Featured

ಉಡುಪಿ: ರಘುಪತಿ ಭಟ್ ಆಸ್ತಿ 21 ಕೋಟಿ ; ಸಾಲ 4 ಕೋಟಿ  – vishwanews24

ಉಡುಪಿ: ರಘುಪತಿ ಭಟ್ ಆಸ್ತಿ 21 ಕೋಟಿ ; ಸಾಲ 4 ಕೋಟಿ

ಉಡುಪಿ: ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಣಕ್ಕೆ ಇಳಿಯಲು ಚುನಾವಣಾ ಅಧಿಕಾರಿಗಳಿಗೆ ತಮ್ಮ ಆಸ್ತಿಯ ವಿವರಗಳನ್ನು ನೀಡಿದ್ದಾರೆ.

ಚುನಾವಣಾಧಿಕಾರಿಗೆ ಗುರುವಾರ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 21,41,80,000 ಮೊತ್ತದ ಆಸ್ತಿ ಇದ್ದು, ಮನೆ ಮತ್ತು ವಾಹನಕ್ಕಾಗಿ ₹4,10,92,000 ಸಾವಿರ ಸಾಲ ಮಾಡಿರುವುದಾಗಿ ಅವರು ಘೋಷಿಸಿದ್ದಾರೆ. ಅವರ ಚರಾಸ್ತಿ 8,19,80,000 ಆಗಿದ್ದು ಸ್ಥಿರಾಸ್ತಿ 9,76,00,000 ಹೊಂದಿದ್ದಾರೆ. ಪತ್ನಿ ಶಿಲ್ಪಾ ಭಟ್ ಅವರ ಚರಾಸ್ತಿ 1, 11, 24,000. ಪುತ್ರರಿಬ್ಬರಲ್ಲಿ ಒಟ್ಟು ₹21 ಲಕ್ಷ ಇದೆ ಎಂದು ತಿಳಿದು ಬಂದಿದೆ.

ಹಾಗೂ 1 ಎಕರೆ 73 ಸೆಂಟ್ಸ್ ಕೃಷಿಯೇತರ ಜಮೀನು ಮತ್ತು 30 ಸೆಂಟ್ಸ್ ಕೃಷಿ ಜಮೀನು ಹೊಂದಿರುವ ರಘುಪತಿ ಭಟ್ ಅವರು 65 ಸೆಂಟ್ಸ್ ಅಳತೆಯ ನಿವೇಶನ ಹೊಂದಿದ್ದಾರೆ. ಮನೆ ಸಾಲ ₹1, 68,00,000 ಬಾಕಿ ಇದೆ. ವಾಹನ ಸಾಲ ₹11 ಲಕ್ಷ ಕಟ್ಟಬೇಕಿದೆ. ಯಾವುದೇ ಕ್ರಿಮಿನಲ್ ಕೇಸ್ ಕೂಡ ಹೊಂದಿಲ್ಲದ ರಘುಪತಿ ಭಟ್ ಅವರ ಬಳಿ ₹6,68,915, ಪತ್ನಿ ಶಿಲ್ಪಾ ಬಳಿ ₹42,000 ಮತ್ತು ಮಕ್ಕಳ ಬಳಿ ಒಟ್ಟು ₹8 ಸಾವಿರ ನಗದು ಇದೆ ಎಂದು ತಿಳಿದು ಬಂದಿದೆ.

ಉಡುಪಿಯ ಮಹಾಲಕ್ಷ್ಮಿ ಕೊ ಆಪರೇಟಿವ್ ಬ್ಯಾಂಕ್, ಹಿರಣ್ಯ ಬಿಲ್ಡರ್ಸ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಭಾರತ್ ಬಯೊ ಐಎಂಎಂ, ಕೇದಾರೋತ್ಥಾನ ಕೃಷಿ ಉತ್ಪಾದಕರ ಸಂಘ, ತರ್ಜನಿ ಇನ್ಸೂರೆನ್ಸ್, ಅದಾನಿ ದೆ ಗ್ರೀನ್ ಎನರ್ಜಿ, ಅದಾನಿ ಸಿಮೆಂಟ್ ಮತ್ತು ಡೆಲ್ಟಾ ಕಾರ್ಪ್‌ನಲ್ಲಿ ಕುಟುಂಬದ ಅನೇಕ ಷೇರುಗಳು ಇವೆ. ಇಬ್ಬರು ವ್ಯಕ್ತಿಗಳು, 5 ಸಂಸ್ಥೆಗಳಿಗೆ ಲಕ್ಷಾಂತರ ಮೊತ್ತದ ಸಾಲ ನೀಡಿದ್ದಾರೆ.

ಅವರ ಬಳಿ ₹16 ಲಕ್ಷ ಬೆಲೆಯ ಟಾಟಾ ನೆಕ್ಸಾನ್ ಇವಿ, ₹12 ಲಕ್ಷದ ಟೊಯೊಟ ಇನೋವ, ₹6 ಸಾವಿರ ಬೆಲೆಯ ಹೊಂಡಾ ಆ್ಯಕ್ಟಿವಾ ವಾಹನ ಗಳು ಇದ್ದು. ಪತ್ನಿ, ಪುತ್ರರ ಹೆಸರಿನಲ್ಲಿ ವಾಹನಗಳಿಲ್ಲ. ಭಟ್ ಅವರಲ್ಲಿ 400 ಗ್ರಾಂ ಚಿನ್ನ ಮತ್ತು 11 ಕಿಜಿ ಬೆಳ್ಳಿ, ಪತ್ನಿ ಬಳಿ 500 ಗ್ರಾಂ ಚಿನ್ನ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago