ಉಡುಪಿ: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ವೋಟಿಂಗ್ ಬ್ಯಾಂಕ್ ಆಗಿ ಮಾತ್ರ ಇಟ್ಟುಕೊಂಡು ವಿಶೇಷವಾಗಿ ಮುಸ್ಲಿಮರ ರಾಜಕೀಯ ಭವಿಷ್ಯದ ತೇಜೋವಧೆ ಮಾಡುತ್ತಾ ತಮ್ಮ ರಾಜಕೀಯದ ಬೇಳೆ ಬೇಯಿಸುವುದನ್ನು ಈಗಲೂ ಬಿಡಲಿಲ್ಲ ಎನ್ನುವುದು ನಿನ್ನೆಯ ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆಯವರು ಸಾಬೀತು ಪಡಿಸಿದ್ದಾರೆ.
ಮುಸ್ಲಿಮರ ರಾಜಕೀಯ ಚಿಂತನೆಯು ದಿನದಿಂದ ದಿನಕ್ಕೆ ಬೆಳೆಯುವುದು ಸಹಿಸದೆ ತಮ್ಮ ಕ್ಷೇತ್ರದಲ್ಲಿ ತಮ್ಮ ಮುಂದೆ ಬರುವ ದಿನಗಳಲ್ಲಿ ಚುನಾವಣೆಗೆ ಪ್ರತಿಸ್ಪರ್ದಿಯಾಗಿ ಎಸ್ಡಿಪಿಐ ನಿಲ್ಲುವುದು ತಿಳಿದು ಹೇಗಾದರು ಮಾಡಿ ಎಸ್ಡಿಪಿಐಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಇಂತಹ ಹೇಳಿಕೆ ಕೊಡುವುದು ನಾಯಕರಾದ ಇವರಿಗೆ ತಕ್ಕುದಲ್ಲ. ಸಂವಿಧಾನದ ಮೇಲೆ ನಂಬಿಕೆ ಇಟ್ಟ ಜನಪರ ಪ್ರಾಮಾಣಿಕ ಪ್ರಜಾಸಾತ್ತಾತ್ಮಕ ಜಾತ್ಯತೀತ ಪಕ್ಷ ವನ್ನು ಮುಗಿಸಲು ಹೊರಟ ಇವರಿಗೆ ಪ್ರಜಾಪ್ರಭುತ್ವ ದ ಮೇಲೆ ಇರುವ ನಂಬಿಕೆ ಎಷ್ಟುಯೆಂದು ಇದರಿಂದ ತಿಳಿಯುತ್ತದೆ.
ಇವರು ಮಾಡುತಿರುವ ಆರೋಪಗಳೆಲ್ಲವನ್ನು ಸಾಬೀತುಪಡಿಸಲು ನೀವು ಸಿದ್ದರಾಗಿ, ಅಲ್ಲಿಗೆ ಯಾವ ಸಮಯಕ್ಕೆ ನಾವು ಬರಬೇಕೆಂದು ತಿಳಿಸಿ,ಇಲ್ಲವೇ ರಾಜಕೀಯ ಜೀವನದಿಂದ ನಿವ್ರತ್ತಿ ಘೋಷಿಸಿ.
ಸುಳ್ಳು ಆರೋಪಿಸಿ ಜನತೆಯ ದಾರಿ ತಪ್ಪಿಸುವ ಬುದ್ಧಿ ಬಿಟ್ಟುಬಿಡಿ ಮತ್ತು ನಿಮ್ಮದೇ ಪಕ್ಷದವರು ದಿನನಿತ್ಯ ಬಿಜೆಪಿಗೆ ಹೋಗುವುದನ್ನು ತಡೆಯಿರಿ, ಕಾಲಹರಣ ಮಾಡಿದಷ್ಟು ಮುಂದೆ ನೀವು ಬಿಜೆಪಿಗೆ ಹೋಗುವುದನ್ನು ನಾವೆಲ್ಲ ನೋಡಬೇಕಾದೀತು ಎಂದು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಎಚ್ಚರಿಕೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…