Featured

ಉಡುಪಿ : ಭಗವಾಧ್ವಜವನ್ನು ಹಾರಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ : ಶ್ಯಾಮರಾಜ್ ಬಿರ್ತಿ – vishwanews24

ಯಶ್ಪಾಲ್ ಸುವರ್ಣರೇ ಉಡುಪಿ ಜಿಲ್ಲಾಧಿಕಾರಿ ನಿಮ್ಮ ಪಕ್ಷದ ಕಾರ್ಯಕರ್ತರಲ್ಲವಲ್ಲ..

ಭಗವಾಧ್ವಜವನ್ನು ಹಾರಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ : ಶ್ಯಾಮರಾಜ್ ಬಿರ್ತಿ

ಉಡುಪಿ: ಯಶ್ಪಾಲ್ ಸುವರ್ಣರೇ ನೀವು ಬೇಕಿದ್ದರೇ ಭಗವಾಧ್ವಜವಾದರೂ ಹಾರಿಸಿ, ಮೋದಿ ಧ್ವಜವಾದರೂ ಹಾರಿಸಿಕೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಉಡುಪಿ ಜಿಲ್ಲಾಧಿಕಾರಿ ನಿಮ್ಮ ಪಕ್ಷದ ಕಾರ್ಯಕರ್ತರಲ್ಲವಲ್ಲ.

ಅವರು ಉಡುಪಿಯ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು. ಒಂದು ಮಾಧ್ವ ಬ್ರಾಹ್ಮಣರ ಖಾಸಗೀ ಕಾರ್ಯಕ್ರಮದಲ್ಲಿ ಒಂದು ಕೋಮುವನ್ನು ಪ್ರತಿನಿಧಿಸುವ ಭಗವಾಧ್ವಜವನ್ನು ಸಾರ್ವಜನಿಕರ ಎದುರೇ ಹಾರಿಸಿ ಪರ್ಯಾಯವೆಂಬ ಪೂಜಾಕೈಂಕರ್ಯದ ಹಸ್ತಾಂತರ ಸಮಾರಂಭ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ ಎಂದು ನಮ್ಮ ಕಳವಳ.

ಪಾಕಿಸ್ತಾನದಲ್ಲಿ ಮುಸ್ಲಿಂ ಧ್ವಜ ಹಾರಿಸುವುದು ತಪ್ಪಲ್ಲಾ… ಯಾಕಂದ್ರೆ ಅದು ಮುಸ್ಲಿಂ ರಾಷ್ಟ್ರ ಯಶ್ಪಾಲ್ ರವರೇ…… ನಮ್ಮ ಭಾರತ ಜಾತ್ಯತೀತ ರಾಷ್ಟ್ರ.. ಇಲ್ಲಿ ಎಲ್ಲಾ ಧರ್ಮದವರೂ ಸಮಾನರು. ಒಬ್ಬ ಮುಖ್ಯಅಧಿಕಾರಿಯಾಗಿ ಒಂದು ಕೋಮುವನ್ನು ಮಾತ್ರ ಪ್ರತಿನಿಧಿಸುವ ಕಾರ್ಯ ಮಾಡುವುದು ತಪ್ಪು ಎಂದು ನಮ್ಮ ಭಾವನೆ.

ಜಿಲ್ಲಾಧಿಕಾರಿಯವರು ಕೂತ ಕುರ್ಚಿಗೆ ಮತ್ತು ಜಿಲ್ಲಾಧಿಕಾರಿಯವರ ಹುದ್ದೆಗೆ ಇದು ಗೌರವ ತರುವಂತದಲ್ಲಾ. ಜನಪ್ರತಿನಿಧಿಯಾದ ತಾವು ಇಡೀ ಉಡುಪಿ ಕ್ಷೇತ್ರದ ಜನಪ್ರತಿನಿಧಿ. ಬರೀ ಹಿಂದುಗಳ ಪ್ರತಿನಿಧಿಯಲ್ಲ. ಇದು ತಮ್ಮ ಗಮನಕ್ಕೆ ಇರಲಿ. ಹಾಗೆಯೇ ಜಿಲ್ಲಾಧಿಕಾರಿಯವರು ಒಂದು ಸರಕಾರಿ ಮುಖ್ಯ ಹುದ್ದೆಯನ್ನು ಅಲಂಕರಿಸಿರುವ ಸರ್ವ ಧರ್ಮದವರ ಜಿಲ್ಲಾಧಿಕಾರಿ ಅವರು. ಬರೀ ಬ್ರಾಹ್ಮಣರ ಅಥವಾ ಹಿಂದುಗಳ ಜಿಲ್ಲಾಧಿಕಾರಿಯವರಲ್ಲ ಎಂಬುದು ನಮ್ಮ ಭಾವನೆ ಅಷ್ಟೇ.

ಅಷ್ಟಕ್ಕೂ ಈ ಬಾರಿ ಮಾತ್ರ ಪರ್ಯಾಯ ಯಶಸ್ವಿಯಾದುದಲ್ಲ. ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪರ್ಯಾಯವು ಮೊದಲಿನ ಎಲ್ಲಾ ಶಾಸಕರಿದ್ದಾಗಲೂ ಯಶಸ್ವಿಯಾಗಿ ನಡೆದಿದೆ. ಮೊದಲಿನ ಪರ್ಯಾಯಗಳಿಗೆ ಹೋಲಿಸಿದರೆ ಈ ಬಾರಿ ಗೊಂದಲಮಯವಾಗಿ ಕಂಡಿದ್ದು ಜಿಲ್ಲಾಧಿಕಾರಿಯವರ ನಡೆಯಿಂದ. ಹಾಗಾಗಿ ಕಾಂಗ್ರೆಸ್ ಸರಕಾರದಿಂದ ಆರು ಕೋಟಿ ರೂ. ಅನುಧಾನ ಪಡೆದೂ ಕಲ್ಸಂಕದಿಂದ ಅಂಬಾಗಿಲಿಗೆ ಹೋಗುವ ರಸ್ತೆ ರೀಪೇರಿಯನ್ನೂ ಮಾಡದೇ ಪರ್ಯಾಯ ನಡೆಸಿದ್ದು ಯಶಸ್ವಿ ಆಯಿತೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು ಎಷ್ಟು ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

16 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

16 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

16 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

19 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

19 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

20 hours ago