Featured

ಉಡುಪಿ :ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವಂತೆ ಸುನಿಲ್ ಕುಮಾರ್ ಗೆ ಪ್ರಮೋದ್ ಮಧ್ವರಾಜ್ ಮನವಿ

ಉಡುಪಿ :ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವಂತೆ ಸುನಿಲ್ ಕುಮಾರ್ ಅವರಿಗೆ ಪ್ರಮೋದ್ ಮಧ್ವರಾಜ್ ಮನವಿ

ಉಡುಪಿ : ತುಳು ಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ನೀಡುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳು ಪಂಚ ದ್ರಾವಿಡ ಭಾಷೆಗಳೆಂದು ಹೆಸರುವಾಸಿಯಾಗಿವೆ. ಇವುಗಳಲ್ಲಿ ಕನ್ನಡ ಮತ್ತು ತುಳುವಿನ ಮೂಲ ಭಾಷಿಕರ ನೆಲವಾಗಿ ನಮ್ಮ ರಾಜ್ಯವಿರುವುದು ನಮ್ಮ ಹೆಗ್ಗಳಿಕೆ. ಕರ್ನಾಟಕದ ತುಳುನಾಡು ಪ್ರಾಂತ್ಯದಲ್ಲಿ ಅನಾದಿಕಾಲದಿಂದ ಲೂ ಜಾತಿ ಧರ್ಮ ಮತಗಳನ್ನೂ ಮೀರಿ ನಮ್ಮ ಸಂಸ್ಕೃತಿ ಮಾತ್ರವಲ್ಲದೆ ವ್ಯಾವಹಾರಿಕ ಭಾಷೆಯಾಗಿ ತುಳು ಬೆಳೆದುಬಂದಿದೆ. ತುಳು ಭಾಷೆಯ ಇತಿಹಾಸ ಕಳೆದ ಶತಮಾನದಲ್ಲಿ ಅಂಧಕಾರದಲ್ಲಿತ್ತು ಆದರೆ ನಮ್ಮ ಸಂಶೋಧಕರ ಸತತ ಪ್ರಯತ್ನದ ಫಲವಾಗಿ ನಮಗೆ ಇಂದು ತುಳುವಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ಹಲವಾರು ವಿಶಿಷ್ಟ ಸಾಹಿತ್ಯದ ಪ್ರಾಚೀನ ಪರಂಪರೆಯಿದೆ ಎಂದು ತಿಳಿದು ಬಂದಿದೆ. ತುಳು ಭಾಷೆಗೆ ತನ್ನದೇ ಆದ ಸ್ವಂತ ಲಿಪಿಯೂ ಇದ್ದು ಸುಮಾರು 10ನೇ ಶತಮಾನದಿಂದ ಅನೇಕ ಕೈಬರಹಗಳು ಮತ್ತು ಹಸ್ತಪ್ರತಿಯ ಕೃತಿಗಳು ದೊರಕಿವೆ. ಇದು ತುಳು ಭಾಷೆಗೆ ತನ್ನದೇ ಆದ ಶಾಸ್ತ್ರೀಯ ಸಾಹಿತ್ಯ ಪರಂಪರೆಯಿದೆ ಎನ್ನುವುದನ್ನು ಸಾರಿ ಹೇಳುತ್ತಿದೆ.

ಕರ್ನಾಟಕದ ಸಂಸ್ಕೃತಿ ಮತ್ತು ಬೆಳವಣಿಗೆಗೆ ತುಳುವರ ಕೊಡುಗೆ ಅಪಾರ. ಯಕ್ಷಗಾನ, ದೈವಾರಾಧನೆ, ನಾಗಾರಾಧನೆ, ಕಂಬಳದಂತಹ ಅನೇಕ ಪರಂಪರೆ ಮಾತ್ರವಲ್ಲದೆ ವೈದ್ಯಕೀಯ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲೂ ತುಳುವರು ಬಹಳ ಮುನ್ನೆಲೆ ಸಾಧಿಸಿದ್ದಾರೆ. ತುಳುವರ ಸತತ ಬೇಡಿಕೆಯನ್ನು ಮನ್ನಿಸಿದ ಸರಕಾರಗಳು ತುಳು ಸಾಹಿತ್ಯ ಅಕಾಡೆಮಿ, ತುಳುಲಿಪಿಗೆ ಮಾನ್ಯತೆ, ತುಳು ಭಾಷೆಯನ್ನು ಶಿಕ್ಷಣದಲ್ಲಿ ಅಳವಡಿಸುವಂತಹ ಅನೇಕ ಕಾರ್ಯಗಳನ್ನು ಮಾಡಿವೆ. ಇವೆಲ್ಲಾ ಸಾಧನೆಗಳ ನಡುವೆಯೂ ತುಳುವಿಗೆ ಇನ್ನೂ ಅಧಿಕೃತ ಭಾಷೆಯ ಸ್ಥಾನಮಾನ ಬೇಡಿಕೆಯಾಗಿ ಉಳಿದಿದೆ.

ಸುಮಾರು 1971 ರಿಂದ ಇದುವರೆಗೆ ಸತತವಾಗಿ ತುಳುವರು ತಮ್ಮ ಭಾಷೆಗೆ ಅಧಿಕೃತ ಸ್ಥಾನಮಾನವನ್ನು ಕೇಳುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಈ ಬೇಡಿಕೆಗೆ ಮನ್ನಣೆ ಸಿಗಲೇ ಇಲ್ಲ. ಇತ್ತೀಚೆಗೆ ಅನೇಕ ಯುವಕರು ತುಳು ಪರ ಅಭಿಯಾನಗಳನ್ನೂ ನಡೆಸಿ ತುಳುವನ್ನು ಕನ್ನಡದೊಂದಿಗೆ ತುಳು ಮಾತನಾಡುವ ಪ್ರದೇಶದಲ್ಲಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿ ರಾಜ್ಯ ಭಾಷೆಯ ಮಾನ್ಯತ ನೀಡಬೇಕೆಂದು ಅಭಿಯಾನಗಳನ್ನೂ ನಡೆಸುತ್ತಿದ್ದಾರೆ.

ಸಂವಿಧಾನದ 347ನೇ ವಿಧಿಯನ್ವಯ, ರಾಜ್ಯದ ನಿರ್ದಿಷ್ಟ ಭಾಗದ ಜನರು ತಮ್ಮ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ಇಚ್ಛೆ ವ್ಯಕ್ತಪಡಿಸಿದರೆ ಅದನ್ನು ರಾಜ್ಯ ಸರಕಾರಗಳು ಮನ್ನಿಸಿ ಆ ಭಾಗದ ಅಧಿಕೃತ ಭಾಷೆಯನ್ನಾಗಿಸಬೇಕೆಂದು ನಿರ್ದೇಶನವನ್ನು ನೀಡುತ್ತದೆ. ಇದೇ ಪ್ರಕಾರ ತುಳುವರ ಬೇಡಿಕೆಯನ್ನು ಮನ್ನಿಸಿ ತುಳು ಭಾಷೆಯನ್ನು ತುಳುನಾಡು ಪ್ರಾಂತ್ಯದ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ವಿನಂತಿಸಿದ್ದಾರೆ.

ಹಾಗೂ ಒಂದು ವೇಳೆ ತುಳು ಕರ್ನಾಟಕದ ಅಧಿಕೃತ ಭಾಷೆಯಾದರೆ ಮುಂದಕ್ಕೆ ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸಲೂ ಸುಲಭವಾಗುತ್ತದೆ. ಗೋವಾ ರಾಜ್ಯದಲ್ಲೂ ಮೊದಲು ಕೊಂಕಣಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿ ಮುಂದೆ 8ನೇ ಪರಿಚ್ಛೇಧಕ್ಕೆ ಸೇರಿಸಲಾಯಿತು. ಇದೇ ಮಾದರಿಯನ್ನು ತುಳುವಿಗೂ ಅನುಸರಿಸಬೇಕು. ನಮ್ಮ ಮಾತೃಭಾಷೆಯ ಬಹುದಿನದ ಬೇಡಿಕೆಯನ್ನು ಪ್ರಾಶಸ್ಯ ನೀಡಿ ರಾಜ್ಯ ಭಾಷೆಯನ್ನಾಗಿಸಿ ಬೇಗನೆ ಮನ್ನಿಸಬೇಕಾಗಿ ಮನವಿಮಾಡಿಕೊಂಡಿದ್ದಾರೆ.

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

3 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

3 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

3 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

3 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

3 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago