ಉಡುಪಿ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೋಗಲಾಡಿಸುವುದು ಹೇಗೆಂದು ಅದನ್ನು ಉತ್ಪಾದಿಸಲು ಹಸಿರುನಿಶಾನೆ, ಅನುಮತಿ, ಸಬ್ಸಿಡಿ ಒದಗಿಸಿದ ಸರಕಾರವೇ ತರಬೇತಿ, ಸ್ವಚ್ಛತಾ ಅಭಿಯಾನ, ಮರುಬಳಕೆ ಚಿಂತನೆ ಹೀಗೆ ಬಗೆ ಬಗೆಯ ನಿರ್ಮೂಲನ ಯೋಜನೆಗಳನ್ನು ಆಯೋಜಿಸುತ್ತಿದೆ.
ಒಟ್ಟಾರೆ ಉತ್ಪಾದಿಸುವಾಗಲೂ, ನಿರ್ಮೂಲನಗೊಳಿಸುವಾಗಲೂ ಸಾಕಷ್ಟು ಹಣ ಖರ್ಚು ಜನರ ತಲೆಗೇ ಬೀಳುವುದು ಜನರಿಗೇ ಗೊತ್ತಿಲ್ಲ. ಮುಂಬರುವ ಅದಮಾರು ಮಠದ ಪರ್ಯಾಯದಲ್ಲಿ ಅನಿವಾರ್ಯವೆನಿಸಿದ ಪ್ಲಾಸ್ಟಿಕ್ಗಳನ್ನು ಬಳಸುವಾಗಲೇ ಹೊರಗಿಡುವ ಪ್ರಯತ್ನ ಮಾಡಲಾಗಿದೆ.
ಪ್ಲಾಸ್ಟಿಕ್ ಅಗ್ರಮಾನ್ಯ ಸ್ಥಾನಗಳಲ್ಲಿ ಅಲಂಕರಿಸುತ್ತಿದ್ದ ಫ್ಲೆಕ್ಸ್ ಬ್ಯಾನರ್, ಸ್ವಾಗತ ಕಮಾನುಗಳು ಅದಮಾರು ಮಠ ಪರ್ಯಾಯದಲ್ಲಿ ಪ್ಲಾಸ್ಟಿಕ್ರಹಿತವಾಗಿ, ದೇಸೀತನದಿಂದ ಎದ್ದು ನಿಂತಿವೆ. 10 ದೊಡ್ಡ ಕಮಾನುಗಳು, 22 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ಉಡುಪಿ ಜೋಡುಕಟ್ಟೆಯಿಂದ ತೆಂಕುಪೇಟೆ ದಾರಿಯಾಗಿ ರಥಬೀದಿಯನ್ನು ಪ್ರವೇ ಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆದು ಗುರುಸ್ಮರಣೆ ಬರುವಂತೆ ಮಾಡಲಾಗಿದೆ.
ಜೋಡುಕಟ್ಟೆ, ಕಲ್ಪನಾ, ಕಲ್ಸಂಕ, ಅಂಬಾಗಿಲು, ಸಂಸ್ಕೃತ ಕಾಲೇಜು ಸರ್ಕಲ್, ಕಡಿಯಾಳಿ, ಬನ್ನಂಜೆ, ಕಿನ್ನಿಮೂಲ್ಕಿ ಬಳಿ ಪ್ರವೇಶ ತಾಣ, ಅಂಬಲಪಾಡಿ ಜಂಕ್ಷನ್ ಮೊದಲಾದೆಡೆ ದೊಡ್ಡ ಕಮಾನುಗಳು ನಿಂತಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಸಣ್ಣ ಕಮಾನುಗಳನ್ನು ರಚಿಸಲಾಗಿದೆ.
ಉಡುಪಿ ರಥಬೀದಿಯಿಂದ ಜೋಡು ಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಅಳವಡಿ ಸಲಾಗುತ್ತದೆ. ಅದರೊಳಗೆ ಬಲೂನ್ಗಳು ಇರುತ್ತವೆ. ಇದು ಪ್ರಾಚೀನತೆಯನ್ನು ನೆನಪಿಗೆ ಬರುವಂತೆ ಮಾಡದಿರದು. 100 ದೊಡ್ಡ ಬ್ಯಾನರ್ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್ನಿಂದ ತಯಾರಿಸಿದ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತಿತ್ತು. ಈ ಸ್ಥಾನದಲ್ಲಿ ಈಗ ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಎದ್ದು ಕಾಣುತ್ತಿದೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…