Featured

ಉಡುಪಿ: ದಾಮೋದರ ಆಚಾರ್ಯರ ವರ್ಣ ವಸಂತ-9 : ಚಿತ್ರಕಲಾ ಪ್ರದರ್ಶನದ ಪತ್ರಿಕಾಗೋಷ್ಠಿ: vishwanews24

ಉಡುಪಿ: ದಾಮೋದರ ಆಚಾರ್ಯರ ವರ್ಣ ವಸಂತ-9 :ಚಿತ್ರಕಲಾ ಪ್ರದರ್ಶನದ ಪತ್ರಿಕಾಗೋಷ್ಠಿ: vishwanews24

ಉಡುಪಿ: 2015ರಲ್ಲಿ “ಮನೆಮನೆಗೆ ಚಿತ್ರಕಳೆ” ಎಂಬ ನೂತನ ಶೈಲಿಯ ಕಲಾ ಸಂಘಟನೆಯನ್ನು ಸ್ಥಾಪಿಸಿ ಚಿತ್ರಕಲೆಯನ್ನು ಮನೆ ಮನೆಗೆ ತಲಪಿಸುವ ಪ್ರಯತ್ನ ಮಾಡಿರುವ ಉಡುಪಿಯ ಹಿರಿಯ ಕಲಾವಿದ ದಾಮೋದರ ಎಲ್. ಆಚಾರ್ಯರು, “ವರ್ಣ ವಸಂತ ಶೀರ್ಷಿಕಯ ಅಡಿಯಲ್ಲಿ 8 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಈಗಾಗಲೆ ನಡೆಸಿರುತ್ತಾರೆ. ಈಗ ತನ್ನ 9ನೇ ಕಲಾ ಪ್ರದರ್ಶನವನ್ನು ದಿನಾಂಕ: 20-11-2022ರಂದು ಉಡುಪಿಯ ರಾಮಕೃಷ್ಣ ಹೋಟೆಲಲ್ಲಿ ಇರುವ ಶರನ್ ಆರ್ಟ್ ಗ್ಯಾಲರಿಯಲ್ಲಿ ನಡೆಸಲು ಅಣಿಯಾಗುತ್ತಿದ್ದಾರೆ. ಈ ಪ್ರದರ್ಶನದಲ್ಲಿ ಆವರು ತನ್ನನ್ನು ತೊಡಗಿಸಿಕೊಂಡ ಕಲಾ ಪ್ರಕಾರವಾದ ಭಾವಚಿತ್ರ, ಪ್ರಾದೇಶಿಕ ಕಲೆಗಳ ಚಿತ್ರ, ಮಿನಿಯೇಚರ್ ಚಿತ್ರಗಳು, ಪ್ರಕೃತಿ ಚಿತ್ರಗಳು ಹಾಗೂ ಸಮಕಾಲಿನ (ನವ್ಯಕಲೆ) ಕಲೆಗಳ ಬಗ್ಗೆ ರಚಿಸಿದ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ ಗೆಳತಿಯನ್ನು 4ನೇ ಮಹಡಿಯಿಂದ ಎಸೆದು ಕೊಂದ – Vishwanews24

ದಿನಾಂಕ: 20-11-2022 ಭೂರ್ವಾಹ್ನ 10:00ಕ್ಕೆ ಉದ್ಘಾಟನೆಗೊಂಡು 22-11- 2022ರವರೆಗೆ ಪ್ರತಿ ದಿನ ಪೂರ್ವಾಹ್ನ 10:00 ರಿಂದ ಸಂಜೆ 6:30ರ ವರೆಗೆ ಈ ಕಲಾ ಪ್ರದರ್ಶನವು ಕಲಾಭಿಮಾನಿಗಳಿಗಾಗಿ ತೆರೆದಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ಉಮೇಶ್ ಪ್ರಭು,ರಥ ಶಿಲ್ಪಿ ಕೆ ರಾಜಗೋಪಾಲ್ ಆಚಾರ್ಯ, ಯು ವಿಶ್ವನಾಥ ಶೆಣೈ,ಶ್ರೀಮತಿ ಮಮತಾ ಸಮಂತ್ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಮೋದರ ಎಲ್ ಆಚಾರ್ಯ, ವಾಸುದೇವ ಆಚಾರ್ಯ, ಅನುಶ್ರೀ,ಜಯಂತ ಪುರೋಹಿತ್ ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

4 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

4 days ago