Featured

ಉಡುಪಿ : ಶ್ರೀ ಕೃಷ್ಣನ ಜಾಗದ ವಿಚಾರದಲ್ಲಿ ಮಿಥುನ್ ರೈ ಎತ್ತಿದ ವಿಷಯ ಅವರ ಮತೀಯ ಬುದ್ಧಿ ಬ್ರಮಣೆಗೆ ಸಾಕ್ಷಿ : ಜಿಲ್ಲಾ ಶ್ರೀರಾಮಸೇನೆ – Vishwanews24

ಶ್ರೀ ಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲಿಮರು ಕೊಟ್ಟದ್ದು ಎಂದು ಮಿಥುನ್ ರೈ ಹೇಳಿಕೆ ಅತ್ಯಂತ ಬಾಲಿಶ..

ಮಿಥುನ್ ರೈ ಶ್ರೀಕೃಷ್ಣ ಮುಖ್ಯಪ್ರಾಣರ ಕ್ಷಮೆ ಕೇಳಲಿ

ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲಿಮರು ಕೊಟ್ಟದ್ದು ಎಂದು ಮಿಥುನ್ ರೈ ಹೇಳಿಕೆ ಅತ್ಯಂತ ಬಾಲಿಶವಾಗಿದೆ.

ಸುಳ್ಳು ಹೇಳೋದಕ್ಕೂ ಒಂದು ಸಾಕ್ಷಿ ಇರಬೇಕು. ಜ್ಯೋತಿಷಿ ಅಮ್ಮಣ್ಣರಾಯರ ಪ್ರಕಾರ ಏಳನೆಯ ಶತಮಾನದಲ್ಲಿ ಅರಬ್ ರಾಷ್ಟ್ರದಲ್ಲಿ ಇಸ್ಲಾಂ ಮತ ಶುರುವಾಯ್ತು.13ನೇ ಶತಮಾನದಲ್ಲಿ ಕೃಷ್ಣ ಮಠವನ್ನು ಸ್ಥಾಪಿಸಲಾಯ್ತು. ಕೇವಲ ಆರುನೂರು ವರ್ಷಗಳಲ್ಲಿ ಮುಸ್ಲಿಮರು ಅದರಲ್ಲೂ ಉಡುಪಿಗೆ ಬಂದು ಜಾಗ ಮಾಡಿದರೋ? ಅರ್ಥ ಇಲ್ಲದ ಮಾತನ್ನು ಆಡಬಾರದು. ಅನಂತೇಶ್ವರವು ಎಷ್ಟು ವರ್ಷ ಹಳೆಯದ್ದೋ ಗೊತ್ತಿಲ್ಲ. 9ನೇ ಶತಮಾನದಲ್ಲಿ ಅನಂತೆಶ್ವರ ದೇವಸ್ಥಾನ ಪುನರ್ನಿಮಾಣ ಆಗಿದೆ ಎಂಬುದು ಇತಿಹಾಸವಿದೆ. ಅಂತಹ ದೇವಸ್ಥಾನದ ಸಮೀಪವೇ ಮುಸ್ಲಿಮರು ಜಾಗ ಮಾಡಿದ್ರಾ? ಏನು ಮಾತನಾಡ್ತಾರೆ ಮಿಥುನ್ ರವರು? ಕೇವಲ ರಾಜಕೀಯಕ್ಕಾಗಿ ಧರ್ಮದ ಒಳಗೆ ಕಂದಕವನ್ನು ಸೃಷ್ಟಿಸುವ ಇಂತಹ ನಾಯಕರನ್ನು ರಾಜಕೀಯೇತರವಾಗಿ ಹಿಂದೂ ಸಮಾಜ ದೂರವಿಡಬೇಕಾಗಿದೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಅದರದೇ ಆದ ಇತಿಹಾಸವಿದೆ ಐತಿಹ ಇದೆ, ವಿಶ್ವದಲ್ಲೇ ಅತ್ಯಂತ ಹೆಚ್ಚು ಆರಾಧನೆ ಮಾಡುವ ದೇವರೆಂದರೆ ಅದು ಉಡುಪಿಯ ಶ್ರೀ ಕೃಷ್ಣ. ಇಷ್ಟಾಗಿಯೂ ಉಡುಪಿಯ ಶ್ರೀ ಕೃಷ್ಣನ ಜಾಗದ ವಿಚಾರದಲ್ಲಿ ಮಿಥುನ್ ರೈ ಎತ್ತಿದ ವಿಷಯ ನಿಜಕ್ಕೂ ಅವರ ಮತೀಯ ಬುದ್ಧಿ ಬ್ರಮಣೆಗೆ ಸಾಕ್ಷಿಯಾಗಿದೆ.

ವಿಜಯನಗರ ಸಾಮಂತ ರಾಮಭೋಜ ಅರಸ ಅನಂತೇಶ್ವರ ದೇವಸ್ಥಾನಕ್ಕೆ ಉಂಬಳಿ ನೀಡಿದ ಜಾಗದಲ್ಲಿ ಉಡುಪಿ ಶ್ರೀಕೃಷ್ಣ ಮಠ ನಿರ್ಮಿಸಲಾಯಿತು ಎಂಬುದು ಶ್ರೀಕೃಷ್ಣ ಮಠದಲ್ಲಿ ಶಿಲಾಶಾಸನಗಳಿವೆ, ಮಧ್ವಸರೋವರದಲ್ಲಿ 9 ಶಾಸನಗಳಿವೆ. ಜಾಗ ಅನ್ಯ ಧರ್ಮೀಯರು ಕೊಟ್ಟಿದ್ದಾರೆ ಎಂದು ರೋಧಿಸುವವರು ಶಾಸನಗಳನ್ನು ಇತಿಹಾಸ ತಜ್ಞ ಪ್ರಾಜ್ಞರಿಂದ ಓದಿಸಿಕೊಳ್ಳಬಹುದು. ಬ್ರಿಟಿಷರು ಬಂದ ಬಳಿಕ ಮದ್ರಾಸ್‌ ಪ್ರಾಂತ್ಯ ಆಡಳಿತದ ಸಂದರ್ಭ ಇದು ಶ್ರೀಕೃಷ್ಣ ಮಠಕ್ಕೆ ಸೇರಿದೆ ಎನ್ನುವುದಕ್ಕೆ ಲಿಖಿತ ದಾಖಲೆಗಳೂ ಇದೆ. ಶಿಲಾಶಾಸನ, ದಾಖಲೆ, ಐತಿಹ್ಯಗಳ ಆಧರಿಸಿ ಮಾಧ್ವ ವಿದ್ವಾಂಸರು ಹೇಳುವಂತೆ.

ಇದು ಕುಂಜರ ವಂಶದ ಕುಂಜಿತ್ತಾಯರ ಮನೆತನಕ್ಕೆ ಸೇರಿದ ಜಾಗ. ರಾಜನ ಕುದುರೆಗಾಡಿ ಅಡಿಗೆ ಹಾವು ಬಿದ್ದು ಸತ್ತಾಗ ರಾಜ ಕುಂಜಿತ್ತಾಯರ ಬಳಿ ಬಂದರು. ಪಾಪ ಪ್ರಾಯಶ್ಚಿತ್ತಕ್ಕಾಗಿ ಉಡುಪಿಯಲ್ಲಿ ನಾಲ್ಕು ಸ್ಕಂದಾಲಯ, ನಾಲ್ಕು ದುರ್ಗಾಲಯ ಮಾಡಿಸುತ್ತಾರೆ.

ಉಡುಪಿಯಿಂದ ಸುಳ್ಯ, ಸುಬ್ರಹ್ಮಣ್ಯವರೆಗೆ ದೇವಸ್ಥಾನ ನಿರ್ಮಿಸಲು ಕುಂಜಿತ್ತಾಯ ವಂಶಸ್ಥರಿಗೆ ಅವಕಾಶವನ್ನು ನೀಡಲಾಗಿತ್ತು. ಇಷ್ಟೆಲ್ಲ ದಾಖಲೆಗಳಿದ್ದರೂ ಮಿಥುನ್ ರವರು, ಅವರಿಗೆ ಕೇವಲ ರಾಜಕೀಯ ಉದ್ದೇಶಕ್ಕೆ ಹಾಗೂ ರಾಜಕೀಯವಾಗಿ ಬೆಳೆಯಲು ಜಗದ್ದೋರಾಕ ಶ್ರೀ ಕೃಷ್ಣ ಮಠದ ಇತಿಹಾಸ ಗೊತ್ತಿಲ್ಲದೆ ಹಿಂದುಗಳಲ್ಲಿಯೇ ಶ್ರೀ ಕೃಷ್ಣ ಮಠದ ಬಗ್ಗೆ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿರುವುದು ಉಡುಪಿ ಜಿಲ್ಲಾ ಶ್ರೀರಾಮಸೇನೆ ತೀವ್ರವಾಗಿ ಖಂಡಿಸುತ್ತದೆ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಕ್ಷಮೆಯಾಚಿಸಬೇಕೆಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

10 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

10 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago