ಉಡುಪಿ: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ವೋಟಿಂಗ್ ಬ್ಯಾಂಕ್ ಆಗಿ ಮಾತ್ರ ಇಟ್ಟುಕೊಂಡು ವಿಶೇಷವಾಗಿ ಮುಸ್ಲಿಮರ ರಾಜಕೀಯ ಭವಿಷ್ಯದ ತೇಜೋವಧೆ ಮಾಡುತ್ತಾ ತಮ್ಮ ರಾಜಕೀಯದ ಬೇಳೆ ಬೇಯಿಸುವುದನ್ನು ಈಗಲೂ ಬಿಡಲಿಲ್ಲ ಎನ್ನುವುದು ನಿನ್ನೆಯ ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆಯವರು ಸಾಬೀತು ಪಡಿಸಿದ್ದಾರೆ.
ಮುಸ್ಲಿಮರ ರಾಜಕೀಯ ಚಿಂತನೆಯು ದಿನದಿಂದ ದಿನಕ್ಕೆ ಬೆಳೆಯುವುದು ಸಹಿಸದೆ ತಮ್ಮ ಕ್ಷೇತ್ರದಲ್ಲಿ ತಮ್ಮ ಮುಂದೆ ಬರುವ ದಿನಗಳಲ್ಲಿ ಚುನಾವಣೆಗೆ ಪ್ರತಿಸ್ಪರ್ದಿಯಾಗಿ ಎಸ್ಡಿಪಿಐ ನಿಲ್ಲುವುದು ತಿಳಿದು ಹೇಗಾದರು ಮಾಡಿ ಎಸ್ಡಿಪಿಐಯನ್ನು ನಿರ್ನಾಮ ಮಾಡುವ ಉದ್ದೇಶದಿಂದ ಇಂತಹ ಹೇಳಿಕೆ ಕೊಡುವುದು ನಾಯಕರಾದ ಇವರಿಗೆ ತಕ್ಕುದಲ್ಲ. ಸಂವಿಧಾನದ ಮೇಲೆ ನಂಬಿಕೆ ಇಟ್ಟ ಜನಪರ ಪ್ರಾಮಾಣಿಕ ಪ್ರಜಾಸಾತ್ತಾತ್ಮಕ ಜಾತ್ಯತೀತ ಪಕ್ಷ ವನ್ನು ಮುಗಿಸಲು ಹೊರಟ ಇವರಿಗೆ ಪ್ರಜಾಪ್ರಭುತ್ವ ದ ಮೇಲೆ ಇರುವ ನಂಬಿಕೆ ಎಷ್ಟುಯೆಂದು ಇದರಿಂದ ತಿಳಿಯುತ್ತದೆ.
ಇವರು ಮಾಡುತಿರುವ ಆರೋಪಗಳೆಲ್ಲವನ್ನು ಸಾಬೀತುಪಡಿಸಲು ನೀವು ಸಿದ್ದರಾಗಿ, ಅಲ್ಲಿಗೆ ಯಾವ ಸಮಯಕ್ಕೆ ನಾವು ಬರಬೇಕೆಂದು ತಿಳಿಸಿ,ಇಲ್ಲವೇ ರಾಜಕೀಯ ಜೀವನದಿಂದ ನಿವ್ರತ್ತಿ ಘೋಷಿಸಿ.
ಸುಳ್ಳು ಆರೋಪಿಸಿ ಜನತೆಯ ದಾರಿ ತಪ್ಪಿಸುವ ಬುದ್ಧಿ ಬಿಟ್ಟುಬಿಡಿ ಮತ್ತು ನಿಮ್ಮದೇ ಪಕ್ಷದವರು ದಿನನಿತ್ಯ ಬಿಜೆಪಿಗೆ ಹೋಗುವುದನ್ನು ತಡೆಯಿರಿ, ಕಾಲಹರಣ ಮಾಡಿದಷ್ಟು ಮುಂದೆ ನೀವು ಬಿಜೆಪಿಗೆ ಹೋಗುವುದನ್ನು ನಾವೆಲ್ಲ ನೋಡಬೇಕಾದೀತು ಎಂದು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲೀ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…