ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಯೋಧರ ಶ್ರೇಯಸ್ಸಿಗಾಗಿ ಸಾಯಿ ಧುನಿ ಆರಾಧನೆ
ಕಟಪಾಡಿ: ಶಂಕರಪುರದ ಸಾಯಿ ಸಾಂತ್ವನ ಮಂದಿರದಲ್ಲಿ ಸಾಯಿ ಬಾಬಾರ 183 ನೇ ಜಯಂತಿಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ದೇಶ ಕಾಯುವ ಯೋಧರ ಶ್ರೇಯಾಸ್ಸಿಗಾಗಿ ದಿನಾಂಕ 28/ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶಿರ್ಡಿ ಸಾಯಿ ಧುನಿ ಆರಾಧನೆ ನಡೆಯಲಿದೆ.
ಏನೀದು ಧುನಿ ಆರಾಧನೆ..?
ಸಾಯಿ ಬಾಬಾ ಶಿರಡಿಯಲ್ಲಿ ತಮ್ಮ ಸ್ವಹಸ್ತದಿಂದ 1838 ನೇ ಇಸವಿಯಲ್ಲಿ ಈ ಪವಿತ್ರ ಧುನಿಯನ್ನು ಬೆಳಗಿರುತ್ತಾರೆ.ಅಂದಿನಿಂದ ಇಂದಿನವರೆದಗೆ ಅದು ನಿರಂತರವಾಗಿ ಈ ಪವಿತ್ರ ಧುನಿ ನಿರಂತರವಾಗಿ ಪ್ರಜ್ವಲಿಸುತ್ತಾ ಬಂದಿದೆ, ಧುನಿ ಎಂಬ ಪದ ಧುನ್ ಎಂಬ ಧಾತುವಿನಿಂದ ಬಂದಿದ್ದು ಇದರ ಅರ್ಥ ಹಚ್ಚುವುದು , ಬೆಳಗುವುದು ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ವಿವಿಧ ಸಾಯಿ ಬಾಬಾ ಮಂದಿರಗಳಲ್ಲಿ ಸಾಯಿ ಧುನಿ ಆರಾಧನೆ ನಡೆಸಲಾಗುತ್ತೆ ಆದರೆ ಯೋಧರ ಶ್ರೇಯಾಸ್ಸಿಗಾಗಿ ಉಡುಪಿ ಜಿಲ್ಲೆಯಲ್ಲಿ ಇದು ಪ್ರಥಮ ಕಾರ್ಯಕ್ರಮವಾಗಿದೆ.
ಈ ಅಪೂರ್ವ ಕಾರ್ಯಕ್ರಮದಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧರು ಭಾಗವಹಿಸಲಿದ್ದಾರೆ ,ಧುನಿ ಆರಾಧನೆಯಲ್ಲಿ ಭಾಗವಹಿಸುವ ಭಕ್ತರಿಗೆ ಧವಸಧಾನ್ಯ,ತುಪ್ಪ, ತೆಂಗು ಅರ್ಪಿಸಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.
ಜಾಹಿರಾತು
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…