾ ನಾಯಕರಿಗೇನೂ ಕೊರತೆಯಿಲ್ಲ ಆದರೆ ಈ ರೀತಿಯ ಅನ್ಯಾಯ ಆಗಬಾರದಿತ್ತು ಅನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ತಿರುಗಲಾರಂಭಿಸಿದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಬಿಲ್ಲವ ಸಮುದಾಯದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಇಂಗಿತ ವ್ಯಕ್ತಪಡಿಸಿದ್ದರೂ ಕೂಡ ಗಾಳಿಗೆ ತೂರಿ ಪ್ರಧಾನಕಾರ್ಯದರ್ಶಿ ನೀಡುವ ಭರವಸೆ ಉಳಿದಿದ್ದು ಅದು ಕೂಡ ಇಂದು ನೀರುಪಾಲಾಗಿದೆ ಅನ್ನುವ ಚರ್ಚೆ‌ ನಡೆಯುತ್ತಿದೆ.

ಕಳೆದ ಕಮಿಟಿಯಲ್ಲೂ ಇದೇ ರೀತಿಯ ಅನ್ಯಾಯ ಉಡುಪಿ ಬಿಜೆಪಿ ಬಿಲ್ಲವರಿಗೆ ಮಾಡಿತ್ತು ಈ ಬಾರಿ ಕೂಡ ಅದೇ ತಾಳ ರಾಗವನ್ನು ಹಾಕುವ ಮುಖೇನ ಭಿನ್ನಮತಕ್ಕೆ ಪುಷ್ಟಿ ನೀಡಿದೆ ಎನ್ನುತ್ತಾರೆ.

ಈ ಬಗ್ಗೆ ಜಾತಿಯ ಬಗ್ಗೆ ಬಿಗಿ ಭಾಷಣ ಮಾಡುವ ಕೋಟಾ ಶ್ರೀನಿವಾಸ ಪೂಜಾರಿ- ಸುನಿಲ್ ಕುಮಾರ್ ವಿರುದ್ಧ ಕೂಡ ಬಿಲ್ಲವರ ಅಸಮಾಧಾನ ಹೊಗೆಯಾಡುತ್ತಿದೆ.

ಚುನಾವಣೆ ಸಮಯದಲ್ಲಿ ಮತದಾನ ಮಾಡಲು ಮಾತ್ರ ಬಿಲ್ಲವ-ವಿಶ್ವಕರ್ಮ- ದಲಿತ ಸೇರಿದಂತೆ ಇನ್ನಿತರ ಸಮುದಾಯಗಳು ಬೇಕು ಸ್ಥಾನ ಹಂಚಿಕೆ ಸಮಯದಲ್ಲಿ ಇದ್ಯಾವೂದು ಕೂಡ ಗಣನೆಗಿಲ್ಲ ಎಂಬ ಮಾತು ನಿಜವಾಗುತ್ತಿದೆ ಎನ್ನುತ್ತಿದ್ದಾರೆ.

ಇತ್ತ ವಿಶ್ವಕರ್ಮ- ದೇವಾಡಿಗ-ಕುಲಾಲ ಸೇರಿದಂತೆ ಬಲಿಷ್ಟ ಸಮುದಾಯವನ್ನು ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಬಿಜೆಪಿ ಸ್ಥಾನ ಹಂಚಿಕೆ ಸಮಯದಲ್ಲಿ ಹೊರಗಿಡುವ ಮುಖೇನ ಗೊಂದಲ ಸೃಷ್ಟಿ ಮಾಡುತ್ತಿದೆ ಅನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಇನ್ನೂ ದಲಿತ ಸಮುದಾಯವನ್ನು ಕೂಡ ಜಿಲ್ಲಾ ಭಾಗಶಃ ಕಮಿಟಿಯಲ್ಲಿ ಸೇರ್ಪೆಗೊಳಿಸದಿರುವುದು ಕೂಡ ದಲಿತ ಸಮುದಾಯದ ಬಿಜೆಪಿ ನಾಯಕರಿಗೆ ನೋವುಂಟು ಮಾಡಿದೆ ಅನ್ನುವ ವಿಚಾರ ಹೊಗೆಯಾಡುತ್ತಿದೆ.

ಒಟ್ಟಾರೆಯಾಗಿ ಹಿಂದುತ್ವದ ವಿಚಾರದಡಿಯಲ್ಲಿ ಜಾತಿ ಇಲ್ಲ ಅನ್ನುವ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ಜಾತಿ ಲೆಕ್ಕಾಚಾರ ಹಾಕುವ ಮುಖೇನ ರಾಗ-ತಾಳಕ್ಕೆ ಸ್ವರ ಹೊಂದಾಣಿಕೆಯಾಗುತ್ತಿಲ್ಲ ಎಂಬ ಗುಸು ಗುಸು ಬರಲಾರಂಭಿಸಿದೆ.

ಇನ್ನಾದರೂ ಉಡುಪಿ ಬಿಜೆಪಿ ಇಂತಹ ಸಮುದಾಯದ ಬಗ್ಗೆ ಗಮನಿಸಿಕೊಂಡು ಕಾರ್ಯಪ್ರವೃತರಾಗಬೇಕೆಂಬ ಸುದ್ದಿ ಸದ್ದು ಮಾಡುತ್ತಿದೆ.
ಬ್ಯುರೋ ರಿಪೋರ್ಟ್
ವಿಶ್ವನ್ಯೂಸ್24

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

9 hours ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

1 day ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

1 day ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

1 day ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

1 day ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

1 day ago