ಉಡುಪಿ : ನಗರದ ನೆಲ್ಲಿಕಟ್ಟೆಯಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಇತ್ತೀಚೆಗೆ ಟ್ಯಾಬ್ಲೋದಲ್ಲಿ ದೈವ ವೇಷ ಧರಿಸಿದ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿ ವೇಷಧಾರಿಗಳು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನೆಲ್ಲಿಕಟ್ಟೆಯಲ್ಲಿರುವ ಬಬ್ಬುಸ್ವಾಮಿ ಹಾಗೂ ಪರಿವಾರ ದೈವ ಸಾನಿಧ್ಯದಲ್ಲಿ ದೈವ ವೇಷ ಧರಿಸಿದ್ದ ನಿತೀನ್ ಪೂಜಾರಿ ಕ್ಷಮೆಯಾಚಿಸಿದ್ದಾರೆ.
ಕೊರಗಜ್ಜ ಹಾಗೂ ಇತರೆ ದೈವ ವೇಷ ಧರಿಸಿ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಟ್ಯಾಬ್ಲೋ ಸಂಚರಿಸತೊಡಗಿದ್ದಾಗ ದೈವ ವೇಷದಾರಿಗಳಿದ್ದ ಟ್ಯಾಬ್ಲೋವನ್ನು ದೈವರಾಧಕರು ತಡೆದಿದ್ದರು.
ತದನಂತರ ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಚಾರ ಅನೇಕ ಆಸ್ತಿಕರ ವಿರೋಧಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಸಾನಿಧ್ಯದಲ್ಲಿ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಹಾಗೂ ಪಾಣಾರ ಯಾನೆ ನಲಿಕೆ ಸಂಘದ ಸದಸ್ಯರ ಸಮ್ಮುಖದಲ್ಲಿ ವೇಷಧಾರಿ ನಿತೀನ್ ಪೂಜಾರಿಕ್ಷಮೆಯಾಚಿಸಿ ತಪ್ಪು ಕಾಣಿಕೆ ಹಾಕಿದ್ದಾರೆ.
ಪಡುಬಿದ್ರಿ: ಪಾನ್ ಸ್ಟಾಲ್ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ…
ಸುಳ್ಯ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿ ಬಂಧನ ಸುಳ್ಯ : ಕೌಟುಂಬಿಕ…
ಮೂಡುಬಿದಿರೆ: ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ; ನಿವೃತ್ತ ಶಿಕ್ಷಕ ಜಿ ಕೆ ಭಟ್ ನಿಧನ ಮೂಡುಬಿದಿರೆ: ಪೇಟೆಯ ರತನ್…
ಬಂಟ್ವಾಳ : ಬ್ಯಾಂಕ್ ಕಳ್ಳತನ ಪ್ರಕರಣ ; ಪ್ರಮುಖ ಆರೋಪಿಯ ಬಂಧನ ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ…
ಧರ್ಮಸ್ಥಳ ಸೌಜನ್ಯ ಕೊಲೆ ಕೇಸ್ : ಮರು ತನಿಖೆ ಬಗ್ಗೆ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್ ಬೆಳ್ತಂಗಡಿ: ದೇಶದ ಗಮನ…
ಉಡುಪಿ : ಅಕ್ಕಕೆಫೆ ನಿರ್ವಹಣೆ - ಜು.28ರಂದು ಸಂಜೀವಿನಿ ಸ್ವ-ಸಹಾಯ ಗುಂಪುಗಳಿಗೆ ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…