Featured

ಉಡುಪಿ : ಡಿ.ಎ.ಪಿ ಬದಲು ಪರ್ಯಾಯ ರಸಗೊಬ್ಬರ ಬಳಸಿ -Vishwanews24

ಉಡುಪಿ : ಡಿ.ಎ.ಪಿ ಬದಲು ಪರ್ಯಾಯ ರಸಗೊಬ್ಬರ ಬಳಸಿ -Vishwanews24

ಉಡುಪಿ : ಡಿ.ಎ.ಪಿ. ರಸಗೊಬ್ಬರದ ಕೇವಲ ಸಾರಜನಕ ಹಾಗೂ ರಂಜಕ ಒದಗಿಸುವ ಒಂದು ಕಾಂಪ್ಲೆಕ್ಸ್ ಗೊಬ್ಬರವಾಗಿದ್ದು, ಡಿ.ಎ.ಪಿ ಇಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಪರ್ಯಾಯ ರಸಗೊಬ್ಬರ ಬಳಸಿ ಸಾರಜನಕ ಹಾಗೂ ರಂಜಕ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡಬಹುದು.

ರೈತರು ಕೇವಲ ಡಿ.ಎ.ಪಿ ಮೇಲೆ ಅವಲಂಭಿತರಾಗದೆ, ಬದಲಾಗಿ ಪೋಷಕಾಂಶಗಳನ್ನು ಒದಗಿಸುವ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ದರ್ಜೆಯ ರಸಗೊಬ್ಬರಗಳನ್ನು ಸಂಯೋಜಸಿ ಬಳಕೆ ಮಾಡಬಹುದು. ನೇರ ರಸಗೊಬ್ಬರಗಳಾದ ಯೂರಿಯಾ ಹಾಗೂ ರಾಕ್ ಫಾಸ್ಟೇ್ಟಟ್ ಸಂಯೋಜಿಸಿ ಅಥವ ಕಾಂಪ್ಲೆಕ್ಸ್ ಗೊಬ್ಬರಗಳಾದ 20:20:0:13 ಹಾಗೂ 10:26:26 ಗಳನ್ನು ಸಂಯೋಜಿಸಿ ಡಿ.ಎ.ಪಿ ಗೆ ಪರ್ಯಾಯವಾಗಿ ಬಳಸಬಹುದು.

100 ಕೆ.ಜಿ ಡಿ.ಎ.ಪಿ. ಪೋಷಕಾಂಶ ಒದಗಿಸಲು ಈ ಕೆಳಗಿನ ಯಾವುದೇ ಸಂಯೋಜನೆ ಬಳಸಬಹುದು:

ಮೊದಲ ಸಂಯೋಜನೆ (ನೇರ ರಸಗೊಬ್ಬರ ಬಳಸಿ) ಯೂರಿಯಾ : 40 ಕೆ. ಜಿ ಹಾಗೂ ರಾಕ್ ಫಾಸ್ಪೇಟ್ : 255 ಕೆ.ಜಿ. ಎರಡನೇ ಸಂಯೋಜನೆ (ನೇರ ಹಾಗೂ ಎನ್.ಪಿ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್ : 150 ಕೆ.ಜಿ. ಹಾಗೂ 20:20:0:13 : 90 ಕೆ.ಜಿ ಮತ್ತು ಮೂರನೇ ಸಂಯೋಜನೆ (ನೇರ ಹಾಗೂ ಎನ್.ಪಿ ಹಾಗೂ ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್ : 90 ಕೆ.ಜಿ, 20:20:0:13 : 50 ಕೆ.ಜಿ ಹಾಗೂ 10:26:26 : 75 ಕೆ.ಜಿ. ರಸಗೊಬ್ಬರಗಳ ಸಂಯೋಜನೆಯನ್ನು ಬಳಸಬಹುದು.

ರೈತರು ಯಾವುದೇ ರೀತಿಯ ಆತಂಕಕ್ಕೊಳಗಾಗದೇ ಮೇಲೆ ನೀಡಿರುವ ಪರ್ಯಾಯ ರಸಗೊಬ್ಬರಗಳ ಸಂಯೋಜನೆ ಮೂಲಕ ಬದಲಿ ವ್ಯವಸ್ಥೆ ಮಾಡಿಕೊಳ್ಳಬಹುದು. ಈ ಸಂಯೋಜನೆ ಮೂಲಕ ಗೊಬ್ಬರ ಬಳಸುವುದರಿಂದ ಇಳುವರಿ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವೆಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ – vishwanews24

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…

8 hours ago

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ – vishwanews24

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ ಬೀದರ್‌: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…

9 hours ago

ಬಿಜೆಪಿಯಿಂದ ಅಧಿವೇಶನಕ್ಕೆ ಅಡ್ಡಿ ಹಿಂದೆ ಹಿಡನ್ ಅಜೆಂಡಾ: ಯು.ಟಿ.ಖಾದರ್ ಆರೋಪ – vishwanews24

ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು .. ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ…

9 hours ago

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ – ನಾಲ್ವರು ಮೀನುಗಾರರ ರಕ್ಷಣೆ – vishwanews24

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ - ನಾಲ್ವರು ಮೀನುಗಾರರ ರಕ್ಷಣೆ ಕುಂದಾಪುರ :ಮೀನುಗಾರಿಕಾ ದೋಣಿಯ ಎಂಜಿನ್ ದೋಷದಿಂದ ಸಮುದ್ರದ…

10 hours ago

ಮಂಗಳೂರು: ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ : ಸಚಿವ ಯು.ಟಿ.ಖಾದರ್ – vishwanews24

ಮಂಗಳೂರು: ಕೃತಕ ಪನ್ನೀರ್, ಫುಡ್ ಕಲರ್‌, ಅಜಿನಮೊಟೊ ವಿರುದ್ಧ ಕ್ರಮ ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ :…

12 hours ago

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  – vishwanews24

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  ಪುತ್ತೂರು: ಹಲವು…

13 hours ago