Featured

ಉಡುಪಿ : ಶಂಕರಪುರ ಮಲ್ಲಿಗೆ ಹೂವಿನ ಗರಿಷ್ಠ ದರ 1,250 ರೂ. ಗಳಿಂದ 2,100 ರೂ. ಗಳಿಗೆ ಏರಿಕೆ : ಡಿ. 23ರಿಂದ ಜಾರಿಗೆ – Vishwanews24

ಉಡುಪಿ : ಶಂಕರಪುರ ಮಲ್ಲಿಗೆ ಹೂವಿನ ಗರಿಷ್ಠ ದರ 1,250 ರೂ. ಗಳಿಂದ 2,100 ರೂ. ಗಳಿಗೆ ಏರಿಕೆ : ಡಿ. 23ರಿಂದ ಜಾರಿಗೆ – Vishwanews24

ಉಡುಪಿ,: ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಕೃಷಿ ಕೂಡಾ ಪ್ರಮುಖವಾದದ್ದು, ಇಲ್ಲಿ ಮಲ್ಲಿಗೆ ಕೃಷಿಯನ್ನೇ ನಂಬಿ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ಇದೀಗ ಮಲ್ಲಿಗೆ ದರದಲ್ಲಿ ಏರಿಕೆ ಕಂಡಿದ್ದು ಜಿಲ್ಲಾ ಕೃಷಿಕ ಸಂಘವು ಸಂತಸ ವ್ಯಕ್ತಪಡಿಸಿದೆ.

ಡಿ.23 ರಿಂದ ಅನ್ವಯವಾಗುವಂತೆ ಶಂಕರಪುರದ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಮಲ್ಲಿಗೆ ಹೂವಿನ ದರವನ್ನು ಅಟ್ಟಿಗೆ (3200 ಬಿಡಿ ಹೂವು) 2,100ರೂ.ಗಳಿಗೆ ಏರಿಸಿ ದರ ನಿಗದಿ ಪಡಿಸಿದೆ. ಇದೀಗ ದರ ನಿಗದಿ ಕೇಂದ್ರದ ಕ್ರಮವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘವು ಸ್ವಾಗತಿಸಿದ್ದು, ಸದ್ಯದ ವಿಪರೀತದ ಹವಾಮಾನ ಸ್ಥಿತಿಯಲ್ಲಿ ಈ ಮಲ್ಲಿಗೆ ಬೆಳೆಗಾರ ಕುಟುಂಬಗಳು, ಗಿಡಗಳು ಹಾನಿಗೊಳಗಾಗಿ ಹೂವಿನ ಇಳುವರಿ ಕುಂಠಿತವಾಗಿ ರುವುದರಿಂದ ತೀರಾ ಸಂಕಷ್ಟ ಪರಿಸ್ಥಿತಿಯಲ್ಲಿವೆ. ಇದರ ಜತೆಯಲ್ಲಿ ನಿರ್ವಹಣಾ ವೆಚ್ಚ, ಸಾಗಾಟದ ವೆಚ್ಚಗಳೂ ಏರಿರುವ ಪರಿಸ್ಥಿತಿ ಯಲ್ಲಿ ಮಲ್ಲಿಗೆ ಹೂವಿನ ದರ ಏರಿಕೆ ಸಮಂಜಸವಾಗಿದೆ ಎಂದು ಸಂಘ ಅಭಿಪ್ರಾಯ ಪಟ್ಟಿದೆ.

ಅಲ್ಲದೆ ಯಾವುದೇ ಹೂವಿನ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶಕ್ಕೇ ಮಾದರಿಯಾಗಿ, ಕಳೆದ 80 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಯಾವುದೇ ಒಳ ಒಪ್ಪಂದಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ, ಸರ್ವಸಮ್ಮತವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.

ಎಲ್ಲೆಡೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿ ಕೃಷಿಕರನ್ನು ಶೋಷಣೆ ಮಾಡುವವರೇ. ಕೃಷಿಕರಿಗಿಂತ ತಮ್ಮ ಹಿತಾಸಕ್ತಿಗಾಗಿ ಕೃಷಿಕರನ್ನು ಬಳಸಿಕೊಳ್ಳುತ್ತಾರೆ. ಇಂತಹವರ ನಡುವೆ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರ ಮಾತ್ರ ಕೃಷಿಕರ ಹಿತಾಸಕ್ತಿಯನ್ನೇ ಮಾನದಂಡವಾಗಿಟ್ಟುಕೊಂಡು, ಮಲ್ಲಿಗೆ ಬೆಳೆಗಾರರಿಂದ ಹಿಡಿದು, ಹೂವನ್ನು ಕೊಯ್ದು, ಸಂಗ್ರಹ ಮಾಡಿ ಮಾರುಕಟ್ಟೆಗೆ ಒಯ್ಯುವ ತನಕದ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ದರ ಏರಿಸಿದೆ ಎಂದು ಸಂಘವು ಬೆಲೆ ಏರಿಕೆ ಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

Vishwa News 24

Recent Posts

ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು -vishwanews24

ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು ಉಡುಪಿ: ಮುದರಂಗಡಿ ಗ್ರಾ.ಪಂ ಮಾಜಿ…

3 hours ago

ಮುದರಂಗಡಿ ಡೇವಿಡ್‌ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ -vishwanews24

ಮುದರಂಗಡಿ ಡೇವಿಡ್‌ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್‌…

4 hours ago

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು -vishwanews24

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು ಶಿಮ್ಲಾ :…

4 hours ago

ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ -vishwanews24

ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 32ನೇ ಕಂತಿನ ಹಣ ಬಿಡುಗಡೆಯಾಗಿದೆ.…

5 hours ago

ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ -vishwanews24

ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ?…

5 hours ago

ಶಿರ್ವ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು -vishwanews24

ಶಿರ್ವ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು ಶಿರ್ವ : ರಸ್ತೆ ದಾಟಲು ನಿಂತಿದ್ದ…

5 hours ago