ಉಡುಪಿ

ಉಡುಪಿ ಮರಳು ಸಮಸ್ಯೆ ನಿವಾರಣೆ : ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು : ಕೋಟ ಶ್ರೀನಿವಾಸ ಪೂಜಾರಿ -Vishwanews24

ಉಡುಪಿ: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿ ಗುರುತಿಸಿರುವ 8 ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಿದ್ದು, ಶುಕ್ರವಾರ ಸುಮಾರು 85 ಮೆಟ್ರಿಕ್ ಟನ್ ಮರಳು ಸಾಗಾಟ ಮಾಡಲಾಗಿದೆ.

ಜಿಲ್ಲಾ ಮರಳು ಉಸ್ತುವಾರಿ ಸಮಿತಿ 158 ಮಂದಿ ಸಾಂಪ್ರದಾಯಿಕ ಪರವಾನಗಿದಾರರನ್ನು ಗುರುತಿಸಿದ್ದು, ಸ್ವೀಕೃತ ಅರ್ಜಿಗಳಲ್ಲಿ 42 ಮಂದಿಗೆ ಪರವಾನಗಿ ನೀಡಿದೆ. ಗುರುವಾರ 16 ಮಂದಿ ಐಎಲ್‌ಎಂಎಸ್‌ನಲ್ಲಿ ನೋಂದಣಿ ಮಾಡಿ ಟ್ರಿಪ್‌ಶೀಟ್ ಪಡೆದಿದ್ದು, ಶುಕ್ರವಾರ ಮರಳು ಸಾಗಾಟ ಆರಂಭಿಸಿದ್ದಾರೆ. ಸ್ವರ್ಣಾ ನದಿಯಲ್ಲಿ ಮೂಡತೋನ್ಸೆ, ಉಪ್ಪೂರು, ಕುದ್ರುಬೆಟ್ಟು ವಲಯದಲ್ಲಿ ಮರಳು ದಿಬ್ಬ ತೆರವು ಮಾಡಲಾಗುತ್ತಿದೆ.

‘ಮರಳು ಸಮಸ್ಯೆ ಹಲವು ವರ್ಷದಿಂದ ಪರಿಹಾರ ಕಾಣದ ಪರಿಣಾಮ ಕರಾವಳಿಯ ಆರ್ಥಿಕತೆಗೆ ಹೊಡೆತ ನೀಡಿದೆ. ಈಗ ಮರಳು ದಿಬ್ಬ ತೆರವು ಕಾರ್ಯ ಆರಂಭವಾಗಿದ್ದು, ಸಾವಿರಾರು ಕೂಲಿ ಕಾರ್ಮಿಕರು ನೆಮ್ಮದಿ ಕಾಣಲಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ ಮರಳು ಜನರಿಗೆ ಲಭ್ಯವಾಗಲಿದೆ’ ಎಂದು ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಬಾರಿ ಮರಳು ದಿಬ್ಬಗಳನ್ನು ಗುರುತಿಸುವಾಗ ಮೀನುಗಾರಿಕೆ ನಡೆಸುವ ಕೆಲವೊಂದು ಪ್ರದೇಶ ಗಳಲ್ಲಿ ಮರಳಿನ ದಿಬ್ಬಗಳನ್ನು ಗುರುತಿಸಲಾಗಿತ್ತು. ಇಂತಹ ಕಡೆಗಳಲ್ಲಿ ಅಲ್ಲಿನ ಮೀನುಗಾರರೊಂದಿಗೆ ಮತನಾಡಿ ಅವರ ಬೋಟಿನ ಸಂಚಾರಕ್ಕೆ ಮರಳು ಅಡ್ಡಿಯಾಗುತಿದ್ದಲ್ಲಿ ಅಲ್ಲಿ ಮರಳು ತೆಗೆಯಲು ಅನುಮತಿ ನೀಡುತ್ತೇವೆ ಇಲ್ಲದಿದ್ದಲ್ಲಿ ಬೇರೆ ಪ್ರದೇಶಗಳಲ್ಲಿ ದಿಬ್ಬಗಳನ್ನು ಗುರುತಿಸಲಾಗುವುದು. ನಾನ್ ಸಿಆರ್ ಝಡ್ ಪ್ರದೇಶದಲ್ಲಿ 24 ಕಡೆಗಳಲ್ಲಿ ಮರಳು ತೆಗೆಯಲು ಟೆಂಡರ್ ಕರೆಯಲಾಗಿತ್ತು ಆದರೆ ಕೇವಲ ಇಬ್ಬರು ಟೆಂಡರ್ ಮಾತ್ರ ಆಸಕ್ತಿ ತೋರಿಸಿದ್ದಾರೆ ಅವರಿಗೆ ವರ್ಕ್ ಆಡರ್ರ್ ನೀಡಿದ್ದು ಟೆಂಡರ್ ನಿಯಮಗಳನ್ನು ಸರಳೀಕರಿಸಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದವರು ತಿಳಿಸಿದರು.

ಕಳೆದ ಹಲವು ಸಮಯಗಳಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇದ್ದುರಿಂದಾಗಿ ಈಗ ಪ್ರಯೋಗಿಕವಾಗಿ ಮರಳನ್ನು ಆಪ್ ಮುಖಾಂತರ ನೀಡಲಾಗುವುದಿಲ್ಲ. ಆದರೆ ಬಜೆಯಲ್ಲಿನ ಹೂಳನ್ನು ತೆಗೆಯಲು ಈಗಾಗಲೇ ವರ್ಕ್ ಆರ್ಡರ್ ನೀಡಿದ್ದು ಇಲ್ಲಿ ಪ್ರಯಾಗಿಕವಾಗಿ ಆಪ್ ನ್ನು ಬಳಸಿ ಮರಳು ವಿತರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು. ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸಲು 158ಕ್ಕೂ ಹೆಚ್ಚು ಪರವಾನಗಿ ನೀಡಲಾಗುತ್ತಿದೆ. ದುಡಿದುಣ್ಣುವ ಕಾರ್ಮಿಕರು ಮತ್ತು ಬಡವರ ಮನೆ, ನಿಂತು ಹೋಗಿರುವ ವಿವಿಧ ಕಾಮಗಾರಿಗಳಿಗೆ ಮರಳು ಸಿಗುವ ಮೂಲಕ ಚಾಲನೆ ಸಿಕ್ಕರೆ ನನಗದು ಖುಷಿ ಮತ್ತು ಸಮಾಧಾನ. ದುಡಿಯುವವರ ಮುಖದಲ್ಲಿ ನಗು ಮೂಡಲಿ.

– ಕೋಟ ಶ್ರೀನಿವಾಸ ಪೂಜಾರಿ, ಸಚಿವ

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

7 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

7 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

7 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

8 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

8 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

10 hours ago