ಉಡುಪಿ: ಯಶ್ಪಾಲ್ ಸುವರ್ಣರೇ ನೀವು ಬೇಕಿದ್ದರೇ ಭಗವಾಧ್ವಜವಾದರೂ ಹಾರಿಸಿ, ಮೋದಿ ಧ್ವಜವಾದರೂ ಹಾರಿಸಿಕೊಳ್ಳಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಉಡುಪಿ ಜಿಲ್ಲಾಧಿಕಾರಿ ನಿಮ್ಮ ಪಕ್ಷದ ಕಾರ್ಯಕರ್ತರಲ್ಲವಲ್ಲ.
ಅವರು ಉಡುಪಿಯ ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ದಂಡಾಧಿಕಾರಿಯವರು. ಒಂದು ಮಾಧ್ವ ಬ್ರಾಹ್ಮಣರ ಖಾಸಗೀ ಕಾರ್ಯಕ್ರಮದಲ್ಲಿ ಒಂದು ಕೋಮುವನ್ನು ಪ್ರತಿನಿಧಿಸುವ ಭಗವಾಧ್ವಜವನ್ನು ಸಾರ್ವಜನಿಕರ ಎದುರೇ ಹಾರಿಸಿ ಪರ್ಯಾಯವೆಂಬ ಪೂಜಾಕೈಂಕರ್ಯದ ಹಸ್ತಾಂತರ ಸಮಾರಂಭ ಮೆರವಣಿಗೆಗೆ ಚಾಲನೆ ಕೊಟ್ಟಿದ್ದು ಸರಿಯಲ್ಲ ಎಂದು ನಮ್ಮ ಕಳವಳ.
ಪಾಕಿಸ್ತಾನದಲ್ಲಿ ಮುಸ್ಲಿಂ ಧ್ವಜ ಹಾರಿಸುವುದು ತಪ್ಪಲ್ಲಾ… ಯಾಕಂದ್ರೆ ಅದು ಮುಸ್ಲಿಂ ರಾಷ್ಟ್ರ ಯಶ್ಪಾಲ್ ರವರೇ…… ನಮ್ಮ ಭಾರತ ಜಾತ್ಯತೀತ ರಾಷ್ಟ್ರ.. ಇಲ್ಲಿ ಎಲ್ಲಾ ಧರ್ಮದವರೂ ಸಮಾನರು. ಒಬ್ಬ ಮುಖ್ಯಅಧಿಕಾರಿಯಾಗಿ ಒಂದು ಕೋಮುವನ್ನು ಮಾತ್ರ ಪ್ರತಿನಿಧಿಸುವ ಕಾರ್ಯ ಮಾಡುವುದು ತಪ್ಪು ಎಂದು ನಮ್ಮ ಭಾವನೆ.
ಜಿಲ್ಲಾಧಿಕಾರಿಯವರು ಕೂತ ಕುರ್ಚಿಗೆ ಮತ್ತು ಜಿಲ್ಲಾಧಿಕಾರಿಯವರ ಹುದ್ದೆಗೆ ಇದು ಗೌರವ ತರುವಂತದಲ್ಲಾ. ಜನಪ್ರತಿನಿಧಿಯಾದ ತಾವು ಇಡೀ ಉಡುಪಿ ಕ್ಷೇತ್ರದ ಜನಪ್ರತಿನಿಧಿ. ಬರೀ ಹಿಂದುಗಳ ಪ್ರತಿನಿಧಿಯಲ್ಲ. ಇದು ತಮ್ಮ ಗಮನಕ್ಕೆ ಇರಲಿ. ಹಾಗೆಯೇ ಜಿಲ್ಲಾಧಿಕಾರಿಯವರು ಒಂದು ಸರಕಾರಿ ಮುಖ್ಯ ಹುದ್ದೆಯನ್ನು ಅಲಂಕರಿಸಿರುವ ಸರ್ವ ಧರ್ಮದವರ ಜಿಲ್ಲಾಧಿಕಾರಿ ಅವರು. ಬರೀ ಬ್ರಾಹ್ಮಣರ ಅಥವಾ ಹಿಂದುಗಳ ಜಿಲ್ಲಾಧಿಕಾರಿಯವರಲ್ಲ ಎಂಬುದು ನಮ್ಮ ಭಾವನೆ ಅಷ್ಟೇ.
ಅಷ್ಟಕ್ಕೂ ಈ ಬಾರಿ ಮಾತ್ರ ಪರ್ಯಾಯ ಯಶಸ್ವಿಯಾದುದಲ್ಲ. ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪರ್ಯಾಯವು ಮೊದಲಿನ ಎಲ್ಲಾ ಶಾಸಕರಿದ್ದಾಗಲೂ ಯಶಸ್ವಿಯಾಗಿ ನಡೆದಿದೆ. ಮೊದಲಿನ ಪರ್ಯಾಯಗಳಿಗೆ ಹೋಲಿಸಿದರೆ ಈ ಬಾರಿ ಗೊಂದಲಮಯವಾಗಿ ಕಂಡಿದ್ದು ಜಿಲ್ಲಾಧಿಕಾರಿಯವರ ನಡೆಯಿಂದ. ಹಾಗಾಗಿ ಕಾಂಗ್ರೆಸ್ ಸರಕಾರದಿಂದ ಆರು ಕೋಟಿ ರೂ. ಅನುಧಾನ ಪಡೆದೂ ಕಲ್ಸಂಕದಿಂದ ಅಂಬಾಗಿಲಿಗೆ ಹೋಗುವ ರಸ್ತೆ ರೀಪೇರಿಯನ್ನೂ ಮಾಡದೇ ಪರ್ಯಾಯ ನಡೆಸಿದ್ದು ಯಶಸ್ವಿ ಆಯಿತೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು ಎಷ್ಟು ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…