ಉಡುಪಿ : “ಉಡುಪಿ ಬಿಆರ್ಎಸ್ ಆಸ್ಪತ್ರೆಯ ಸಿಬ್ಬಂದಿಗಳ ವೇತನವನ್ನು ಸರ್ಕಾರದ ಮೂಲಕ ಕೊಡಿಸುವ ಜವಾಬ್ದಾರಿ ನನ್ನದು” ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
“ಉಡುಪಿ ಬಿಆರ್ಎಸ್ ಆಸ್ಪತ್ರೆಯ ಸಿಬ್ಬಂದಿಗಳ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರದಿಂದ ಅನಿಷ್ಟಾವಧಿವರೆಗೆ ಧರಣಿ ಕುಳಿತು ಕೊಳ್ಳವ ವಿಚಾರದ ಬಗ್ಗೆ ನಾವು ಈಗಾಗಲೇ ಸಿಬ್ಬಂದಿಗಳ ಬಳಿ ಮಾತಾಡಿದ್ದೇವೆ. ಸುವರ್ಣ ಆರೋಗ್ಯ ಟ್ರಸ್ಟ್ನಿಂದ ಆಯುಷ್ಮಾನ್ಗೆ ಹಣ ಬರಲು ಬಾಕಿ ಇದೆ . ಸುಮಾರು 90 ಲಕ್ಷ ರೂ ಜಿಲ್ಲಾಸ್ಪತ್ರೆ ಬರಲು ಬಾಕಿ ಇದೆ. ಇತ್ತೀಚೆಗೆ ಆಯುಷ್ಮಾನ್ ಸಿಇಒ ಜೊತೆ ಮಾತನಾಡಿದ್ದು, 20 ಲಕ್ಷ ಬಿಡುಗಡೆ ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ ಹಣವನ್ನು ಆಡಳಿತ ಮಂಡಳಿಯವರೇ ತೆಗೆದು ಕೊಂಡರು. ಈ ಬಾರಿ ಡಿ ಗ್ರೇಡ್ ಸಿಬ್ಬಂದಿಯಿಂದ ಬಾಕಿ ವೇತನ ಕೊಡಲು ಪ್ರಾರಂಭ ಮಾಡುತ್ತೇವೆ. ಶಾಸಕನಾಗಿ ನಾನು ಭರವಸೆ ಕೊಟ್ಟಿದ್ದೇನೆ. ಆ ಸಿಬ್ಬಂದಿಗಳು ಎಲ್ಲಿವರೆಗೆ ಕೆಲಸ ಮಾಡುತ್ತಾರೋ ಸರಕಾರ ತೆಗದುಕೊಳ್ಳುವವರೆಗೆ ಸಂಪೂರ್ಣ ಸಂಬಳವನ್ನು ಸರಕಾರದ ಮೂಲಕ ಕೊಡಿಸುವ ಜವಾಬ್ದಾರಿ ನನ್ನದು” ಎಂದಿದ್ದಾರೆ.
“70 ಸರ್ಕಾರಿ ಘಟಕ ಮತ್ತು 130 ಮಂದಿ ಸಿಬ್ಬಂದಿ ಘಟಕವನ್ನು ಗುತ್ತಿಗೆ ಆಧಾರದ ಮೇಲೆ ನಡೆಸುವ ಚಿಂತನೆಯಿತ್ತು. ಹಾಗಾಗಿ ಇದಕ್ಕೆ ಧರಣಿ ಕುಳಿತು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿಲ್ಲ. ಎಲ್ಲರಿಗೂ ಪರಿಸ್ಥಿತಿಯ ಅರಿವು ಇದೆ. ಸಿಬ್ಬಂದಿಗಳು ಧರಣಿ ಕೂತರೆ ರೋಗಿಗಳಿಗೆ ಸಮಸ್ಯೆ ಆಗುತ್ತದೆ. ಎಲ್ಲರಿಗೂ ಸ್ವರ್ಣ ಆರೋಗ್ಯದಡಿ ವೇತನ ಬಾಕಿ ಇದೆ. ನಾವೇ ಒತ್ತಾಯ ಹಾಕಿ ತೆಗೆಸಿ ಕೊಡುತ್ತಾ ಇದ್ದೇವೆ. ಸರ್ಕಾರ ಬದಲಾವಣೆ ಆದ್ದರಿಂದ ವೇತನ ವಿಳಂಬವಾಗಿದೆ ಅಷ್ಟೆ. ನಾವೂ ಇದೇ ವಿಚಾರದ ಬೆಂಬಲಿಸುತ್ತಿದ್ದೇವೆ. ಇದೇ ಗುರುವಾರ ಮುಖ್ಯಮಂತ್ರಿ, ಆರೋಗ್ಯ ಇಲಾಖೆಯ ಜೊತೆ ಚರ್ಚೆಯಡಿ ಒಂದು ತಾರ್ಕಿಕ ನಿರ್ಧಾರಕ್ಕೆ ಬರುತ್ತೇವೆ” ಎಂದು ಶಾಸಕ ಭಟ್ ಮನವಿ ಮಾಡಿಕೊಂಡರು
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…