Featured

ಉಡುಪಿ ಬಿಜೆಪಿಯ  ದೇವ ದುರ್ಲಭ ಕಾರ್ಯಕರ್ತರ ಮನೆ ಬಿಟ್ಟು ಸಿಎಂ ಚಾ ಕುಡಿಯಲು ಹೋದದ್ದು ಮಾಜಿ ಕಾಂಗ್ರೇಸ್ ನಾಯಕನ ಮನೆಗೆ ವಿಪರ್ಯಾಸವೇ-ಹೊಂದಾಣಿಕೆಯೇ..??

ಉಡುಪಿ ಬಿಜೆಪಿಯ  ದೇವ ದುರ್ಲಭ ಕಾರ್ಯಕರ್ತರ ಮನೆ ಬಿಟ್ಟು ಸಿಎಂ ಚಾ ಕುಡಿಯಲು

ಹೋದದ್ದು ಮಾಜಿ ಕಾಂಗ್ರೇಸ್ ನಾಯಕನ ಮನೆಗೆ ವಿಪರ್ಯಾಸವೇ-ಹೊಂದಾಣಿಕೆಯೇ..??

ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅಧಿಕಾರ ತಂದುಕೊಟ್ಟ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬರವೇ..???

ಓದಿ ಈ ಪೊಲಿಟಿಕಲ್ ಅಂಕಣ

ಉಡುಪಿ ಜಿಲ್ಲೆ ಕರಾವಳಿ ಭಾಗವನ್ನು ಬಾಚಿಕೊಂಡು ತನ್ನ ಮಡಿಳಲ್ಲಿ ಸಾಕುತ್ತಿರುವ ಪ್ಯಾಂಪರ್ ಬೇಬಿ- ಹಿಂದುತ್ವ-ಸಂಘ-ಸಂಘಟನೆಗೆ ಪರ್ಯಾಯ ಹೆಸರು ಉಡುಪಿ ಎಂದರೂ ತಪ್ಪಾಗಲಾರದು -ಪೊಡವಿಗೊಡೆಯನ ಪುಣ್ಯ ಭೂಮಿ ಅಂತನೂ ಜನ ಮಾತನಾಡುವ ಈ ಜಿಲ್ಲೆ ಭಾಜಪಕ್ಕೆ ಮಾತ್ರ ಅಧಿಕಾರದ ಪೊಲ್ಸ್(ಬೋನಿ) ಮಾಡಿಕೊಟ್ಟಿತ್ತು ತದನಂತರದ ದಿನಗಳಲ್ಲಿ ದೇಶದ ಮೂಲೆ-ಮೂಲೆಯಲ್ಲೂ ಕೇಸರಿ ಅರಳಿತು ಪ್ರಸ್ತುತ ಎಲ್ಲಿ ನೋಡಿದರು ಬಿಜೆಪಿ, ಕಾರ್ಯಕರ್ತರಿಗೆ ಪೆಟ್ಟು-ನೋವು-ತಿನ್ನಿಸಿದ ಕಾಂಗ್ರೇಸ್ ನಾಯಕರು ವೇದಿಕೆಯಲ್ಲಿ ಪಕ್ಷ ಬೆಳೆಸಲು ಸರ್ವಸ್ವ ಕಳೆದುಕೊಂಡ ದೇವ ದುರ್ಲಭ ಕಾರ್ಯಕರ್ತರು ಮೂಲೆಯಲ್ಲಿ ಸದ್ಯದ ವಾಸ್ತವ.


ಹೀಗೆ ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಅಧಿಕಾರ ಎಂದರೇ ಏನು -ಹೇಗೆ ಎಂದು ತೋರಿಸಿಕೊಟ್ಟ ಬಲಿಷ್ಠ ಕಾರ್ಯಕರ್ತರ ಪಡೆಯಿರುವ ಉಡುಪಿಯಲ್ಲಿ ಒಬ್ಬ ಈ ರಾಜ್ಯದ ದೊರೆಗೆ ಉಪಹಾರ ಕೊಡಿಸುವಷ್ಟು ತಾಕತ್ತಿಲ್ಲವೇ ಅಥಾವ ಅವರಿಗೆ ಮನಸಿರಲಿಲ್ಲವೇ ಎಂಬುದೇ ಈ ಅಂಕಣದ ಸಾರಾಂಶ.

ಹೌದು ಮಲ್ಪೆಯ ಮತ್ಸ್ಯೋದ್ಯಮಿ-ಶಾಸಕ-ಸಚಿವ ಪ್ರಮೋದ್ ಮಧ್ವರಾಜರ ಮನೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ಬೆಳಗ್ಗಿನ ಉಪಹಾರ ನಾಮಕವಸ್ಥೆಗೆ ಗೋಶಾಲೆ ಭೇಟಿ ಕಾರ್ಯಕ್ರಮ ರಾಜ್ಯದ ದೊರೆಯ ಹಿಂದೆ ಅಂದು ಪ್ರಮೋದ್ ಮದ್ವರಾಜರ ಬಿಜೆಪಿ ಎಂಟ್ರಿಗೆ ಗೇಟ್‍ಗೆ ಬೀಗ ಹಾಕಿ ಕೀಲಿಕೈಯನ್ನು ಅಡಗಿಸಿಟ್ಟ ಧುರೀಣ ನಾಯಕರು ಸ್ಸಾರಿ ಸೋ ಕಾಲ್ಡ್ ನಾಯಕರು.

ಉಡುಪಿ ಜಿಲ್ಲೆಗೆ ಹತ್ತು ಹಲವು ಬಾರಿ ಎಂಟ್ರಿಕೊಟ್ಟ ರಾಜ್ಯದ ಮುಖ್ಯಮಂತ್ರಿಯ ರಾತ್ರಿಯ ತಂಗುದಾಣ ಹಾಲಿ ಶಾಸಕರ ಐಷರಾಮಿ ಹೋಟೆಲ್ ನೋ ಪ್ರಾಬ್ಲಂ ಆದರೇ ಬೆಳ್ಳಗ್ಗಿನ ಉಪಹಾರವನ್ನಾದರೂ ದೇವ ದುಲರ್ಭ ಕಾರ್ಯಕರ್ತರ ಮನೆಯಲ್ಲಿ ಮಾಡಿಸುವ ತಾಕತ್ತು ಇಲ್ಲಿನ ನಾಯಕರಿಗಿಲ್ಲವಾಗಿ ಹೋಯಿತೇ..?

ಮೊನ್ನೆ ಮೊನ್ನೆಯವರೆಗೆ ಭಾಜಪದ ನಾಯಕ ನರೇಂದ್ರ ಮೋದಿಯನ್ನು ಹೀಯಾಲಿಸಿ-ಹಿಂದೂ ದೇವರ ಬಗ್ಗೆ ಅವಹೇಳನವಾಗಿ ಹೇಳಿಕೆ ನೀಡಿ ಅದೆಷ್ಟೋ ವರ್ಷಗಳಿಂದ ದೇವರಂತೆ ಪಕ್ಷವನ್ನು ಪೂಜಿಸಿ ಪ್ರೀತಿಸುವ ಕಾರ್ಯಕರ್ತರಿಗೆ ಘಾಸಿಯನ್ನುಂಟು ಮಾಡಿದ್ದ ಪ್ರಮೋದ್ ರ ಮನೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಆಯೋಜನೆ ಮಾಡುವ ಮಟ್ಟಿಗೆ ಬಿಜೆಪಿ ಇಳಿದು ಬಿಟ್ಟಿದೆ ಅಂದರೆ ಸಾಮಾನ್ಯ ಕಾರ್ಯಕರ್ತರನನ್ನು ಎಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ತಂದಿರ ಬಹುದು ಊಹಿಸಬಹುದೇ..??

 

ಉಡುಪಿಯಲ್ಲಿ ಅವಲಕ್ಕಿ ನೀರು ಕುಡಿದು ಪಕ್ಷ ಕಟ್ಟಿದ ಅದೇಷ್ಟೋ ನಾಯಕ ಮನೆ ನಗರ ಭಾಗದಲ್ಲಿಯೇ ಅಂಟಿಕೊಂಡಿದೆ ಅಂತಹ ಕಾರ್ಯಕರ್ತರ ಮನೆಯ ಉಪಹಾರ ಮುಖ್ಯಮಂತ್ರಿಗೆ ಸೇರುವುದಿಲ್ಲವೋ ಗೊತ್ತಿಲ್ಲ! ಆದರೇ ಗೇಟ್ ಗೆ ಬೀಗ ಹಾಕಿದ್ದ ನಾಯಕರು ಮಾತ್ರ ಅವತ್ತೂ ಮಾಜಿ ಸಚಿವನ ಗೇಟ್ ಕೀಪರ್ ಆಗಿ ಕಾಯ್ತ ಇದ್ದದ್ದು ವಿಪರ್ಯಾಸವಲ್ಲವೇ..??

ಹಾಗದರೇ ದೇವದುರ್ಲಭ ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಜೈಕಾರ ಹಾಕಲು, ಬ್ಯಾನರ್ ಕಟ್ಟಲು,ವೇದಿಕೆಯಲ್ಲಿ ಮುಖಸ್ತುತಿಯ ಮಾತಿಗೆ ಮಾತ್ರ ಸೀಮಿತವಾದರೇ ಅದರಲ್ಲೂ ಪಕ್ಕಾ ಬಿಜೆಪಿ ಹಿಂದುತ್ವದ ಕಾರ್ಯಕರ್ತರಿಗೆ ನೋವು ಕೊಟ್ಟಿದ್ದ ಕಾಂಗ್ರೇಸ್ ನಾಯಕನ ಮನೆಯ ಉಪಹಾರ ಭಾಜಪದ ಮುಖಂಡರಿಗೆ ತೃಪ್ತಿಕೊಟ್ಟಿತೋ ಗೊತ್ತಿಲ್ಲ ಆದರೇ ನೈಜ ಕ್ರೈಡರ್ ಬೇಸಿಸ್ ಕಾರ್ಯಕರ್ತರ ಮನಸ್ಸನ್ನು ನುಚ್ಚುನೂರು ಮಾಡಿಬಿಟ್ಟಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಪ್ರಮೋದರನ್ನು ಈ ಸಲ ಬಿಜೆಪಿಯಲ್ಲಿ ಟಿಕೆಟ್ ನೀಡಿ ಶಾಸಕ ಮಾಡಬೇಕೆಂದು ಹೊರಟ ಜಿಲ್ಲೆಯ ಒಂದಿಷ್ಟು ಎಡಬಿಡಂಗಿ ನಾಯಕರ ಪಡೆಯಿದೆ ಆದರೇ ಕಾರ್ಯಕರ್ತರಿಗೆ ಅದೂ ಚೂರು ಇಷ್ಟವಾಗಲ್ಲ ಎಂಬುದು ಗೊತ್ತಿದ್ದರು ಅಂತಹಾ ದುಸ್ಸಾಹಸಕ್ಕೆ ಕೈ ಹಾಕಿ- ಕೈ-ಮೈ ಸುಟ್ಟು ಕೊಳ್ಳುವ ಸಾಧ್ಯತೇ ಜಾಸ್ತಿಯೇ ಇದೆ.

ಪ್ರೋಟೊಕಾಲ್ ಪ್ರಕಾರ ಕಾಪುವಿನ ಜನಸಂಕಲ್ಪ ಸಮಾವೇಶದ ವೇದಿಕೆಯಲ್ಲಿ ಪ್ರಮೋದರಿಗೆ ಎಂಟ್ರಿಯಿಲ್ಲ ಆದರೇ ಎರಡನೇ ಸಾಲಿನಲ್ಲಿ ಹಿಂದು ದೇವರನ್ನು ಅವಹೇಳನ ಮಾಡಿದ ಇವರಿಗೆ ಸೀಟ್ ಕೊಡುವಷ್ಟು ಉಡುಪಿಯ ಜಿಲ್ಲಾ ಬಿಜೆಪಿ ಬೆಳೆದುಬಿಟ್ಟಿದೆ ಅಂದರೇ ಕಾರ್ಯಕರ್ತರೂ ಯಾವತ್ತಿದ್ದರೂ ನಮ್ಮವರೇ ಅಲ್ವಾ ಎಂಬ ಅಸಡ್ಡೆ ಭಾವನೆಯೇ..?ಅಥಾವ ದುಡ್ಡಿನ ಮುಂದೆ ಎಲ್ಲವೂ ಗೌನವೇ ಎಂಬುದು ಕಾರ್ಯಕರ್ತರಲ್ಲಿ ಎದ್ದಿರುವ ಪ್ರಶ್ನೆಯಾಗಿದೆ.

ಪ್ರಮೋದ್ ಮಧ್ವರಾಜ್ ಬಿಜೆಪಿ ಎಂಟ್ರಿಯಾಗುವ ಸಮಯದಲ್ಲೇ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ನೋವಿತ್ತು ಅಸಾಮಧಾನ ಹೊರಹಾಕಿದ್ದರು ಯಾವುದನ್ನು ಕ್ಯಾರೇ ಮಾಡದೇ ಪಕ್ಷಕ್ಕೆ ಬರ ಮಾಡಿಕೊಂಡ ಬಿಜೆಪಿ ನಾಯಕರು ಮೊನ್ನೆಯ ದಿನ ಅವರ ಮನೆಯಲ್ಲಿಯೇ ಉಪಹಾರ ಸೇವಿಸುವ ಮುಖೇನ ಉರಿಯುವ ಬೆಂಕಿಗೆ ತುಪ್ಪ ಸುರಿದಂಗಾಯಿತು ಅನ್ನುತ್ತಾರೆ ಹಿರಿಯ ಬಿಜೆಪಿ ಮುಖಂಡರು.

ಇನ್ನು ಹಿಂದು ವಿರೋಧಿ-ಮೋದಿ ವಿರೋದಿ ಹೇಳಿಕೆ ಕೊಡುವ ಯಾವುದೇ ಪಕ್ಷದ ನಾಯಕರಿಗೆ ಬಿಜೆಪಿನ ಕರೆದು ಮಣೆ ಹಾಕುವ ಪ್ರಸಂಗ ಇತ್ತಿಚಿನ ದಿನಗಳಲ್ಲಿ ಜಾಸ್ತಿಯಾಗಿಯೇ ಇದೆ ಅದರಲ್ಲೂ ರಾಮ-ಕೃಷ್ಣ ಮಾಂಸಹಾರಿಗಳು ಎಂದವರಿಗೆ ಟಿಕೆಟ್ ಕೊಡಲು ಮುಂದಾಗಿದೇಯೆ ಬಿಜೆಪಿ ಎಂಬುದು ಸದ್ಯವಿರುವ ಪ್ರಶ್ನೆ ಅಂತಹ ಕಾರ್ಯಕ್ಕೆನ್ನಾದರು ಈ ಸಲದ ಮಟ್ಟಿದೆ ಪ್ರಯತ್ನ ಪಟ್ಟರೇ ದೇವದುರ್ಲಭ ಕಾರ್ಯಕರ್ತರು ಸುಮ್ಮನಿರುವರೇ ಅದೂ ಕೂಡ ಕೃಷ್ಣಾ ನಗರಿ ಉಡುಪಿಯಲ್ಲಿ ನೋ ಚಾನ್ಸ್ ಎಟ್ ಆಲ್.

ಸದ್ಯ ಸೋಶಿಯಲ್ ಮೀಡಿಯಾ ಸೇರಿದಂತೆ ಹತ್ತು ಹಲವಾರು ಫ್ಲ್ಯಾಟ್‍ಫಾರ್ಮ್‍ಗಳಲ್ಲಿ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ ದುಡಿಯಲು ,ಕೇಸ್ ಹಾಕಿಸಿಕೊಳ್ಳಲು, ಲಾಠಿ ಏಟಿಗೆ , ಜೈಲೂಟಕ್ಕೆ ದೇವದುರ್ಲಭ ಕಾರ್ಯಕರ್ತರು ಬೇಕು ಆದರೇ ಬಿಜೆಪಿಯ ರಾಜ್ಯದ ನಾಯಕರಿಗೆ ಚಾಹ ಕುಡಿಯಲು ಮಾಜಿ ಕಾಂಗ್ರೇಸ್ ನಾಯಕನ ಮನೆ ಬೇಕು ಇದೆಲ್ಲವನ್ನೂ ನೋಡಿಯೂ ಬಿಜೆಪಿಯ ಕಾರ್ಯಕರ್ತರು ಪಕ್ಷ ಕಟ್ಟಿದ ಹಿರಿಯರು ಸುಮ್ಮನಿರಬೇಕು ಎಂಬುದು ಇದರ ಅರ್ಥವೇ ಅಥಾವ ಬಿಜೆಪಿಗಾಗಿ ದುಡಿಯುವ ನಾಯಕರಿಗಿಂತ ಕಾಂಗ್ರೇಸ್ ನಿಂದ ಬಂದ ನಾಯಕರು ಬಿಜೆಪಿಗೆ ಅನಿವಾರ್ಯವೇ ಎಂಬುದು ಸದ್ಯವಿರುವ ಪ್ರಶ್ನೆ.
ಪೊಲಿಟಿಕಲ್ ಬ್ಯುರೋ-ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

6 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 day ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

1 day ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

1 day ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

1 day ago