Featured

ಉಡುಪಿ: ಪಡುಕೆರೆ ಬೀಚನ್ನು ಮರೀನಾ ಬೀಚಾಗಿ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಸರ್ವ ಸಂಘಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ -Vishwanews24

ಉಡುಪಿ: ಪಡುಕೆರೆ ಬೀಚನ್ನು ಮರೀನಾ ಬೀಚಾಗಿ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಸರ್ವ ಸಂಘಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ -Vishwanews24

ಉಡುಪಿ : ಪಡುಕೆರೆ ಬೀಚನ್ನು ಮರೀನಾ ಬೀಚಾಗಿ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಸರ್ವ ಸಂಘಗಳ ಒಕ್ಕೂಟದಿಂದ ಶುಕ್ರವಾರ, ಜನವರಿ 15 ರಂದು ಶ್ರೀ ಬಾಲಾಂಜನೇಯ ಮಂದಿರದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು.

ಮಲ್ಪೆ ಮೀನುಗಾರರ ಸಂಘದ ಅದ್ಯಕ್ಷ ರಾದ ಕೃಷ್ಣ ಸುವರ್ಣ ಮಾತನಾಡಿ, “ಪಡುಕೆರೆ ಬೀಚನ್ನು ಮರೀನಾ ಮಾಡುವ ಪ್ರಸ್ತಾವನೆಯನ್ನು ಕೈಬಿಡುವುದು ಒಳ್ಳೆಯದು. ಜನವರಿ 18 ರಂದು ಉಡುಪಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಆಗಮಿಸುವ ಸಂದರ್ಭದಲ್ಲಿ ಮೀನುಗಾರ ಮುಖಂಡರು ಅವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಪರಕೀಯವಾದ, ಮೀನುಗಾರಿಕೆಗೆ ತೊಂದರೆಯನ್ನುಂಟು ಮಾಡುವ ಕೆಲಸವನ್ನು ನಾವು ವಿರೋಧಿಸುತ್ತೇವೆ” ಎಂದರು.

ಹಿರಿಯ ಮೀನುಗಾರ ಮುಖಂಡರಾದ ರಾಮ ಕಾಂಚನ್, “ಶಾಂತಿನಗರದಿಂದ ಮಟ್ಟು ಕೂಪ್ಲುವರೆಗೆ ಇದು ಆವರಿಸುತ್ತದೆ. ಪಡುಕೆರೆ ಅಭಿವೃದ್ಧಿ ಆಗಬೇಕೆ ಹೊರತು ಕೆಡುಕಲ್ಲ. ಅಂತಹ ಯೋಜನೆಯನ್ನು ಪ್ರೋತ್ಸಾಹ ಮಾಡುವುದಿಲ್ಲ. ನಮ್ಮ ಪೂರ್ವಜರು ಹುಟ್ಟಿ ಬೆಳೆದ ಪ್ರದೇಶವನ್ನು ತೊರೆಯುವ ಪರಿಸ್ಥಿತಿ ಬರಬಹುದು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಡದೋಣಿ ಸಂಘದ ಅಧ್ಯಕ್ಷರಾದ ಜನಾರ್ದನ್ ತಿಂಗಳಾಯವರು, “ಇದು ಅಭಿವೃದ್ಧಿ ಹೆಸರಲ್ಲಿ ಜನರಿಗೆ ಮೋಸ ಮಾಡುವ ವ್ಯವಸ್ಥೆ. ಪಡುಕೆರೆ ‌ಮರಿನಾ ಆದರೆ ಇಲ್ಲಿನ ಸ್ಥಳೀಯ ರನ್ನು ಎತ್ತಂಗಡಿ ಮಾಡುವ ಆತಂಕವಿದೆ. ಇಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಮೀನುಗಾರಿಕೆ ಮಾಡುವ ಆಶಯ ಇದೆ. 40 ವರ್ಷ ಕೈರಂಪಣಿ ಲಯಲ್ಲಿ ದುಡಿದಿದ್ದೇನೆ. ಈ ಜಾಗದ ಋಣ ನನ್ನ ಮೇಲಿದೆ. ಇಲ್ಲಿ ಮರೀನಾ ಬೀಚ್ ಬೇಡವೇ ಬೇಡ. ಈ ಯೋಜನೆಯ ವಿರೋಧಿಸಿ ನನ್ನ ಪ್ರಾಣ ತ್ಯಜಿಸಲು ಸಿದ್ದನಿದ್ದೇನೆ” ಎಂದರು.

ಸಂವೇದನಾ ಟ್ರಸ್ಟ್ ನ ಪ್ರಕಾಶ್ ಮಲ್ಪೆಯವರು ಈ ಸಂದರ್ಭದಲ್ಲಿ ಮಾತನಾಡಿ, “ಜಿಲ್ಲಾಧಿಕಾರಿ ಮತ್ತು ಶಾಸಕರು ಮರೀನಾ ಬೀಚ್ ಮಾಡುವ ಬಗ್ಗೆ ಪ್ರಸ್ತಾಪವೆತ್ತಿದ್ದಾರೆ. ಇದರಲ್ಲಿ ಸಾಧಕಕ್ಕಿಂತ ಭಾದಕವೆ ಹೆಚ್ಚು. ಇದು ಇಡೀ ಊರಿನ ಸೌಂದರ್ಯ ಗೆಡಿಸಿತ್ತದೆ. ಇಡೀ ಏಷ್ಯಾದಲ್ಲಿ ಸರ್ವ ಋತು ಬಂದರು ಆಗಿರುವ ಮಲ್ಪೆ ಪಡುಕೆರೆ ಈಗ ಸಮಸ್ಯೆ ಉಂಟಾಗುತ್ತದೆ. ಮೀನುಗಾರಿಕೆಗೆ ಇದು ದೊಡ್ಡ ಹೊಡೆತ. ಅಲ್ಲದೆ ದ್ವೀಪಗಳೆ ಪೂರ್ವಜರಿಂದ ಪೂಜಿಸಲ್ಪಟ್ಟು ಬಂದಿರುವ ಆರಾದ್ಯ ದೈವಗಳಿಗೆ ಅಪಚಾರವಾಗುತ್ತದೆ. ಕೊಚ್ಛಿಯಲ್ಲಿರುವ ಮರೀನಾದಲ್ಲಿ 34 ಯಾಚ್ ಗಳನ್ನು ಇಡುವ ವ್ಯವಸ್ಥೆ ಇದೆ. ಇಲ್ಲಿ ಶಾಂತಿನಗರದಿಂದ – ನಾರಾಯಣ ಮಂದಿರದವರೆಗೆ ಸುಮಾರು 5 ಕಿಮೀ ಉದ್ದ ಮರೀನಾ ಬರಬಹುದು. ಅಂದರೆ ಪಡುಕೆರೆಯ ಮುಕ್ಕಾಲು ಭಾಗ ಮರೀನಾ ದ ಪಾಲಾಗುತ್ತದೆ. ಅಷ್ಟೇ ಅಲ್ಲದೆ ಜನವಸತಿ ಧಾರ್ಮಿಕ ನಂಬಿಕೆಗೆ ಹೊಡೆತ ಬೀಳುತ್ತದೆ. ಊರು ಸಿಂಗಾಪುರವಾದರೂ ಅದು ಪರಕೀಯ ವಾಗಿ ಬದಲಾಗುತ್ತದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಲಾಂಜನೇಯ ಮಂದಿರದ ದೇವದಾಸ್ ಕೋಟ್ಯಾನ್, ಸುಮಿತ್ರ ಕುಂದರ್, ಮೊದಲಾದ ವರು ಉಪಸ್ಥಿತರಿದ್ದರು

 

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

8 hours ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

1 day ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

1 day ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

1 day ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

1 day ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

1 day ago