ಉಡುಪಿ: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ವೋಟಿಂಗ್ ಬ್ಯಾಂಕ್ ಆಗಿ ಮಾತ್ರ ಇಟ್ಟುಕೊಂಡು ವಿಶೇಷವಾಗಿ ಮುಸ್ಲಿಮರ ರಾಜಕೀಯ ಭವಿಷ್ಯದ ತೇಜೋವಧೆ ಮಾಡುತ್ತಾ ತಮ್ಮ ರಾಜಕೀಯದ ಬೇಳೆ ಬೇಯಿಸುವುದನ್ನು ಈಗಲೂ ಬಿಡಲಿಲ್ಲ ಎನ್ನುವುದು ನಿನ್ನೆಯ ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆಯವರು ಸಾಬೀತು ಪಡಿಸಿದ್ದಾರೆ.
ಮುಸ್ಲಿಮರ ರಾಜಕೀಯ ಚಿಂತನೆಯು ದಿನದಿಂದ ದಿನಕ್ಕೆ ಬೆಳೆಯುವುದು ಸಹಿಸದೆ ತಮ್ಮ ಕ್ಷೇತ್ರದಲ್ಲಿ ತಮ್ಮ ಮುಂದೆ ಬರುವ ದಿನಗಳಲ್ಲಿ ಚುನಾವಣೆಗೆ ಪ್ರತಿಸ್ಪರ್ದಿಯಾಗಿ ಎಸ್ಡಿಪಿಐ ನಿಲ್ಲುವುದು ತಿಳಿದು ಹೇಗಾದರು ಮಾಡಿ ಎಸ್ಡಿಪಿಐಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಇಂತಹ ಹೇಳಿಕೆ ಕೊಡುವುದು ನಾಯಕರಾದ ಇವರಿಗೆ ತಕ್ಕುದಲ್ಲ. ಸಂವಿಧಾನದ ಮೇಲೆ ನಂಬಿಕೆ ಇಟ್ಟ ಜನಪರ ಪ್ರಾಮಾಣಿಕ ಪ್ರಜಾಸಾತ್ತಾತ್ಮಕ ಜಾತ್ಯತೀತ ಪಕ್ಷ ವನ್ನು ಮುಗಿಸಲು ಹೊರಟ ಇವರಿಗೆ ಪ್ರಜಾಪ್ರಭುತ್ವ ದ ಮೇಲೆ ಇರುವ ನಂಬಿಕೆ ಎಷ್ಟುಯೆಂದು ಇದರಿಂದ ತಿಳಿಯುತ್ತದೆ.
ಇವರು ಮಾಡುತಿರುವ ಆರೋಪಗಳೆಲ್ಲವನ್ನು ಸಾಬೀತುಪಡಿಸಲು ನೀವು ಸಿದ್ದರಾಗಿ, ಅಲ್ಲಿಗೆ ಯಾವ ಸಮಯಕ್ಕೆ ನಾವು ಬರಬೇಕೆಂದು ತಿಳಿಸಿ,ಇಲ್ಲವೇ ರಾಜಕೀಯ ಜೀವನದಿಂದ ನಿವ್ರತ್ತಿ ಘೋಷಿಸಿ.
ಸುಳ್ಳು ಆರೋಪಿಸಿ ಜನತೆಯ ದಾರಿ ತಪ್ಪಿಸುವ ಬುದ್ಧಿ ಬಿಟ್ಟುಬಿಡಿ ಮತ್ತು ನಿಮ್ಮದೇ ಪಕ್ಷದವರು ದಿನನಿತ್ಯ ಬಿಜೆಪಿಗೆ ಹೋಗುವುದನ್ನು ತಡೆಯಿರಿ, ಕಾಲಹರಣ ಮಾಡಿದಷ್ಟು ಮುಂದೆ ನೀವು ಬಿಜೆಪಿಗೆ ಹೋಗುವುದನ್ನು ನಾವೆಲ್ಲ ನೋಡಬೇಕಾದೀತು ಎಂದು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಎಚ್ಚರಿಕೆ ನೀಡಿದ್ದಾರೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…